ಹೆಟ್‌ಮೈರ್‌ ಉತ್ತಮ ಬ್ಯಾಟಿಂಗ್‌: ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ


Team Udayavani, Apr 17, 2023, 6:55 AM IST

ಹೆಟ್‌ಮೈರ್‌ ಉತ್ತಮ ಬ್ಯಾಟಿಂಗ್‌: ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

ಅಹ್ಮದಾಬಾದ್‌: ಸಂಜು ಸ್ಯಾಮ್ಸನ್‌ ಮತ್ತು ಶಿಮ್ರನ್‌ ಹೆಟ್‌ಮೈರ್‌ ಅವರ ಉತ್ತಮ ಬ್ಯಾಟಿಂಗ್‌ನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ರವಿವಾರ ರಾತ್ರಿಯ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

ಗುಜರಾತ್‌ 7 ವಿಕೆಟಿಗೆ 177 ರನ್‌ ಗಳಿಸಿದರೆ, ರಾಜಸ್ಥಾನ್‌ ತಂಡವು 19.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸುವ ಮೂಲಕ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್‌ಗಳ ಜಯ ದಾಖಲಿಸಿತು.

ಇದು ಗುಜರಾತ್‌ ವಿರುದ್ಧ ರಾಜಸ್ಥಾನ್‌ ಸಾಧಿಸಿದ ಮೊದಲ ಗೆಲುವು. ಕಳೆದ ವರ್ಷದ ಮೂರೂ ಪಂದ್ಯಗಳಲ್ಲಿ ರಾಜಸ್ಥಾನ್‌ ತಂಡವು ಗುಜರಾತ್‌ ವಿರುದ್ಧ ಸೋಲು ಅನುಭವಿಸಿತ್ತು. ಇದರಲ್ಲಿ ಫೈನಲ್‌ ಕೂಡ ಸೇರಿತ್ತು.

ಚೇಸಿಂಗ್‌ ವೇಳೆ ಯಶಸ್ವಿ ಜೈಸ್ವಾಲ್‌ (1) ಮತ್ತು ಜಾಸ್‌ ಬಟ್ಲರ್‌ (0) ಅವರನ್ನು ರಾಜಸ್ಥಾನ್‌ ಅಗ್ಗಕ್ಕೆ ಕಳೆದುಕೊಂಡಿತು. ಅರ್ಧ ಹಾದಿ ಕ್ರಮಿಸುವಾಗ 3 ವಿಕೆಟಿಗೆ ಕೇವಲ 53 ರನ್‌ ಒಟ್ಟುಗೂಡಿತ್ತು. ಆದರೆ ನಾಯಕ ಸಂಜು ಸ್ಯಾಮ್ಸನ್‌ ಸಿಡಿದು ನಿಂತರು. ರಶೀದ್‌ ಖಾನ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ ರುಚಿ ತೋರಿಸಿದರು. 32 ಎಸೆತಗಳಿಂದ 60 ರನ್‌ ಬಾರಿಸಿ ಅಬ್ಬರಿಸಿದರು (3 ಬೌಂಡರಿ, 6 ಸಿಕ್ಸರ್‌). ಶಿಮ್ರನ್‌ ಹೆಟ್‌ಮೈರ್‌ ಕೂಡ ಸಿಡಿದು ನಿಂತರು. ಅಜೇಯವಾಗಿದ್ದು, ವಿಜಯೋತ್ಸವ ಆಚರಿಸಿದ ಹೆಟ್‌ಮೈರ್‌ ಅವರು 26 ಎಸೆತಗಳಲ್ಲಿ 56 ರನ್‌ ದೋಚಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳು ಒಳಗೊಂಡಿದ್ದವು.

ಗುಜರಾತ್‌ನ ಮೊಹಮ್ಮದ್‌ ಶಮಿ 3 ವಿಕೆಟ್‌ ಉರುಳಿಸಿದರೆ, ರಶೀದ್‌ ಖಾನ್‌ 2 ವಿಕೆಟ್‌ ಪಡೆದರು.

