ಮಹಾನ್ ನಾಯಕರೊಬ್ಬರಿಂದ ನನಗೆ ಟಿಕೆಟ್ ತಪ್ಪಿದೆ: ಎಸ್.ಐ.ಚಿಕ್ಕನಗೌಡ
ಸಂದರ್ಭ ಬಂದರೆ ಕಾಂಗ್ರೆಸ್ ನಿಂದ ಯಾಕೆ ಸ್ಪರ್ಧೆ ಮಾಡಬಾರದು
Team Udayavani, Apr 12, 2023, 3:09 PM IST
ಹುಬ್ಬಳ್ಳಿ: ಸಂದರ್ಭ ಬಂದರೆ ಕಾಂಗ್ರೆಸ್ ನಿಂದ ಯಾಕೆ ಸ್ಪರ್ಧೆ ಮಾಡಬಾರದು. ಮಹಾನ್ ನಾಯಕರೊಬ್ಬರಿಂದ ನನಗೆ ಟಿಕೆಟ್ ತಪ್ಪಿದೆ, ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ತಿಳಿಸಿದರು.
ಅದರಗುಂಚಿಯಲ್ಲಿ ಬೆಂಬಲಿಗರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಸಮೀಕ್ಷೆಯಲ್ಲೂ ನನ್ನ ಹೆಸರು ಪ್ರಮುಖವಾಗಿದ್ದರೂ ಜಿಲ್ಲೆಯ ಮಹಾನ್ ನಾಕರೊಬ್ಬರಿಂದ ಟಿಕೆಟ್ ತಪ್ಪಿದೆ. ಈಗ ಟಿಕೆಟ್ ನೀಡಿದ ವ್ಯಕ್ತಿ ಬದಲು ಮಹಾನ್ ನಾಯಕರೆ ಬಂದು ಸ್ಪರ್ಧಿಸಬಹುದಾಗಿತ್ತು. ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಬಸವರಾಜ ಕುಂದಗೋಳ ಮಠ ಅವರಿಗೂ ಟಿಕೆಟ್ ನೀಡಿದರೆ ನಾನೆ ಖುಷಿಯಿಂದ ಹಿಂದೆ ಸರಿದು ಗೆಲುವಿಗೆ ಶ್ರಮಿಸುದ್ದೆ. ಟಿಕೆಟ್ ಖಚಿತ ಎಂದು ತಯಾರಿ ನಡೆಸಿದ್ದೆ.ಆದರೆ ನನ್ನ ವಿರುದ್ದ ಷಡ್ಯಂತ್ರ ನಡೆಸಿದರು.
ಇದನ್ನೂ ಓದಿ: ಕೈ ತಪ್ಪಿದ ಟಿಕೆಟ್: ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ ಅಭಿಮಾನಿಗಳ ಆಕ್ರೋಶ
ನನ್ನ ಸ್ಪರ್ಧೆ ಖಚಿತ ಇದರಲ್ಲಿ ಯಾವ ಬದಲಾವಣೆ ಇಲ್ಲ.ಪಕ್ಷ ಅಥವಾ ಪಕ್ಷೇತರವೋ ಎಂಬುದನ್ನು ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.
ಚಿಕ್ಕನಗೌಡ್ರ ಗೆ ಟಿಕೆಟ್ ತಪ್ಪಿದನ್ನು ಖಂಡಿಸಿ ಬೆಂಬಲಿಗರು ಹುಬ್ಬಳ್ಳಿ-ಲಕ್ಷ್ಮೇಶ್ವರ ಹೆದ್ದಾರಿ ತಡೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.