![Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ](https://www.udayavani.com/wp-content/uploads/2024/07/viral-415x229.jpg)
ಅಮೆರಿಕದ GPSಗೆ ಸೆಡ್ಡು ಹೊಡೆಯಲಿದೆ ಬೆಂಗಳೂರಿನ “ನ್ಯಾವ್ಐಸಿ”- ಏನಿದು “NavIC”?
ಎಲೆನಾ ಜಿಯೊ ಸಿಸ್ಟಮ್ಸ್ನಿಂದ ನ್ಯಾವಿಗೇಶನ್ ಚಿಪ್ ಸಿದ್ಧ-ಭಾರತೀಯ ಸೇನೆಗೆ ಹಸ್ತಾಂತರ
Team Udayavani, Apr 15, 2023, 7:34 AM IST
![navic](https://www.udayavani.com/wp-content/uploads/2023/04/navic-620x372.jpg)
ನವದೆಹಲಿ: ಭಾರತೀಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಬಲವಾದ ಬದಲಾವಣೆ ತರಬಲ್ಲ “ನ್ಯಾವ್ಐಸಿ ಚಿಪ್” ಅನ್ನು ಬೆಂಗಳೂರು ಮೂಲದ ಎಲೆನಾ ಜಿಯೊ ಸಿಸ್ಟಮ್ಸ್ ಸಿದ್ಧಪಡಿಸಿದೆ. ಈ ಚಿಪ್ಪನ್ನು ವಾಹನಗಳು, ಶಸ್ತ್ರಾಸ್ತ್ರಗಳನ್ನು ಟ್ರ್ಯಾಕ್ ಮಾಡಲು ಬಳಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಮೇಲಿನ ಭಾರತೀಯರ ಅವಲಂಬನೆಯನ್ನು ತಪ್ಪಿಸಬಹುದು. ಈ ಚಿಪ್ ಅನ್ನು ಗುರುವಾರ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ಗೆ ಹಸ್ತಾಂತರಿಸಲಾಗಿದೆ.
ಈ ವೇಳೆ ಡಿಆರ್ಡಿಒ ಮುಖ್ಯಸ್ಥ ಸಮೀರ್ ವಿ. ಕಾಮತ್, ವಾಯಸೇನಾ ಮುಖ್ಯಸ್ಥ ವಿ.ಆರ್.ಚೌಧರಿ ಹಾಜರಿದ್ದರು.
ಮೊಬೈಲ್ಗಳು, ಕೈಯಲ್ಲಿ ಬಳಸಬಹುದಾದ ಇತರೆ ಸಾಧನಗಳಲ್ಲಿ ಈ ಚಿಪ್ ಅಳವಡಿಸಬಹುದು. ಸಾಫ್ಟ್ವೇರ್ ಆಧಾರಿತ ಈ ಚಿಪ್ಗೆ ಬಹಳ ಕಡಿಮೆ ವಿದ್ಯುತ್ ಸಾಕು. ಶಾಲಾ ಬಸ್ಗಳು, ಶಸ್ತ್ರಾಸ್ತ್ರಗಳು ಎಲ್ಲಿ ಹೋಗುತ್ತಿವೆ ಎಂದು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಕೇವಲ 12 ನ್ಯಾನೊಮೀಟರ್ ಗಾತ್ರದ ಚಿಪ್ ಅನ್ನು ಒಮ್ಮೆ ಅಳವಡಿಸಿದರೆ ಅದು ನ್ಯಾವ್ಐಸಿ, ಭಾರತದ ಐಆರ್ಎನ್ಎಸ್ಎಸ್, ಅಮೆರಿಕದ ಜಿಪಿಎಸ್, ರಷ್ಯಾದ ಗ್ಲೊನಾಸ್ನಿಂದ ಸಂಕೇತಗಳನ್ನು ಗ್ರಹಿಸಬಲ್ಲದು!
