ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದ ಗಾಲಿ ಜನಾರ್ದನ ರೆಡ್ಡಿ ದಂಪತಿಗಳು

ಗೆದ್ದರೆ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಗಾರ್ಮೆಂಟ್ ಫ್ಯಾಕ್ಟರಿ

Team Udayavani, Mar 19, 2023, 7:12 PM IST

1-zcds-sdadsa

ಗಂಗಾವತಿ: ವಿರೂಪಾಪೂರ ತಾಂಡದ ಇಬ್ಬರು ಅನಾಥ ಮಕ್ಕಳಿಗೆ ಶಿಕ್ಷಣ ವಸತಿ ವ್ಯವಸ್ಥೆ ಕಲ್ಪಿಸಲು ದತ್ತು ಪಡೆದಿದ್ದು ಅವರ ಭವಿಷ್ಯ ರೂಪಿಸಲಾಗುತ್ತದೆ. ಇದುವರೆಗೂ ಗಂಗಾವತಿ ಮತ ಕ್ಷೇತ್ರದಲ್ಲಿ ಈಗಾಗಲೇ ಇಕ್ಬಾಲ್ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿಯವರಿಗೆ ಎರಡೆರಡು ಅವಕಾಶವನ್ನು ನೀಡಲಾಗಿದೆ. ತಮಗೂ ಒಂದು ಅವಕಾಶ ನೀಡಿದರೆ ಮಹಿಳಾ ಉದ್ಯೋಗಕ್ಕಾ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆ ಸೇರಿ ಗಂಗಾವತಿಯ ಚಿತ್ರಣವನ್ನು ಮುಂಬೈ ನಂತೆ ಮಾರ್ಪಾಡು ಮಾಡುವುದಾಗಿ ಕೆಆರ್‌ಪಿ ಪಾರ್ಟಿ ಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ವಿರೂಪಾಪೂರ ತಾಂಡದಲ್ಲಿ ಕೆಆರ್‌ಪಿ ಪಾರ್ಟಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಗಂಗಾವತಿಯಲ್ಲಿ ಭತ್ತದ ಬೆಳೆಯು ವಿಪರೀತ ಹಾನಿಯಾಗುತ್ತಿದ್ದು ಮೊದಲಿನಂತೆ ರೈತರಿಗೆ ರೈಸ್ ಮಿಲ್ ಮಾಲೀಕರೂ ಸೇರಿ ಗಂಜ್ ವ್ಯಾಪಾರಿಗಳಿಗೆ ಸರಿಯಾದ ವ್ಯಾಪಾರ ವ್ಯವಹಾರವಿಲ್ಲ. ಗಂಗಾವತಿಯ ಭಾಗದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಿ ಪ್ರವಾಸೋದ್ಯಮವನ್ನು ಬೆಳೆಸುವ ಮೂಲಕ ಪ್ರಗತಿ ಸಾಧಿಸಬಹುದಾಗಿದೆ. ಇದಕ್ಕಾಗಿ ಅಂಜನಾದ್ರಿ ಹಾಗೂ ಸುತ್ತಲಿನ ಪ್ರದೇಶವನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲು 5 ಸಾವಿರ ಕೋಟಿ ರೂ.ಗಳನ್ನು ಸರಕಾರದಿಂದ ಮಂಜೂರಿ ಮಾಡಿಸಲಾಗುತ್ತದೆ. ಹೊಸಪೇಟೆ ಗಂಗಾವತಿ ಪ್ರವಾಸೋದ್ಯಮ ಜೋಡಣೆಗೆ ವರ್ತೂಲ ರಸ್ತೆಗಳ ನಿರ್ಮಾಣ, ಪ್ರತಿ ವಾರ್ಡು ಮತ್ತು ಗ್ರಾಮಗಳಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಜನಸಾಮಾನ್ಯರಿಗೆ ಕೂಲಿಕಾರ್ಮಿಕರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸುವ ಕನಸು ಹೊಂದಿದ್ದು ಗಂಗಾವತಿ ಕ್ಷೇತ್ರದ ಜನರು ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ಇಬ್ಬರು ಮಕ್ಕಳ ದತ್ತು: ವಿರೂಪಾಪೂರ ತಾಂಡದಲ್ಲಿ ಅನಾರೋಗ್ಯದಿಂದ ಮೃತ ಲಂಬಾಣಿ ಮಹಿಳೆ ಶ್ರೀದೇವಿ ಅವರ ಮಕ್ಕಳಾದ ಸ್ವರೂಪ್ ಮತ್ತು ವೇಣು ಎನ್ನುವವರಿಗೆ ಶಿಕ್ಷಣ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಅವರ ಕುಟುಂಬದ ಹಿರಿಯರ ಜತೆ ಮಾತನಾಡಿ ದತ್ತು ಪಡೆದು ಆರ್ಥಿಕ ನೆರವು ನೀಡಲಾಗುವುದು. ಈಗಾಗಲೇ 6 ತಿಂಗಳ ಹಿಂದೆ ಮಕ್ಕಳಿಗೆ ನೆರವು ನೀಡುತ್ತಿದ್ದು ಎಲ್ಲಿಯೂ ಹೇಳದಂತೆ ಮನವಿ ಮಾಡಿದರೂ ಅವರ ಕುಟುಂಬದವರು ಬಹಿರಂಗ ಪಡಿಸುವಂತೆ ಕೋರಿದ್ದರಿಂದ ಇಂದು ನನ್ನ ಪತ್ನಿ ಅರುಣಾ ಲಕ್ಷ್ಮಿ ಲಂಬಾಣಿ ವೇಷದಲ್ಲಿ ಮಕ್ಕಳ ಜತೆ ಇದ್ದಾರೆಂದರು.

