ಹೊಸ ಸಿನಿಮಾದತ್ತ ಸುಬ್ರಮಣ್ಯ ಪ್ರಸಾದ
Team Udayavani, Apr 6, 2023, 4:44 PM IST
“ಕೊಡೆ ಮುರುಗ’ ಎಂಬ ಕಾಮಿಡಿ ಡ್ರಾಮಾ ಸಿನಿಮಾವನ್ನು ನಿರ್ದೇಶಿಸಿ, ಅದರಲ್ಲೊಂದು ಪ್ರಮುಖ ಪಾತ್ರ ಕೂಡಾ ಮಾಡಿದ್ದ ಸುಬ್ರಮಣ್ಯ ಪ್ರಸಾದ್ ಈಗ ಹೊಸ ಸಿನಿಮಾಕ್ಕೆ ಅಣಿಯಾಗಿದ್ದಾರೆ.
ಈಗಾಗಲೇ ಹೊಸ ಸಿನಿಮಾದ ಪೂರ್ವತಯಾರಿ ಜೋರಾಗಿ ನಡೆದಿದ್ದು, ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಬಾರಿಯೂ ನಿರ್ದೇಶನದ ಜೊತೆಗೆ ಸುಬ್ರಮಣ್ಯ ಪ್ರಸಾದ್ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಟ್ರೆಂಡ್ ನಡೆಯುತ್ತಿದ್ದು, ಸುಬ್ರಮಣ್ಯ ಪ್ರಸಾದ್ ಕೂಡಾ ಈ ಬಾರಿ ಕಂಟೆಂಟ್ ಆಧಾರಿತ ಸಿನಿಮಾದತ್ತ ಗಮನಹರಿಸಿದ್ದಾರೆ. “ಸಿನಿಮಾದ ಕಂಟೆಂಟ್ ಗಟ್ಟಿಯಾಗಿದ್ದರೆ ಸಿನಿಮಾವನ್ನು ಜನ ಇಷ್ಟಪಡುತ್ತಾರೆ. ಒಮ್ಮೆ ಜನ ಇಷ್ಟಪಟ್ಟರೆ ಮುಂದೆ ಸಿನಿಮಾ ಬೇರೆ ಮಟ್ಟಕ್ಕೆ ಸಾಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಆ ದೃಷ್ಟಿಯಿಂದ ನಾನು ಕೂಡಾ ಇವತ್ತಿನ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಪೂರ್ವತಯಾರಿ ನಡೆಯುತ್ತಿದೆ. ಒಂದಷ್ಟು ಹೊಸ ಪ್ರಯೋಗದೊಂದಿಗೆ ಸಿನಿಮಾವನ್ನು ಕಟ್ಟಿಕೊಡಬೇಕೆಂಬ ಆಸೆಯಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಸುಬ್ರಮಣ್ಯ ಪ್ರಸಾದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.