ಹಿಂದುತ್ವಕೋಸ್ಕರ ಹೋರಾಟದ ಕೇಸು ಕೆದಕಿ Independent ಸ್ಪರ್ಧೆಗೆ ಅಡ್ಡಿ
ಹುನ್ನಾರ ನೆನೆದು ಕಣ್ಣೀರಿಟ್ಟ ಅರುಣ್ ಪುತ್ತಿಲ..!
Team Udayavani, Apr 15, 2023, 8:57 PM IST
ಪುತ್ತೂರು : ನನ್ನ ಮೇಲೆ 28 ಕೇಸು ಇದೆ. ಆದರೆ ಈ ಕೇಸು ನನ್ನ ವೈಯಕ್ತಿಕ ವಿಚಾರಕ್ಕೆ ಅಲ್ಲ. ಮತಾಂತರ, ಲವ್ ಜೆಹಾದ್ ಮೊದಲಾದವುಗಳ ವಿರುದ್ಧದ ಹೋರಾಟಕ್ಕಾಗಿ. ಕಳೆದ 30 ವರ್ಷದಿಂದ ಮನೆ ಮಂದಿಯ ಬಗ್ಗೆಯು ಚಿಂತಿಸದೆ ಹಿಂದೂ ಸಮಾಜಕೋಸ್ಕರ ಬದುಕನ್ನು ಮುಡಿಪಾಗಿ ಇಟ್ಟಿದ್ದೇನೆ. ಆದರೆ ಹಿಂದುತ್ವದ ಹೋರಾಟದ ಕೇಸನ್ನು ಕೆದಕುವ ಮೂಲಕ ತನ್ನ ಸ್ಪರ್ಧೆಗೆ ಅಡ್ಡಿ ಉಂಟು ಮಾಡುತ್ತಿರುವವರ ಸಂಚು ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜವೇ ಉತ್ತರ ನೀಡಲಿದೆ ಎಂದು ಹಿಂದೂ ಸಂಘಟನೆಯ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಣ್ಣಿರಿಟ್ಟ ಘಟನೆ ಎ.15 ರಂದು ನಡೆದಿದೆ.
ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಲು ಅರುಣ್ ಪುತ್ತಿಲ ತೀರ್ಮಾನಿಸಿದ್ದು ಇದರ ಬೆನ್ನಲ್ಲೇ ಅವರ ಮೇಲಿನ ಹಳೆ ಪ್ರಕರಣವನ್ನು ಮತ್ತೆ ತೆರದು ಸ್ಪರ್ಧೆಗೆ ಅಡ್ಡಿ ಉಂಟು ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಶನಿವಾರ ಅವರು ಭಾವುಕರಾಗಿ ಪ್ರತಿಕ್ರಿಯಿಸಿದರು.
ತಾನು ಕಳೆದ 30 ವರ್ಷದಿಂದ ಹಿಂದುತ್ವಕೋಸ್ಕರ ಹೋರಾಟ ನಡೆಸಿದ್ದೇನೆ. ಬಿಜೆಪಿಗಾಗಿಯೂ ದುಡಿದ್ದೇನೆ. ಆದರೆ ಪಕ್ಷದ ಕೆಲವರು ತಾನು ಬಿಜೆಪಿ ಕಾರ್ಯಕರ್ತನೇ ಅಲ್ಲ ಅನ್ನುವ ಪ್ರಚಾರ ಮಾಡಿದ್ದಾರೆ. ಪಕ್ಷಕೋಸ್ಕರ, ಸಂಘಟನೆಗೋಸ್ಕರ ದುಡಿದದ್ದು ಸಂಘದ ಹಿರಿಯರಿಗೆ ತಿಳಿದಿದೆ. ಅದಾಗ್ಯೂ ನನ್ನ ಸ್ಪರ್ಧೆಗೆ ಹಿಂದುತ್ವದ ಹೋರಾಟವನ್ನು ಬಳಸಿಕೊಂಡು ಅಡ್ಡಿ ಉಂಟು ಮಾಡುವ ಪ್ರಯತ್ನ ಮಾಡುವುದಿದ್ದರೆ ಅಂತಹವರಿಗೆ ದೇವರೇ ಉತ್ತರ ನೀಡುತ್ತಾನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್
Sullia: ಸುಟ್ಟ ಗಾಯ: ಮಹಿಳೆ ಸಾವು: ಪತಿಯ ಅಣ್ಣನೇ ಬೆಂಕಿ ಹಚ್ಚಿದ್ದ ಪ್ರಕರಣ
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಪ್ರಯಾಣಿಕರ ಸಂಖ್ಯೆ ಹೆಚ್ಚಳ
Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ
Surathkal: ಸಸಿಹಿತ್ಲು ಆಳಸಮುದ್ರದಲ್ಲಿ ಪ್ರಜ್ವಲ್ ಮೃತದೇಹ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.