![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 16, 2023, 7:05 AM IST
ಅಹ್ಮದಾಬಾದ್: ಐಪಿಎಲ್ನ ಎರಡು ಬಲಿಷ್ಠ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ರವಿವಾರ ಅಹ್ಮದಾಬಾದ್ನಲ್ಲಿ ದೊಡ್ಡ ಪಂದ್ಯವೊಂದಕ್ಕೆ ಸಾಕ್ಷಿಯಾಗಲಿವೆ. ಇವೆ ರಡೂ ಕಳೆದ ಸಲದ ಫೈನಲಿಸ್ಟ್ಗಳೆಂಬುದನ್ನು ಮರೆಯುವಂತಿಲ್ಲ.
ಎರಡೂ ತಂಡಗಳು 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಮೊದಲೆರಡು ಸ್ಥಾನ ಅಲಂಕರಿಸಿವೆ. ರನ್ರೇಟ್ನಲ್ಲಿ ಮುಂದಿರುವ ರಾಜಸ್ಥಾನ್ ಅಗ್ರಸ್ಥಾನದಲ್ಲಿದೆ. ಮತ್ತೆ ಮೇಲೇರುವ ಹಂಬಲ ಪಾಂಡ್ಯ ಪಡೆಯದ್ದು, ತವರಿನ ಅಂಗಳ ಲಾಭವಾಗಿ ಪರಿಣಮಿಸಬಹುದೆಂಬ ಲೆಕ್ಕಾಚಾರ ಗುಜರಾತ್ ತಂಡದ್ದು.
ಐಪಿಎಲ್ ಚರಿತ್ರೆಯೂ ಗುಜರಾತ್ ಪರವಾ ಗಿಯೇ ಇದೆ. ರಾಜಸ್ಥಾನ್ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಅದು ಜಯ ಸಾಧಿಸಿದೆ. ಇದರಲ್ಲಿ 2022ರ ಫೈನಲ್ ಕೂಡ ಒಂದು. ಇದ ರಲ್ಲಿ ಪಾಂಡ್ಯ ಪಡೆಯದ್ದು 7 ವಿಕೆಟ್ ವಿಕ್ಟರಿ. 11 ಎಸೆತ ಬಾಕಿ ಉಳಿದಿರುವಂತೆಯೇ ಗುಜರಾತ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಸ್ಯಾಮ್ಸನ್ ಪಡೆ ಸೋಲಿನ ಸರಪಳಿ ಕಡಿದು ಕೊಂಡೀತೇ ಎಂಬುದೊಂದು ಕುತೂಹಲ.
ಎರಡೂ ತಂಡಗಳು ಸಮಬಲ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಗುಜರಾತ್ಗೆ ತವರಿನ ಲಾಭವಿದೆ. ಪಾಂಡ್ಯ ಸಾರಥ್ಯದಲ್ಲಿ ಅದು ಅಹ್ಮದಾಬಾದ್ನಲ್ಲಿ ಈವರೆಗೆ ಸೋಲನು ಭವಿಸಿಲ್ಲ. ಏಕೈಕ ಸೋಲು ಮೊನ್ನೆ ಕೋಲ್ಕತಾ ವಿರುದ್ಧ ಎದುರಾಗಿತ್ತು. ಆಗ ರಶೀದ್ ಖಾನ್ ನಾಯಕರಾಗಿದ್ದರು.
ಕೈಕೊಟ್ಟ ಸ್ಯಾಮ್ಸನ್ ಫಾರ್ಮ್
ಬಿಗ್ ಹಿಟ್ಟರ್ಗಳ ಲೆಕ್ಕಾಚಾರದಲ್ಲಿ ಎರಡೂ ತಂಡಗಳದ್ದು ಸಮಬಲದ ಸಾಮರ್ಥ್ಯ. ಆದರೆ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಅವರ ಸೊನ್ನೆಯ ನಂಟು ಬಿಗಿಯಾಗುತ್ತಿದೆ. ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಅವರು ಖಾತೆಯನ್ನೇ ತೆರೆದಿರಲಿಲ್ಲ. ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಪಡಿಕ್ಕಲ್, ಹೆಟ್ಮೈರ್, ಹೋಲ್ಡರ್ ಅವರೆಲ್ಲ ರಾಜಸ್ಥಾನ್ ಬ್ಯಾಟಿಂಗ್ ಸರದಿಯ ಪ್ರಮುಖರು.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳೇ ಸ್ಟಾರ್. ಅಶ್ವಿನ್, ಚಹಲ್, ಝಂಪ ದಾಳಿಯನ್ನು ನಿಭಾಯಿಸಿ ನಿಲ್ಲುವುದರಲ್ಲಿ ಗುಜರಾತ್ ಯಶಸ್ಸು ಅಡಗಿದೆ ಎನ್ನಬಹುದು.
ಪಾಂಡ್ಯ ಪರದಾಟ
ಗುಜರಾತ್ ತಂಡದ ಏಕೈಕ ಸಮಸ್ಯೆಯೆಂದರೆ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಫಾರ್ಮ್. ಆದರೆ ಅದೃಷ್ಟ ಗಟ್ಟಿಯಾಗಿದೆ. ಉಳಿದಂತೆ ಸಾಹಾ, ಗಿಲ್, ಸಾಯಿ ಸುದರ್ಶನ್, ಮಿಲ್ಲರ್, ತೆವಾಟಿಯಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಶಮಿ, ಮೋಹಿತ್ ಶರ್ಮ, ಅಲ್ಜಾರಿ ಜೋಸೆಫ್, ರಶೀದ್ ಖಾನ್, ಜೋಶುವ ಲಿಟ್ಲ ಅವರ ಬೌಲಿಂಗ್ ದಾಳಿ ಕೂಡ ಹರಿತವಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.