ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

1978 ರಲ್ಲಿ ಮೊದಲ ಸಲ ಶಾಸಕನಾದೆ.... ತಾಯಿ ಎದೆ ಹಾಲು ವಿಷವಾಗಿದೆ...

Team Udayavani, Mar 31, 2023, 10:36 PM IST

1-qweqwwqe

ಹಾವೇರಿ:ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.ಹಾನಗಲ್ ಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ 76 ರ ಹರೆಯದ ಹಿರಿಯ ನಾಯಕ ಮನೋಹರ ತಹಶೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಏಪ್ರಿಲ್ 7 ರಂದು ಹಾನಗಲ್ ಪಟ್ಟಣಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದ್ದು ಈ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಇವತ್ತು ನನ್ನ ರಾಜಕೀಯ ತೀರ್ಮಾನದ ಎರಡನೇ ಘಟ್ಟ.1969ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಸ್ನೇಹಿತರು ಸೇರಿ ಅಂದು ಕಾಂಗ್ರೆಸ್ ಉಳಿವಿಗೆ ನಿರ್ಧಾರ ಮಾಡಿದ್ದೆ. ಎನ್ ಎಸ್ ಯುಐ ಮೂಲಕ ಕಾಂಗ್ರೆಸ್ ಗೆ ಬಂದೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಅಖಂಡ ಧಾರವಾಡ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷನಾಗಿ 11 ವರ್ಷ ಸೇವೆ ಮಾಡಿದ್ದೇನೆ. 1978 ರಲ್ಲಿ ಮೊದಲ ಸಲ ಶಾಸಕನಾದೆ. 1989 ರಲ್ಲಿ ಎರಡನೇ ಸಲ 1999ರಲ್ಲಿ ಮೂರನೇ ಸಲ,
2013 ರಲ್ಕಿ ನಾಲ್ಕನೇ ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಉಪ ಸಭಾಪತಿಯಾಗಿ, ಸಚಿವನಾಗಿ ಕೆಲಸ ಮಾಡಿದ್ದೆ, ಕಾಂಗ್ರೆಸ್ ನನ್ನ ತಾಯಿ ಇದ್ದಂಗೆ ತಾಯಿಗೆ ಎಂದು ದ್ರೋಹ ಮಾಡಬಾರದು ಎಂದುಕೊಂಡಿದ್ದೆ. ತಾಯಿ ಎದೆ ಹಾಲು ವಿಷ ಆದಾಗ ಮಗು ಬದುಕಲು ಸಾಧ್ಯವಿಲ್ಲ.ನಾನು ಶಾಸಕನಿದ್ದಾಗಲೇ, ದೂರದ ಹುಬ್ಬಳ್ಳಿಯಿಂದ ಬಂದವರಿಗೆ ಮಣೆ ಹಾಕಿದರು. ಹುಟ್ಟಿದ್ದು ಕಾಂಗ್ರೆಸ್ ನಲ್ಲಿ ಸಾಯೋದು ಕಾಂಗ್ರೆಸ್ ನಲ್ಲಿ ಅಂದುಕೊಂಡಿದ್ದೆ. ನನಗೆ ನೋವು ಕೊಟ್ಟರೂ ಪಕ್ಷಕ್ಕಾಗಿ ಕೆಲಸ ಮಾಡಿದೆ. ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಹೊರಗಿನವರು, ಒಳಗಿನವರು ಯಾರು ಇರಲಿಲ್ಲ.ಎಂಎಲ್ ಸಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು.ಸೂಟ್ ಕೇಸ್ ತಗೊಂಡು ಹಿಂದೆ ಸರದಿದ್ದಾರೆ ಎಂದು ಅಪಪ್ರಚಾರ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನನ್ನನ್ನ ಕೊಂಡುಕೊಳ್ಳುವ ಗಂಡಸು ಭೂಮಿಯ ಮೇಲೆ ಹುಟ್ಟಿಲ್ಲ.ಅವರಿಗೆ ತಾಕತ್ ಇದ್ದರೆ ನನ್ನನ್ನ ಸ್ಪರ್ಧೆ ಯಿಂದ ಹಿಂದೆ ಸರಿಸಲಿ.ನನಗಾದ ಅನ್ಯಾಯಕ್ಕೆ ಅಲ್ಲಿಂದ ಸಿಡಿದು ಹೊರ ಬಂದಿದ್ದೇನೆ. ಕೈ ಮುಗಿದು ಕಾಲಿಗೆ ಬಿದ್ದು ಟಿಕೆಟ್ ಕೇಳಿದೆ. ಅವರಿಗೆ ಕರುಣೆ ಇಲ್ಲ, ಹೃದಯ ಇಲ್ಲ, ಅವರ ಮನಸ್ಸು ಮರಗಲೆ ಇಲ್ಲ. ಇದು ನನ್ನ ಕೊನೆ ಚುನಾವಣೆ ಒಂದು ಅವಕಾಶ ಕೊಡಿ ಎಂದು ಕೇಳಿದೆ. ಗಲ್ಲಿಗೆ ಹಾಕುವವನಿಗೆ ಕೊನೆ ಆಸೆ ಏನು ಅಂತಾ ಕೇಳುತ್ತಾರೆ.ಆದರೆ ನನಗೆ ಹಾಗೂ ಕೇಳಲಿಲ್ಲ, ಸೌಜನ್ಯಕ್ಕೂ ಕೇಳಲಿಲ್ಲ. ಚೆಂಡಿಗೆ ಕೈ ಹಾಕಿ ಹೊರ ಹಾಕಿದರು. ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತೀದ್ದೇನೆ.