ತೈವಾನ್ ಕಂಪನಿ ಉತ್ಪಾದನೆ:
ಈ ಚಿಪ್ಗ್ಳ ಉತ್ಪಾದನೆಗೆ ಎಲೆನಾ ಜಿಯೊ ಸಿಸ್ಟಮ್ಸ್ ಕಂಪನಿ ತೈವಾನಿನ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ. ಆ ಕಾರ್ಖಾನೆಯನ್ನು ಸ್ವತಃ ಎಲೆನಾ ಜಿಯೊ ಸಿಸ್ಟಮ್ಸ್ ನಿಯಂತ್ರಿಸಲಿದೆ. ಈಗಾಗಲೇ 10000 ಚಿಪ್ಗ್ಳು ಭಾರತಕ್ಕೆ ಬಂದಿವೆ ಎಂದು ಎಲೆನಾ ಮುಖ್ಯಸ್ಥ ಲೆ.ಕರ್ನಲ್ ವಿ.ಎಸ್.ವೇಲನ್ ಹೇಳಿದ್ದಾರೆ.
ಟಾಪ್ ನ್ಯೂಸ್
![Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ](https://www.udayavani.com/wp-content/uploads/2024/07/viral-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Bhibhav Kumar](https://www.udayavani.com/wp-content/uploads/2024/07/Bhibhav-Kumar-150x102.jpg)
Swati Maliwal ಹಲ್ಲೆ ಪ್ರಕರಣ: ಬಿಭವ್ ಕುಮಾರ್ ಗೆ ಜುಲೈ 16 ರವರೆಗೆ ನ್ಯಾಯಾಂಗ ಬಂಧನ
![ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್,ದುಬಾರಿ ಕಾರು; ಈತ ಶ್ರೀಮಂತ ಕಳ್ಳ](https://www.udayavani.com/wp-content/uploads/2024/07/3-5-150x90.jpg)
ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್,ದುಬಾರಿ ಕಾರು; ಈತ ಶ್ರೀಮಂತ ಕಳ್ಳ
![Nirmala-Budget](https://www.udayavani.com/wp-content/uploads/2024/07/Nirmala-Budget-150x90.jpg)
Union Budget: ಜು.22ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ
![rahul gandhi (2)](https://www.udayavani.com/wp-content/uploads/2024/07/rahul-gandhi-2-1-150x90.jpg)
Congress ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್ ನಲ್ಲೂ ಬಿಜೆಪಿಗೆ ಸೋಲುಣಿಸಲಿದೆ: ರಾಹುಲ್
![Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ](https://www.udayavani.com/wp-content/uploads/2024/07/bhole-150x83.jpg)
Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ
MUST WATCH
ಹೊಸ ಸೇರ್ಪಡೆ
![Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ](https://www.udayavani.com/wp-content/uploads/2024/07/4-4-150x90.jpg)
Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ
![1-qewqewq](https://www.udayavani.com/wp-content/uploads/2024/07/1-qewqewq-150x98.jpg)
Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ
![Bhibhav Kumar](https://www.udayavani.com/wp-content/uploads/2024/07/Bhibhav-Kumar-150x102.jpg)
Swati Maliwal ಹಲ್ಲೆ ಪ್ರಕರಣ: ಬಿಭವ್ ಕುಮಾರ್ ಗೆ ಜುಲೈ 16 ರವರೆಗೆ ನ್ಯಾಯಾಂಗ ಬಂಧನ
![Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ](https://www.udayavani.com/wp-content/uploads/2024/07/viral-150x83.jpg)
Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ
![1-rewewewe](https://www.udayavani.com/wp-content/uploads/2024/07/1-rewewewe-150x84.jpg)
Monsoon season: ದಕ್ಷಿಣ ಕನ್ನಡದಲ್ಲಿ ಜಲ ಚಟುವಟಿಕೆಗಳು, ಚಾರಣಕ್ಕೆ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.