ಶ್ರೇಷ್ಠ ಉತ್ಪನ್ನ- ಶ್ರೇಷ್ಠ ಸೇವೆ: ಪ್ರದೀಪ್‌ ಕುಮಾರ್‌ ಕರೆ


Team Udayavani, Apr 13, 2023, 6:45 AM IST

ಶ್ರೇಷ್ಠ ಉತ್ಪನ್ನ- ಶ್ರೇಷ್ಠ ಸೇವೆ: ಪ್ರದೀಪ್‌ ಕುಮಾರ್‌ ಕರೆ

ಉಡುಪಿ: ಬ್ಯಾಂಕಿಂಗ್‌ ಸಂಸ್ಥೆಗಳು ಅತ್ಯುತ್ತಮ ಉತ್ಪನ್ನಗಳನ್ನು ಪರಿಚಯಿಸಿ ಅತ್ಯುತ್ತಮ ಸೇವೆಯನ್ನು ಗ್ರಾಹಕರಿಗೆ ನೀಡಬೇಕಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ.ಪ್ರದೀಪ್‌ಕುಮಾರ್‌ ಕರೆ ನೀಡಿದರು.

ಬುಧವಾರ ಅವರು ಅಂಬಾಗಿಲಿನಲ್ಲಿ ನಿರ್ಮಿಸಿದ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಮತ್ತು ಅಂಬಾಗಿಲು ಶಾಖೆಯ ಸ್ಥಳಾಂತರ, ಮಿನಿ ಇ – ಲಾಬಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಸ್ಪರ್ಧೆಯೂ ಉತ್ಪನ್ನಗಳೂ ಇಷ್ಟಿರಲಿಲ್ಲ. ಈಗ ಉತ್ಪನ್ನಗಳು ಹೆಚ್ಚಿಗೆ ಯಾಗಿವೆ. ಸೇವೆಯೂ ಅತ್ಯುತ್ತಮ ಮಟ್ಟದಲ್ಲಿರಬೇಕು. ತಂತ್ರಜ್ಞಾನದ ಬೆಳವಣಿಗೆಯನ್ನು ಸಮರ್ಥವಾಗಿ ಬಳಸಿ ಸಂಸ್ಥೆಯನ್ನು ಬಲಪಡಿಸಬೇಕು ಎಂದವರು ಹೇಳಿದರು.

ಭಾವನಾತ್ಮಕ ಸಂಬಂಧ: ವಿನಯ ಹೆಗ್ಡೆ 
ಇದುವರೆಗೆ ಕರ್ಣಾಟಕ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸದಿದ್ದರೂ ನಾನು ವ್ಯಕ್ತಿಗತವಾಗಿ ಮೆಚ್ಚಿಕೊಂಡ ಬ್ಯಾಂಕ್‌ ಆಗಿದೆ. ನನ್ನ ತಂದೆಯವರಿಗೂ, ಬ್ಯಾಂಕ್‌ನ ರೂವಾರಿ ಕೆ.ಎಸ್‌.ಎನ್‌.
ಅಡಿಗರಿಗೂ ಉತ್ತಮ ಬಾಂಧವ್ಯವಿತ್ತು. ಹೀಗಾಗಿ ನನಗೆ ಭಾವನಾತ್ಮಕ ಸಂಬಂಧ ವಿದೆ ಎಂದು ನೂತನ ಕಟ್ಟಡ ಉದ್ಘಾಟಿಸಿದ ನಿಟ್ಟೆ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ರಾದ ನಿಟ್ಟೆ ವಿ.ವಿ. ಕುಲಪತಿ ಎನ್‌.ವಿನಯ ಹೆಗ್ಡೆ ಬೆಟ್ಟು ಮಾಡಿದರು.

ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ರಾಜಗೋಪಾಲ ಬಿ. ಸ್ವಾಗತಿಸಿ, ಕಾರ್ಯನಿರ್ವಾಹಕ ನಿರ್ದೇಶಕ ಶೇಖರ ರಾವ್‌ ವಂದಿಸಿದರು. ಕುಂಜಿಬೆಟ್ಟು ಶಾಖೆಯ ಎಬಿಎಂ ಭಾಗ್ಯಶ್ರೀ ಬಿ.ಎಸ್‌. ಕಾರ್ಯಕ್ರಮ ನಿರ್ವಹಿಸಿದರು. ಅಂಬಾಗಿಲು ಶಾಖೆಯ ಹಿರಿಯ ಪ್ರಬಂಧಕ ಶಶಿಕಾಂತ್‌ ಎಂ. ಬಂಗೇರ ಸಹಕರಿಸಿದರು. ಬ್ಯಾಂಕ್‌ನ ಶತಮಾನೋತ್ಸವದ ಅಂಗವಾಗಿ 100 ಹಿರಿಯ ಗ್ರಾಹಕರನ್ನು ಅಭಿನಂದಿಸಲಾಯಿತು.