ನನ್ನ ಮುಂದೆ ಬಹಳಷ್ಟು ಪಕ್ಷಗಳಿದ್ದವು. ನೀವೆ ನನಗೆ ಸುಪ್ರೀಂ, ನೀವು ನನಗೆ ಬಿ ಫಾಮ್೯ ಕೊಡೊರು.ಪಕ್ಷೇತರ ಯಾಕಾಗಬಾರದು ಎನ್ನುವ ಚಿಂತನೆ ಬಂತು. ಆಗ ನಾನು ಒಂಟಿ ಸಿಪಾಯಿ ಆಗುತ್ತೇನೆ. ಪಕ್ಷೇತರ ಬೇಡ, ಪಕ್ಷದಿಂದ ನಿಲ್ಲುವ ತೀರ್ಮಾನ ಮಾಡಿದೆವು. ಜೆಡಿಎಸ್ ಆಯ್ಕೆ ಮಾಡಿದ್ರೆ ಒಳ್ಳೆಯದು ಅಂತ ಹೇಳಿದರು. ಏಪ್ರಿಲ್ 7 ರಂದು ಪಂಚರತ್ನ ಯಾತ್ರೆ ಹಾನಗಲ್ ಗೆ ಬರುತ್ತದೆ.ನೀವು ಒಪ್ಪಿಗೆ ಕೊಟ್ಟರೆ, ನಾವು ನೀವು ಸೇರಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಏಪ್ರಿಲ್ 7 ಕ್ಕೆ ಪಂಚರತ್ನ ಯಾತ್ರೆ ಸ್ವಾಗತಿಸೋಣ. ಅಂದು ಎಲ್ಲರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಮತ್ತೆ ಶಾಸಕನಾಗುವ ಹುಚ್ಚು ನನ್ನಲ್ಲಿ ಇರಲಿಲ್ಲ. ಸ್ವಾಭಿಮಾನಕ್ಕಾಗಿ ನಿಂತಿದ್ದೇನೆ, ತಾಲೂಕಿನವರೇ ಮುಂದಿನ‌ ಶಾಸಕರಾಗಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri-Die

Haveri: ಡಾಬಾ ಬಂದಾಗ ದಿಢೀರ್‌ ಎಂದು ಕಣ್ಣು ಬಿಟ್ಟ ವ್ಯಕ್ತಿ ನಿಧನ!

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

12-haveri

Haveri: ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲು’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.