Street Food: 30 ರೂಪಾಯಿಗೆ ರುಚಿಕರವಾದ ಭಾಜಿ ಜೊತೆ 10 ಪೂರಿ; ದಂಪತಿಯ ಶ್ರಮಕ್ಕೆ ಮೆಚ್ಚುಗೆ

ಬೆಳಗ್ಗೆ 7-30ರಿಂದ ಕೆಲಸ ಮಾಡಲು ಆರಂಭಿಸಿ, ಮಧ್ಯಾಹ್ನ 2ಗಂಟೆವರೆಗೆ ಕಾರ್ಯನಿರ್ವಹಿಸುವುದಾಗಿ ದಂಪತಿ ತಿಳಿಸಿದ್ದಾರೆ.

Team Udayavani, Apr 13, 2023, 3:43 PM IST

Street Food: 30 ರೂಪಾಯಿಗೆ ರುಚಿಕರವಾದ ಭಾಜಿ ಜೊತೆ 10 ಪೂರಿ; ದಂಪತಿಯ ಶ್ರಮಕ್ಕೆ ಮೆಚ್ಚುಗೆ

ಜೈಪುರ: ಭಾರತದಲ್ಲಿ ಬೀದಿ ಬದಿಯ ಆಹಾರ (Street Food) ಯಾವಾಗಲೂ ಆಕರ್ಷಣೆಯ ಮತ್ತು ಜನಪ್ರಿಯತೆಯ ಪಡೆದಿರುತ್ತದೆ. ಆದರೆ ಕೆಲವೊಮ್ಮೆ ನಾವೂ ಕೂಡಾ ಇಂತಹ ಬೀದಿಬದಿಯ ವ್ಯಾಪಾರಿಗಳನ್ನು ಗುರುತಿಸುತ್ತೇವೆ. ಈ ವ್ಯಕ್ತಿಗಳ ಯಶೋಗಾಥೆ ಎಲ್ಲರ ಮನಮುಟ್ಟುವ ಮೂಲಕ ವೈರಲ್ ಆಗುತ್ತದೆ.

ಇದನ್ನೂ ಓದಿ:IPL 2023: ಐಪಿಎಲ್ ನಲ್ಲಿ ಅಂಪೈರ್ ಗಳ ನಿರ್ಧಾರಗಳು…; ಅಸಮಾಧಾನ ಹೊರಹಾಕಿದ ಅಶ್ವಿನ್

ಕಡಿಮೆ ಬೆಲೆಗೆ ಊಟ, ಉಪಹಾರವನ್ನು ನೀಡುವ ಇವರಿಗೆ ಜೀವನ ನಿರ್ವಹಣೆಯೇ ಮುಖ್ಯ ಉದ್ದೇಶವಾಗಿತ್ತದೆ. ಆದರೆ ಜೈಪುರದ ಈ ದಂಪತಿಗೆ ಆದಾಯಕ್ಕಿಂತ ಹೆಚ್ಚಾಗಿ ಜನಸೇವೆಯೇ ಪ್ರಮುಖ ಆದ್ಯತೆಯಾಗಿದೆ.

ಕೇವಲ 30 ರೂಪಾಯಿಗೆ 10 ಪೂರಿ ಭಾಜಿ ಊಟ!

ಜೈಪುರದ ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟುಕೊಂಡಿರುವ ದಂಪತಿ ಕೇವಲ 30 ರೂಪಾಯಿಗೆ ಪೂರಿ ಭಾಜಿ ಊಟ ನೀಡುತ್ತಿದ್ದಾರೆ. ಅರೇ ಇದರಲ್ಲಿ ವಿಶೇಷವೇನಿದೆ ಎಂದು ಹುಬ್ಬೇರಿಸಬೇಡಿ. ಯಾಕೆ ಗೊತ್ತಾ, 10 ಪೂರಿ ಭಾಜಿ ಊಟಕ್ಕೆ ಕೇವಲ 30 ರೂಪಾಯಿ!