ಬ್ಯಾಂಕ್‌ನ ಮಾಜಿ ಅಧ್ಯಕ್ಷ ಜಯರಾಮ ಭಟ್‌, ಗಣ್ಯರಾದ ಡಾ| ಜಿ. ಶಂಕರ್‌, ಆನಂದ ಕುಂದರ್‌, ಹರಿಯಪ್ಪ ಕೋಟ್ಯಾನ್‌, ಜೆರ್ರಿ ವಿನ್ಸೆಂಟ್‌ ಡಾಯಸ್‌ ಹಾಗೂ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಉಡುಪಿ ರಾಮ ರಾವ್‌ ಕನಸಿನ ಕೂಸು
ಕರ್ಣಾಟಕ ಬ್ಯಾಂಕ್‌ಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಮದ್ರಾಸ್‌ ಪ್ರಾಂತದ ಶಾಸಕರಾಗಿದ್ದ ಉಡುಪಿ ಮೂಲದ ಡಾ|ಯು. ರಾಮ ರಾವ್‌ ಅವರ ಕನಸಿನ ಕೂಸು ಕರ್ಣಾಟಕ ಬ್ಯಾಂಕ್‌. ಬ್ಯಾಂಕ್‌ನ ಮೂರನೆಯ ಶಾಖೆ ಆರಂಭವಾದದ್ದು ಉಡುಪಿ ರಥಬೀದಿಯಲ್ಲಿ. ಶ್ರೀಕೃಷ್ಣಮಠ- ಅಷ್ಟಮಠಗಳ ಆಶೀರ್ವಾದದಿಂದ ಬ್ಯಾಂಕ್‌ ಬೆಳೆದುಬಂದಿದೆ ಎಂದು ಅಂಬಾಗಿಲು ಶಾಖೆಯ ನೂತನ ಪ್ರಾಂಗಣ ಮತ್ತು ಮಿನಿ ಇ – ಲಾಬಿಯನ್ನು ಉದ್ಘಾಟಿಸಿದ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್‌. ಹೇಳಿದರು.

ನಿರ್ದೇಶಕ ಮಂಡಳಿ-ಮೂರು ತಲೆಮಾರು
ಕುಂದಾಪುರ ತಾಲೂಕಿನ ಹಲ್ಸನಾಡು ರಾವ್‌ ಮತ್ತು ಕಕ್ಕುಂಜೆ ಅಡಿಗರ ಮನೆತನದವರ ಮೂರು ತಲೆಮಾರುಗಳ ಸದಸ್ಯರು ಬ್ಯಾಂಕ್‌ನ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಮಹಾಬಲೇಶ್ವರ ಉಲ್ಲೇಖೀಸಿದರು.

ಎನ್‌ಪಿಎ ದಿನವಾಗಿ ಎಂಡಿ ಜನ್ಮದಿನ
ಬ್ಯಾಂಕ್‌ನಲ್ಲಿ 5 ಲಕ್ಷ ಸಾಲದ ಖಾತೆಗಳಿವೆ. ಮಂಗಳವಾರವನ್ನು ಶೂನ್ಯ ಎನ್‌ಪಿಎ (ನಾನ್‌ಪರ್ಫಾಮಿಂಗ್‌ ಅಸೆಟ್‌) ದಿನವಾಗಿ ಸಿಬಂದಿ ಆಚರಿಸಿ ನನ್ನ ಹುಟ್ಟುಹಬ್ಬಕ್ಕೆ ಕೊಡುಗೆ ನೀಡಿದರು ಎಂದು ಮಹಾಬಲೇಶ್ವರ ಮೆಚ್ಚುಗೆ ಸೂಚಿಸಿದರು.

ಟಾಪ್ ನ್ಯೂಸ್

IFFI: ನವೆಂಬರ್ 20 ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

fraudd

Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

1

Manipal: ಹೊಟೇಲ್‌ ಮ್ಯಾನೇಜರ್‌ಗೆ ವಂಚಿಸಿದ ವೈಟರ್‌

3

Hiriydaka: ಅಕ್ರಮ ಮರಳುಗಾರಿಕೆ ಟಿಪ್ಪರ್‌ ಸಹಿತ ಇಬ್ಬರು ಆರೋಪಿಗಳು ವಶಕ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IFFI: ನವೆಂಬರ್ 20 ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.