ಮೀನಿಗೆ ಸಿಗದ ಸೂಕ್ತ ದರ: ನಿರ್ವಹಣೆ ಸಂಕಷ್ಟ; ದಡ ಸೇರುತ್ತಿರುವ ಟ್ರಾಲ್‌, ಪರ್ಸಿನ್‌ ಬೋಟುಗಳು


Team Udayavani, Apr 16, 2023, 1:52 PM IST

ಮೀನಿಗೆ ಸಿಗದ ಸೂಕ್ತ ದರ: ನಿರ್ವಹಣೆ ಸಂಕಷ್ಟ; ದಡ ಸೇರುತ್ತಿರುವ ಟ್ರಾಲ್‌, ಪರ್ಸಿನ್‌ ಬೋಟುಗಳು

ಮಹಾನಗರ: ಸಮುದ್ರದಲ್ಲಿ ಗುಣಮಟ್ಟದ ಮೀನುಗಳ ಕೊರತೆ, ಸಿಕ್ಕಿದ ಮೀನುಗಳಿಗೆ ಸೂಕ್ತ ಬೆಲೆ ಸಿಗದೆ ನಿರ್ವಹಣೆ ಸಾಧ್ಯವಾಗದೆ ಮೀನುಗಾರರು ತಮ್ಮ ಬೋಟುಗಳನ್ನು ಕಡಲಿಗೆ ಇಳಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವು ದಿನಗಳಿಂದ ಮಂಗಳೂರು ದಕ್ಕೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯ ದೋಣಿಗಳು ಮಳೆಗಾಲದ ಮೀನುಗಾರಿಕೆನಿಷೇಧಕ್ಕೆ ಮುಂಚಿತವಾಗಿಯೇ ದಡ ಸೇರಲಾರಂಭಿಸಿವೆ.

ಆಳ ಸಮುದ್ರಕ್ಕೆ ತೆರಳುವ ಬೋಟು ಗಳಿಗೆ ಕಾಣೆ, ಪಯ್ಯ ಮೊದಲಾದ ಗುಣಮಟ್ಟದ ಮೀನು ಸಿಗುತ್ತಿಲ್ಲ. ಉಳಿದಂತೆ ಇತರ ಸಾಮಾನ್ಯ ಮೀನುಗಳು ದೊರೆಯುತ್ತಿದ್ದರೂ ಬೆಲೆ ಸಿಗುತ್ತಿಲ್ಲ. ವಿದೇಶಗಳಿಂದ ಮೀನಿಗೆ ಬೇಡಿಕೆ ಕುಸಿದಿರುವ ಕಾರಣ ಹೇರಳವಾಗಿ ರಫ್ತಾಗುತ್ತಿದ್ದ ರಾಣಿ ಮೀನು, ರಿಬ್ಬನ್‌ ಫಿಶ್‌, ಬೂತಾಯಿ, ಬಂಗುಡೆ ಮೊದಲಾದವುಗಳಿಗೆ ಸೂಕ್ತ ಬೆಲೆ ಇಲ್ಲ. ಹವಾಮಾನ ವೈಪರೀತ್ಯ ಅವೈಜ್ಞಾನಿಕ ಮೀನುಗಾರಿಕೆಯೂ ಮೀನಿನ ದರ ಇಳಿಕೆಗೆ ಕಾರಣವಾಗುತ್ತಿದೆ. ಹಾಗಾಗಿ ಬಹುತೇಕ ಬೋಟುಗಳವರು ಖರ್ಚುವೆಚ್ಚ ಸರಿದೂಗಿಸಲು ಸಾಧ್ಯವಾಗದೆ ಬೋಟುಗಳನ್ನು ದಡ ಸೇರಿಸುತ್ತಿದ್ದಾರೆ ಎನ್ನುವುದು ಮೀನುಗಾರರ ಅಭಿಪ್ರಾಯ.

ಕಳೆದ ವರ್ಷ ಈ ಮೀನುಗಾರಿಕೆ ಅವಧಿಯಲ್ಲಿ ಕೆಜಿಗೆ 70 ರೂ.ಗಳಿದ್ದ ರಾಣಿ ಮೀನು ಈ ಬಾರಿ 37 ರೂ.ಗಳಿಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಮೀನುಗಳ ಕೊರತೆ, ಸಿಕ್ಕ ಮೀನಿಗೆ ಸರಿಯಾದ ಬೆಲೆ ಸಿಗದಿರುವ ನಡುವೆಯೇ, ಡೀಸೆಲ್‌ ಬೆಲೆ ಏರಿಕೆ, ಇತರ ಖರ್ಚು ವೆಚ್ಚಗಳನ್ನು ಸರಿತೂಗಿಸಿಕೊಂಡು ನಷ್ಟದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವುದಾರೂ ಹೇಗೆ? ಡಿಸೆಂಬರ್‌ ತಿಂಗಳವರೆಗೆ ಬೋಟುಗಳಿಗೆ ಉತ್ತಮ ರೀತಿಯಲ್ಲಿ ಮೀನು ಸಿಗುತ್ತಿದ್ದು, ಜನವರಿಯಿಂದೀಚೆಗೆ ಮೀನಿನ ಪ್ರಮಾಣ ದಲ್ಲಿಯೂ ಕುಸಿತವಾಗಿದೆ ಎನ್ನುವುದು ಮೀನುಗಾರರು ಅಳಲು.

