ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್: ಅಥಣಿಯಿಂದ ಸವದಿಗೆ ʼಕೈʼ ಟಿಕೆಟ್
Team Udayavani, Apr 15, 2023, 2:30 PM IST
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಶನಿವಾರ ರಿಲೀಸ್ ಮಾಡಿದೆ. 49 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
ಎಐಸಿಸಿ ಪಟ್ಟಿ ರಿಲೀಸ್ ಮಾಡಿದೆ. ಪ್ರಮುಖವಾಗಿ ಬಿಜೆಪಿ ಬಿಟ್ಟು ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾಜಿ ಡಿಸಿಎಂ ಲಕ್ಷ್ಮಂ ಸವದಿ ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಕುತೂಹಲ ಕೆರಳಿಸಿದ್ದ ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾರ್ಕಳ ಕ್ಷೇತ್ರಕ್ಕೆ ಉದಯ್ ಕುಮಾರ್ ಶೆಟ್ಟಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಮಂಗಳೂರು ದಕ್ಷಿಣಕ್ಕೆ ಜಾನ್ ರಿಚರ್ಡ್ ಲೋಬೋ ಅವರಿಗೆ ಟಿಕೆಟ್ ನೀಡಲಾಗಿದೆ.
ಕುತೂಹಲ ಹೆಚ್ಚಿಸಿದ್ದ ಕೋಲಾರ ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ್ದಾರೆ. ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲಕ್ಕೆ ತೆರಬಿದ್ದಿದೆ. ಮೂಡಿಗೆರೆ ಕ್ಷೇತ್ರಕ್ಕೆ ಮೋಟಮ್ಮ ಅವರ ಪುತ್ರಿ ನಯನ ಜ್ಯೋತಿ ಜವಾರ್ ಟಿಕೆಟ್ ನೀಡಲಾಗಿದೆ.
ಪ್ರಮುಖ ಅಭ್ಯರ್ಥಿಗಳು:
ಅಥಣಿಯಿಂದ ಲಕ್ಷ್ಮಣ ಸವದಿ
ರಾಯಭಾಗ್ – ಮಹಾವೀರ್ ಮೋಹಿತ್
ಅರಭಾವಿ- ಅರವಿಂದರ್ ದಲ್ವಾಣಿ
ಬೆಳಗಾವಿ ಉತ್ತರ- ಆಸೀಫ್ ಸೇಠ್
ಬೆಳಗಾವಿ ದಕ್ಷಿಣ- ಪ್ರಭಾವತಿ
ಪುತ್ತೂರು- ಅಶೋಕ್ ಕುಮಾರ್ ರೈ
ಕಾರ್ಕಳ- ಉದಯ್ ಕುಮಾರ್ ಶೆಟ್ಟಿ
ಶಿವಮೊಗ್ಗ- ಹೆಚ್.ಸಿ. ಯೋಗಿಶ್
ಮಂಗಳೂರು ದಕ್ಷಿಣ- ಜಾನ್ ರಿಚರ್ಡ್ ಲೋಬೋ
ಬೊಮ್ಮನಹಳ್ಳಿ- ಉಮಾಪತಿ ಶ್ರೀನಿವಾಸ ಗೌಡ
ಮೂಡಿಗೆರೆ- ನಯನ ಜ್ಯೋತಿ ( ಮೋಟಮ್ಮ ಪುತ್ರಿ)
ಚನ್ನಪಟ್ಟಣ- ಗಂಗಧರ್. ಎ
ಕುಮಟಾ- ನಿವೇದಿತ್ ಆಳ್ವ
ಸಿರುಗುಪ್ಪ- ಬಿ.ಎಂ.ನಾಗರಾಜ್
ಕೋಲಾರ- ಕೊತ್ತೂರು ಮಂಜುನಾಥ್
ಅರಸೀಕೆರೆ – ಶಿವಲಿಂಗೇಗೌಡ
ಕುಂದಗೋಳ – ಕುಸುಮಾ ಶಿವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.