ಕುಂದಾಪುರ: ಉಪ ನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳಿಲ್ಲ

ಲೋಕಾಯುಕ್ತ ದಾಳಿ ಆದರೆ ಅವರಿಗೆ ಏನೆಂದು ಉತ್ತರಿಸಬೇಕೆಂದು ಭಯದಲ್ಲಿದ್ದಾರೆ ಇಲಾಖೆಯವರು.

Team Udayavani, Apr 4, 2023, 6:37 PM IST

ಕುಂದಾಪುರ:ಉಪ ನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳಿಲ್ಲ

ಕುಂದಾಪುರ: ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳಿಲ್ಲ. ಇದರಿಂದಾಗಿ ಅಮೂಲ್ಯ ದಾಖಲೆಗಳನ್ನು ಕಚೇರಿಯ ಹೊರಗೆ ನೀಡಬೇಕಾದ ಸ್ಥಿತಿ ಬಂದಿದೆ. ಕಚೇರಿಯಲ್ಲಿ ಇಲಾಖಾ ಝೆರಾಕ್ಸ್‌ ಯಂತ್ರಗಳಿಲ್ಲ. ಇದರಿಂದಾಗಿ ಇಲಾಖೆಗೆ ಅವಶ್ಯವಿರುವ ದಾಖಲೆಗಳು, ಸಾರ್ವಜನಿಕರು ಬಯಸುವ ದಾಖಲೆಗಳು, ಕಡತಗಳಿಗೆ ಬೇಕಾದ ದಾಖಲೆಗಳನ್ನು ನಕಲು ತೆಗೆಯಬೇಕಾದರೆ ಖಾಸಗಿ ಅಂಗಡಿಗೆ ಕಳುಹಿಸಬೇಕು.

ಬ್ರಿಟಿಷ್‌ ಕಾಲದ ಕಡತಗಳೂ ಇಲ್ಲಿದ್ದು , ಕುಂದಾಪುರ ಉಪವಿಭಾಗ ಬ್ರಿಟಿಷ್‌ ಕಾಲದಿಂದಲೂ ಇದ್ದುದರಿಂದ ಹಳೆಯ ಕಾಲದ ದಾಖಲೆಗಳಿವೆ. ಈ ದಾಖಲೆಗಳು ವರ್ಷಾನುಗಟ್ಟಲೆ ಹಳೆಯ ಕಾಗದಗಳಾದ ಕಾರಣ ಅಚೀಚೆ ಕೊಂಡೊಯ್ಯುವಾಗ ಶಿಥಿಲವಾಗುತ್ತವೆ.

ಇದರಿಂದಾಗಿ ಕಡತಗಳೇ ನಾಶವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಖಾಸಗಿಯಲ್ಲಿ ದಾಖಲೆಗಳು ವ್ಯತ್ಯಯವಾದರೆ, ಕಳೆದುಹೋದರೆ, ಯಾವುದೋ ಕಡತದ ದಾಖಲೆ ಯಾವುದೋ ಕಡತದ ಜತೆ ಸೇರಿಕೊಂಡರೆ ಆಗುವ ಅಧ್ವಾನಗಳಿಗೆ ಹೊಣೆ ಯಾರು. ಅಮೂಲ್ಯ ಸರಕಾರಿ ದಾಖಲೆಗಳು, ಸಾರ್ವಜನಿಕ ದಾಖಲೆಗಳು ನಾಶವಾಗುವ ಸಾಧ್ಯತೆಗಳಿವೆ.

ತಾ| ಕಚೇರಿಯಲ್ಲೂ ಸಮಸ್ಯೆಯಾಗಿತ್ತು
ಈ ಹಿಂದೆ ತಾಲೂಕು ಕಚೇರಿಯಲ್ಲಿ ಇದೇ ಸಮಸ್ಯೆ ಆಗಿತ್ತು. ಮೂರು ಯಂತ್ರಗಳು ಕೈಕೊಟ್ಟು ಸ್ತಬ್ಧವಾಗಿದ್ದವು. ಬಳಿಕ ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು. ಸಮಸ್ಯೆ ಸರಿಯಾಗಿತ್ತು. ಈಗ ಉಪನೋಂದಣಿ ಕಚೇರಿ ಸರದಿ.

ಅನುದಾನ ಇಲ್ಲ
ಉಪನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳು ಇಲ್ಲ ಎಂದು ಖಾಸಗಿ ಅಂಗಡಿಯಲ್ಲಿ ಝೆರಾಕ್ಸ್‌ ಮಾಡಿಸಬೇಕೆಂದು ಇಲಾಖೆಗೂ ತಿಳಿದಿದೆ. ಹಾಗಿದ್ದೂ ಝೆರಾಕ್ಸ್‌ಗಾಗಿ ಹಣ ಬಿಡುಗಡೆಯಾಗುವುದಿಲ್ಲ. ವರ್ಷಕ್ಕೆ ಲಕ್ಷಾಂತರ ರೂ. ಝೆರಾಕ್ಸ್‌ಗಾಗಿ ಎಲ್ಲಿಂದ ತರಬೇಕು ಎಂದು ಯಾರೂ ಉತ್ತರಿಸುವುದಿಲ್ಲ. ಇದಕ್ಕಾಗಿ ಗ್ರಾಹಕರಿಂದ ವಸೂಲಿ ಮಾಡಬೇಕೇ, ಅದಕ್ಕೆ ರಸೀದಿ ಕೊಡಬೇಕೇ, ಹಾಗೆ ಹಣ ಪಡೆದಾಗ ಲೋಕಾಯುಕ್ತ ದಾಳಿ ಆದರೆ ಅವರಿಗೆ ಏನೆಂದು ಉತ್ತರಿಸಬೇಕೆಂದು ಭಯದಲ್ಲಿದ್ದಾರೆ ಇಲಾಖೆಯವರು.