ಈ ವಿಡಿಯೋವನ್ನು “Fooies.aao” ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಕಠಿಣ ಪರಿಶ್ರಮದ ದಂಪತಿ-ಕೇವಲ 30 ರೂಪಾಯಿಗೆ ಪೂರಿ ಸಬ್ಜಿ ಮಾರಾಟ ಮಾಡುತ್ತಿದ್ದಾರೆ ಎಂದು ಕ್ಯಾಪ್ಶನ್ ಬರೆಯಲಾಗಿದೆ.

“ಬೆಳಗ್ಗೆ 7-30ರಿಂದ ಕೆಲಸ ಮಾಡಲು ಆರಂಭಿಸಿ, ಮಧ್ಯಾಹ್ನ 2ಗಂಟೆವರೆಗೆ ಕಾರ್ಯನಿರ್ವಹಿಸುವುದಾಗಿ ದಂಪತಿ ತಿಳಿಸಿದ್ದಾರೆ. ಗ್ರಾಹಕರಿಗೆ 10 ಪೂರಿ ಜತೆಗೆ ಭಾಜಿ ಅಥವಾ ಬಟಾಣಿ ಗಸಿ, ಟೊಮ್ಯಾಟೋ, ಬೆಳ್ಳುಳ್ಳಿ ಚಟ್ನಿ ನೀಡಲಾಗುತ್ತದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಗ್ರಾಹಕರು ಬಂದ ನಂತರವೇ ಗರಿ, ಗರಿ ಪೂರಿಯನ್ನು ಎಣ್ಣೆಯಲ್ಲಿ ಕರಿದು ಕೊಡುವುದು ದಂಪತಿಯ ವಿಶೇಷತೆಯಾಗಿದೆ. ಆ ಕಾರಣದಿಂದಲೇ ಗ್ರಾಹಕರು ಜೈಪುರ್ ಸ್ಟ್ರೀಟ್ ಪುಡ್ ಅಂಗಡಿ ಸಮೀಪ ಸಾಲುಗಟ್ಟಿ ನಿಂತಿರುತ್ತಾರಂತೆ. ನೀವೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ, ಖಂಡಿತ ನಿಮಗೆ ಖುಷಿಯಾಗುತ್ತೆ ಎಂದು ಫೇಸ್ ಬುಕ್ ನಲ್ಲಿ ಸಲಹೆ ನೀಡಿದ್ದಾರೆ.

ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಈವರೆಗೆ 926Kಗಿಂತಲೂ ಅಧಿಕ ವೀಕ್ಷಣೆ ಪಡೆದಿದ್ದು, 5 ಸಾವಿರಕ್ಕಿಂತ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ರುಚಿಕರವಾದ, ಮಿತಬೆಲೆಯ ಊಟವನ್ನು ನೀಡುತ್ತಿರುವ ದಂಪತಿಯ ಕಾರ್ಯಕ್ಕೆ ಹಲವಾರು ಮಂದಿ ಶ್ಲಾಘಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

“ಅವರು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಕೇವಲ 30ರೂಪಾಯಿಗೆ ಹೊಟ್ಟೆ ತುಂಬಾ ನೀಡುತ್ತಿರುವ ಈ ದಂಪತಿ ಗ್ರಾಹಕರ ಪಾಲಿಗೆ ದೇವರು” ಎಂದು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

Narrowly Escape: ಕುಸಿದು ಬಿದ್ದ ನೂರು ವರ್ಷ ಹಳೆಯ ಕಟ್ಟಡ… ಓಡಿ ಪಾರಾದ ತಾಯಿ, ಮಗು

Narrowly Escape: ಕುಸಿದು ಬಿದ್ದ ನೂರು ವರ್ಷ ಹಳೆಯ ಕಟ್ಟಡ… ಓಡಿ ಪಾರಾದ ತಾಯಿ, ಮಗು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.