ಹಿರೇಜಂತಗಲ್, ನೀಲಕಂಠೇಶ್ವರ ಕ್ಯಾಂಪ್ ಸೇರಿ ವಿವಿಧ ವಾರ್ಡುಗಳಲ್ಲಿ ಸಮಾವೇಶ ಮಾಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ನಿ ಅರುಣಾ ಲಕ್ಷ್ಮೀ , ಕೆಆರ್‌ಪಿ ಪಾರ್ಟಿಯ ಜಿಲ್ಲಾಧ್ಯಕ್ಷ ಎ.ಮನೋಹರಗೌಡ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಅಮರಜ್ಯೋತಿ ನರಸಪ್ಪ, ಈ.ರಾಮಕೃಷ್ಣ, ಹೊಸಮಲಿ ರಮೇಶ ನಾಯಕ, ಯಮನೂರ ಚೌಡ್ಕಿ, ರಾಮನಾಯಕ್, ಐಲಿ ಚಂದ್ರಪ್ಪ,. ಐಲಿ ನಾರಾಯಣಪ್ಪ, ಪೊಲಕಾಲ್ ಗಾಳಿನಾಥ, ಐಲಿ ಶಂಕರ್, ಸತೀಶ ದಂಡಿನ್ ಸೇರಿ ಅನೇಕರಿದ್ದರು.

ಲಂಬಾಣಿ ಉಡುಗೆಯಲ್ಲಿಗಮನ ಸೆಳೆದ ಅರುಣಾ
ನಗರದ ವಿರೂಪಾಪೂರ ತಾಂಡದಲ್ಲಿ ಕೆಆರ್‌ಪಿ ಪಾರ್ಟಿ ಸಮಾವೇಶದಲ್ಲಿ ಗಾಲಿ ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಯವರು ಲಂಬಾಣಿ ಸಂಪ್ರದಾಯ ವೇಷ ಧರಿಸುವ ಮೂಲಕ ಗಮನ ಸೆಳೆದರು. ಲಂಬಾಣಿ ತಾಂಡದ ಮಹಿಳೆಯರ ಜತೆ ಫೋಟೋ ತೆಗೆಸಿಕೊಂಡರು. ನಂತರ ಲಂಬಾಣಿ ಭಾಷೆಯಲ್ಲಿ ಮಾತನಾಡಿ, ನನ್ನ ಪತಿ ಗಾಲಿ ಜನಾರ್ದನರೆಡ್ಡಿಯವರು ಯಾವುದೇ ತಪ್ಪು ಮಾಡಿಲ್ಲ. ಷಡ್ಯಂತ್ರ ನಡೆಸಿ ಕೇಸ್‌ಗಳಲ್ಲಿ ಸಿಲುಕಿಸಿದ್ದಾರೆ. ದೇವರ ದಯೆಯಿಂದ ಜೀವಂತ ಇದ್ದಾರೆ. ಗಂಗಾವತಿಯ ತಂದೆ ತಾಯಿಂದಿರು ಅವರನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದರೆ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನಮ್ಮ ಇಡೀ ಕುಟುಂಬ ಶ್ರಮಿಸಲಿದೆ ಎಂದರು.

ಟಾಪ್ ನ್ಯೂಸ್

Heavy-rain

Heavy Rain: ಕರಾವಳಿ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ

1-aaaa

Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

Ramanivas Rawat took oath as minister twice within 15 minutes

Bhopal; 15 ನಿಮಿಷದೊಳಗೆ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಮನಿವಾಸ್ ರಾವತ್

Rain Heavy

Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-asaas

Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್

Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!

Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?

ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

Karadi sanganna

Mining; ಸಂಡೂರ ಪ್ರದೇಶದಲ್ಲಿ ಗಣಿಗಾರಿಕೆಗೆ ನಮ್ಮ ವಿರೋಧವಿದೆ: ಕರಡಿ ಸಂಗಣ್ಣ

3-kushtagi

Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Davanagere; ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹರಿಹರ ನಗರಸಭೆ ಪೌರಾಯುಕ್ತ

Davanagere; ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹರಿಹರ ನಗರಸಭೆ ಪೌರಾಯುಕ್ತ

ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

TOOFAAN

Toofaan; ಭರವಸೆ ಮೂಡಿಸಿದ ತೂಫಾನ್‌ ನೋಟ

Heavy-rain

Heavy Rain: ಕರಾವಳಿ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ

1-aaaa

Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.