ಮೀನಿನ ದರ ಶೇ. 40ರಷ್ಟು ಕುಸಿತ
ಚೀನ, ಸ್ವಿಟ್ಜರ್‌ಲ್ಯಾಂಡ್‌, ಮಲೇಷ್ಯಾ, ಥಾಯ್ಲೆಂಡ್‌ ಸಹಿ ತ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಮೀನಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆ ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ರಾಣಿ ಮೀನಿಗೆ ಬೇಡಿಕೆ ಇಲ್ಲ ಎಂದು ರಫ್ತುದಾರರು ಹೇಳುತ್ತಿದ್ದು, ಅರ್ಹ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈಗಾಗಲೇ ಶೇ. 70 ಟ್ರಾಲ್‌, ಶೇ.40ರಷ್ಟು ಪರ್ಸಿನ್‌ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಕಳೆದ ಡಿಸೆಂಬರ್‌ವರೆಗೆ ಮೀನಿನ ಕ್ಯಾಚಿಂಗ್‌ ಮೇಲ್ನೋಟಕ್ಕೆ ಉತ್ತಮವಾಗಿದ್ದರೂ ಗುಣಮಟ್ಟದ ಮೀನು ಸಿಗದೆ, ಬೋಟು ಮಾಲಕರು ಕಂಗೆಟ್ಟಿದ್ದಾರೆ. ಈ ವರ್ಷ ಮೀನಿನ ದರದಲ್ಲಿ ಶೇ. 40ರಷ್ಟು ಕುಸಿತವಾಗಿದೆ. ರಿಬ್ಬನ್‌, ಬೂತಾಯಿ, ಬಂಗುಡೆ ಮೀನು ಇಳುವರಿ ಇತ್ತಾದರೂ, ಕೆಜಿಗೆ 160 ರೂ. ಸಿಗುತ್ತಿದ್ದ ಬಂಗುಡೆ ಮೀನನ್ನು ಈ ಬಾರಿ 50 ರೂ.ನಿಂದ 60 ರೂ.ಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯಿಂದ ಬೋಟು ಮಾಲಕರು ಕಂಗೆಟ್ಟಿದ್ದಾರೆ ಎಂದು ದ.ಕ. ಜಿಲ್ಲೆಯ ಆಳ ಸಮುದ್ರ ಮೀನುಗಾರರ ಮುಖಂಡರಾದ ಮೋಹನ್‌ ಬೆಂಗ್ರೆ ತಿಳಿಸಿದ್ದಾರೆ.

ಗುಣಮಟ್ಟದ ಮೀನು ಲಭಿಸುತ್ತಿಲ್ಲ
ಕಡಲ ಮೀನುಗಾರಿಕೆಗೆ ತೆರಳುವವರಿಗೆ ಗುಣಮಟ್ಟದ ಮೀನು ಲಭ್ಯವಾಗುತ್ತಿಲ್ಲ. ಲಭ್ಯವಾದ ಮೀನಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಹವಾಮಾನ ವೈಪರೀತ್ಯದ ಜತೆಗೆ ಕಡಲು ಹಲವು ಕಾರಣಗಳಿಗೆ ಕಲುಷಿತವಾಗುತ್ತಿದೆ, ಮೀನು ಸಂತತಿ ವಿನಾಶದಂಚಿಗೆ ಸಾಗುತ್ತಿದೆ. ವಿದೇಶಗಳಲ್ಲಿ ಕಡಲು ಸ್ವತ್ಛಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ನಮ್ಮಲ್ಲಿ ಕಲುಷಿತ ನೀರು, ತ್ಯಾಜ್ಯ ಉಗಮ ಸ್ಥಾನಗಳಿಂದಲೇ ನದಿಗಳ ಒಡಲು ಸೇರಿ ಕಡಲ ಪಾಲಾಗುತ್ತಿದೆ. ಉಳಿದಂತೆ ಕಡಲು ಸೇರುವ ನಾನಾ ರೀತಿಯ ತ್ಯಾಜ್ಯಗಳಿಂದ ಕಡಲ ಸಂಪತ್ತು ಮಲಿನವಾಗುತ್ತಿದೆ. ಪೌಷ್ಟಿಕ ಆಹಾರವಾದ ಉತ್ತಮ ಗುಣಮಟ್ಟದ ಮೀನುಗಳು ಸಿಗದಿದ್ದರೆ ಆಳ ಸಮುದ್ರ ಮೀನುಗಾರಿಕೆ ನಡೆಸುವುದು ಬಲು ಕಷ್ಟ. ಈ ಬಗ್ಗೆ ಸರಕಾರವೇ ಗಮನ ಹರಿಸಿ ಕಡಲ ಸಂಪತ್ತು ಸಂರಕ್ಷಿಸುವ ಜತೆಗೆ ಮೀನುಗಾರರ ಬದುಕಿಗೆ ಭದ್ರತೆಯನ್ನು ಒದಗಿಸಬೇಕು. -ಶಶಿಕುಮಾರ್‌ ಬೆಂಗ್ರೆ, ಅಧ್ಯಕ್ಷರು, ಕರ್ನಾಟಕ ಪಸೀìನ್‌ ಮೀನುಗಾರರ ಸಂಘ

ಮಾಹಿತಿ ಬಂದಿಲ್ಲನಿರ್ವಹಣೆ ಸಾಧ್ಯವಾಗದೆ ಆಳ ಮೀನುಗಾರಿಕೆ ಬೋಟುಗಳು ದಡ ಸೇರಿರುವ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ.
– ಹರೀಶ್‌ ಕುಮಾರ್‌, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.