ಐಟಿ ಸಂಕಷ್ಟ
ಆದಾಯ ತೆರಿಗೆ ಇಲಾಖೆಯು ಯಾವುದೋ ಉದ್ದೇಶದಿಂದ ನಾಲ್ಕು ಗ್ರಾಮಗಳ ಮೂರು ವರ್ಷಗಳ ಭೂ ದಾಖಲಾತಿಯನ್ನು ಕೇಳಿದೆ. ಆದರೆ ಅದನ್ನು ಪ್ರತಿ ತೆಗೆದು ಕೊಡಲು ಇಲಾಖೆಯಲ್ಲಿ ಅನುದಾನ ಇಲ್ಲ. ಕುಂದಾಪುರ ಉಪನೋಂದಣಿ ಕಚೇರಿ ವ್ಯಾಪ್ತಿಯ ಹೊಸಾಡು, ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮದ, 1999 ಜ.1 ರಿಂದ ಇತ್ತಿಚೀನ ದಿನಾಂಕದವೆಗಿನ ಸ್ಥಿರಾಸ್ತಿ ಮಾರ್ಗಸೂಚಿ ದರಪಟ್ಟಿ , 1999ಜ.1ರಿಂದ 2002 ಡಿ.31ರ ವರೆಗಿನ ಸ್ಥಿರಾಸ್ತಿಯ ಕ್ರಯ ದಸ್ತಾವೇಜುಗಳ ನಕಲು ಪ್ರತಿಗಳನ್ನು ಆದಾಯ ತೆರಿಗೆ ಇಲಾಖೆ ಕೇಳಿದೆ.

ಪತ್ರ ಬರೆಯಲಾಗಿದೆ 
ಉಪನೋಂದಣಿ ಕಚೇರಿಗೆ ಒಂದು ಜೆರಾಕ್ಸ್‌ ಯಂತ್ರವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಈ ಕುರಿತಾಗಿ ಅನೇಕ ಪತ್ರ ವ್ಯವಹಾರಗಳನ್ನು ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಗೆ ಕಚೇರಿಯಿಂದ ಕ್ರಯ ದಸ್ತಾವೇಜುಗಳ ನಕಲು ಪ್ರತಿಗಳನ್ನು ನೀಡಲು ಅನುದಾನದ ಕೊರತೆ ಇರುವ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ.
-ಯೋಗೇಶ್‌, ಉಪನೋಂದಣಾಧಿಕಾರಿ, ಕುಂದಾಪುರ

ದುಬಾರಿ ಬಿಲ್‌
4 ಗ್ರಾಮಗಳ 1999ರಿಂದ ಇತ್ತೀಚಿನವರೆಗಿನ ಸ್ಥಿರಾಸ್ತಿ ಮಾರ್ಗಸೂಚಿ ದರ ಪಟ್ಟಿಯ ಸಾಫ್ಟ್‌ ಕಾಪಿಯನ್ನು ಈಗಾಗಲೇ ಇಮೈಲ್‌ ಮತ್ತು ಸಿ.ಡಿ. ಮೂಲಕ ಆದಾಯ ತೆರಿಗೆ ಇಲಾಖೆಗೆ ಕಳುಹಿಸಿದ್ದರೂ ಮಾಹಿತಿ ಕೇಳಿರುವ ಕ್ರಯ ದಸ್ತಾವೇಜುಗಳನ್ನು ಪಟ್ಟಿಮಾಡಿದಾಗ ಒಟ್ಟು 654 ದಸ್ತಾವೇಜುಗಳನ್ನು ನಕಲು ಮಾಡಿ ದೃಢೀಕರಿಸಿ ಪ್ರತಿ ನೀಡಬೇಕಾಗಿದೆ. ಆದರೆ ಈ ಕಚೇರಿಯಲ್ಲಿ ಜೆರಾಕ್ಸ್‌ ಯಂತ್ರ ಇಲ್ಲದೇ ಇರುವುದರಿಂದ ಹೊರಗೆ ಜೆರಾಕ್ಸ್‌ ಮಾಡಿಸುವುದಾದರೆ ಒಟ್ಟು 654 ದಸ್ತಾವೇಜುಗಳ ಸುಮಾರು 4,500 ಪುಟಗಳ ಎ3 ಪುಟ ಒಂದರ 12 ರೂ.ಯಂತೆ ಜೆರಾಕ್ಸ್‌ ವೆಚ್ಚವೇ 54 ಸಾವಿರ ರೂ. ಬರಲಿದೆ.

ಟಾಪ್ ನ್ಯೂಸ್

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.