ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !

ದನವನ್ನೇ ಕರ್ಕೊಂಡು ಬನ್ನಿ ಎಂದರೆ ಕಷ್ಟ ಸಾಹೇಬ್ರೇ ಎಂದನಂತೆ

Team Udayavani, Mar 20, 2023, 6:05 PM IST

ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !

ಸಾಹೇಬ್ರು ಈಗ ಸಿಕ್ಕಾಪಟ್ಟೆ ಬ್ಯುಸಿ. ಸದ್ಯ ಇನ್ನು ಮೂರು ತಿಂಗಳು ವಾಕಿಂಗ್‌, ಜಿಮ್‌ ಅಥವಾ ವ್ಯಾಯಾಮ ಯಾವುದಕ್ಕೂ ಸಮಯವಿಲ್ಲ. ಎಲ್ಲದಕ್ಕೂ ರಜೆ ಹೇಳಿದ್ದಾರೆ. ಈಗ 24ಗಿ7 ಚುನಾವಣೆ.. ಚುನಾವಣೆ..ಚುನಾವಣೆ.

ಬೆಳ್ಳಂ ಬೆಳಗ್ಗೆ 5.30ರಿಂದಲೇ ಕಾರ್ಯಾಚರಣೆ ಆರಂಭ. “ಸಾಹೇಬ್ರ ಕಚೇರಿ’ ಆ ಹೊತ್ತಿಗೇ ಕಾರ್ಯಾಚರಿಸ ತೊಡಗುತ್ತದೆ. ನಿತ್ಯವೂ ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವ ಮತದಾರರಿಗೆ ಸಾಹೇಬ್ರ ಕಚೇರಿಯಲ್ಲಿ ಬೆಳಕಿರುವುದು ಕಂಡು ಅಚ್ಚರಿ. “ಸಾಹೇಬ್ರು ಸಿಕ್ಕಾಪಟ್ಟೆ ಹಾರ್ಡ್‌ ವರ್ಕ್‌ ಮಾಡ್ತಾರೆ. ಮಾಡಲಿ, ಐದು ವರ್ಷಕ್ಕೊಮ್ಮೆಯಾದರೂ’ ಎಂದು ತಿಳಿ ಹಾಸ್ಯದ ಜೋಕ್‌ ಕಟ್‌ ಮಾಡಿ ಮುಂದುವರಿಯುತ್ತಾರೆ.

ಸದಾ ಸಾಹೇಬ್ರ ಕಚೇರಿ ಸಾರ್ವಜನಿಕರಿಗೆ, ಮತದಾರರಿಗೆ ತೆರೆದಿರುತ್ತದೆ. ಮಧ್ಯರಾತ್ರಿಯಲ್ಲಿ ಬಂದು, ಸಾಹೇಬ್ರೇ ಎಂದು ಸಣ್ಣಗೆ ಕೂಗಿದರೂ “ಬಂದೆ ಮಹಾಸ್ವಾಮಿಗಳೇ..’ ಎನ್ನುವ ಉತ್ತರ ಸಿಗುತ್ತದೆ. ದೇವಸ್ಥಾನಗಳಲ್ಲೂ ಇಂತಿಷ್ಟು ಅಂತ ಸಮಯ ಇದೆ. ಆದರೆ ನಮ್ಮ ಸಾಹೇಬ್ರ ದೇಗುಲಕ್ಕೆ (ಸರಕಾರಿ ಕೆಲಸವೇ ದೇವರ ಕೆಲಸ ಎಂದು ಬಗೆಯುವ ಪರಂಪರೆ ಯವರು) ಈ ಮೂರ್‍ನಾಲ್ಕು ತಿಂಗಳಿಗೆ ಇದೆಲ್ಲ ಅನ್ವಯವಾಗುವುದಿಲ್ಲ.

ಮೊನ್ನೆಯೊಂದು ಹಳ್ಳಿಯಲ್ಲಿ ನಡೆದ ಘಟನೆ. ಸಾಹೇಬ್ರು ಇರುವ ಹಳ್ಳಿಯಲ್ಲಿ ಮತದಾರನೊಬ್ಬನ ಮನೆಯಲ್ಲಿ ಮಧ್ಯರಾತ್ರಿ ಎನ್ನುವಾಗ ಹಸುವಿಗೆ ಹೊಟ್ಟೆನೋವು ಕಾಣಿಸಿಕೊಂಡತಂತೆ. ಏನು ಮಾಡಲಿಕ್ಕೂ ತೋಚದೆ ಮತದಾರ ಓಡಿ (ಸಾಹೇಬ್ರ ಕಚೇರಿ ತೆಗೆದಿರಬಹುದೆಂದೆನಿಸಿ) ಬಂದು ಸಾಹೇಬ್ರೆ ಎಂದನಂತೆ. ಮರುಕ್ಷಣವೇ ಸಾಹೇಬ್ರು “ಏನಪ್ಪಾ ನಿನ್ನ ಕಷ್ಟ’ ಎಂದು ಹಾಜರು. ಎಲ್ಲ ಕೇಳಿಸಿಕೊಂಡವರು “ದನದ ಡಾಡ್ಟ್ರುಗೆ ಫೋನ್‌ ಮಾಡ್ತೀನಿ ಈಗಲೇ’ ಎಂದರಂತೆ. ಅದಕ್ಕೆ ಮತದಾರ, ಅವ್ರೇ ಬಂದ್ರೆ ಒಳ್ಳೆಯದು, ದನವನ್ನೇ ಕರ್ಕೊಂಡು ಬನ್ನಿ ಎಂದರೆ ಕಷ್ಟ ಸಾಹೇಬ್ರೇ ಎಂದನಂತೆ.ಅದಕ್ಕೆ ಸಾಹೇಬ್ರು ಉತ್ಸಾಹದಿಂದ, “ಅದಕ್ಕೇನಂತೆ, ನನ್ನ ಕಾರಿಲ್ಲವಾ?’ ಎಂದು ಮೊಬೈಲ್‌ನತ್ತ ಕಣ್ಣು ನೆಟ್ಟರಂತೆ. ಚುನಾವಣೆ ಸಮಯ ಒಂದು ಮತವೂ ಗೆಲ್ಲಿಸಬಹುದು, ಸೋಲಿಸಲೂ ಬಹುದು !
ಡಾ| ಗಂಪತಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.