![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 6, 2023, 9:17 AM IST
ಚೆನ್ನೈ: ಹಾವಿಗೆ ಹಿಂಸೆ ನೀಡಿದ ಆರೋಪದ ಮೇಲೆ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೈನೂರು ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ್ ಬಂಧಿತ ಆರೋಪಿಗಳು. ಆರೋಪಿಗಳು ಹಾವೊಂದನ್ನು ಹಿಡಿದು ಅದನ್ನು ಹಿಂಸಿಸಿ ಅದರ ಸಾವಿಗೆ ಕಾರಣರಾಗಿದ್ದಾರೆ.
ಯುವಕರು ಹಾವನ್ನು ಹಿಡಿದು, ಆರೋಪಿಗಳಲ್ಲಿ ಓರ್ವನಾಗಿರುವ ಮೋಹನ್ ಕೈಯಲ್ಲಿ ಹಾವು ಹಿಡಿದುಕೊಂಡಿದ್ದಾರೆ. ಹಾವು ಮೋಹನ್ ಕೈಗೆ ಕಚ್ಚಿದೆ. ಇದಕ್ಕೆ ಮೋಹನ್ ಹಾವು ನನ್ನ ಕೈಗೆ ಕಚ್ಚಿದೆ. ನಾನು ಅದರ ಸೇಡು ತೀರಿಸಿಕೊಳ್ಳಬೇಕೆಂದು ಹಾವಿನ ತಲೆ ಕಚ್ಚಿದ್ದಾನೆ. ಇತರರು ಹಾವನ್ನು ಬಿಡು ಎಂದಿದ್ದಾರೆ. ಆದರೆ ಮೋಹನ್ ಹಾವಿನ ತಲೆಯನ್ನು ಕಚ್ಚಿ, ಹಿಂಸಿಸಿ ಅದನ್ನು ಸಾಯಿಸಿದ್ದಾನೆ. ಹಾವು ನೋವಿನಲ್ಲಿ ಒದ್ದಾಟ ನಡೆಸಿದರೂ ಅದನ್ನು ನೋಡಿ ಸ್ನೇಹಿತರು ನಕ್ಕಿದ್ದಾರೆ.
ಈ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಮಾಡಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಇಲಾಖೆಯ ಪೊಲೀಸರು ಪ್ರಾಣಿ ಹಿಂಸೆ ಮತ್ತು ಕಾಡು ಪ್ರಾಣಿಯನ್ನು ಕೊಂದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.