ಗುಜರಾತ್‌ ನಿಧಾನ ಆರಂಭ
ಆರಂಭಕಾರ ವೃದ್ಧಿಮಾನ್‌ ಸಾಹಾ (4) ಅವರನ್ನು ಗುಜರಾತ್‌ ಬೇಗನೇ ಕಳೆದುಕೊಂಡಿತು. ಶುಭಮನ್‌ ಗಿಲ್‌ 16ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದರೂ ಅವರ ಬ್ಯಾಟಿಂಗ್‌ ಬಿರುಸಿನಿಂದ ಕೂಡಿರಲಿಲ್ಲ. 45 ರನ್ನಿಗೆ 34 ಎಸೆತ ತೆಗೆದುಕೊಂಡರು (4 ಬೌಂಡರಿ, 1 ಸಿಕ್ಸರ್‌). ಕಳೆದ ಕೆಲವು ಪಂದ್ಯಗಳಲ್ಲಿ ಮುನ್ನುಗ್ಗಿ ಬಾರಿಸಿದ್ದ ಸಾಯಿ ಸುದರ್ಶನ್‌ ಅವರಿಗೂ ಬಿರುಸಿನ ಆಟ ಸಾಧ್ಯವಾಗಲಿಲ್ಲ. 20 ರನ್‌ 19 ಎಸೆತಗಳಲ್ಲಿ ಬಂತು.

ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಒಂದಿಷ್ಟು ಸುಧಾರಣೆ ಕಂಡುಬಂತು. 19 ಎಸೆತಗಳಿಂದ 28 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). 16ನೇ ಓವರ್‌ ವೇಳೆ ಗುಜರಾತ್‌ 4ಕ್ಕೆ 121 ರನ್‌ ಗಳಿಸಿ ಕುಂಟುತ್ತಿತ್ತು. ಆದರೆ ಡೇವಿಡ್‌ ಮಿಲ್ಲರ್‌ ಮತ್ತು ಅಭಿನವ್‌ ಮನೋಹರ್‌ ಡೆತ್‌ ಓವರ್‌ನಲ್ಲಿ ಮುನ್ನುಗ್ಗಿ ಬೀಸತೊಡಗಿದ್ದರಿಂದ ಗುಜರಾತ್‌ ಸವಾಲಿನ ಮೊತ್ತ ಪೇರಿಸುವಂತಾಯಿತು. ಇವರಿಬ್ಬರು ಕೇವಲ 22 ಎಸೆತಗಳಿಂದ 45 ರನ್‌ ಸೂರೆಗೈದರು.

ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ 30 ಎಸೆತಗಳಿಂದ 46 ರನ್‌ ಬಾರಿಸಿದರು. ಇದು ಗುಜರಾತ್‌ ಸರದಿಯ ಸರ್ವಾಧಿಕ ಗಳಿಕೆ ಆಗಿತ್ತು.

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಮತ್ತು ಬಿ ಬೌಲ್ಟ್ 4
ಶುಭಮನ್‌ ಗಿಲ್‌ ಸಿ ಬಟ್ಲರ್‌ ಬಿ ಸಂದೀಪ್‌ 45
ಸಾಯಿ ಸುದರ್ಶನ್‌ ರನೌಟ್‌ 20
ಹಾರ್ದಿಕ್‌ ಪಾಂಡ್ಯ ಸಿ ಜೈಸ್ವಾಲ್‌ ಬಿ ಚಹಲ್‌ 28
ಡೇವಿಡ್‌ ಮಿಲ್ಲರ್‌ ಸಿ ಹೆಟ್‌ಮೈರ್‌ ಬಿ ಸಂದೀಪ್‌ 46
ಅಭಿನವ್‌ ಮನೋಹರ್‌ ಸಿ ಪಡಿಕ್ಕಲ್‌ ಬಿ ಝಂಪ 27
ರಾಹುಲ್‌ ತೆವಾಟಿಯಾ ಔಟಾಗದೆ 1
ರಶೀದ್‌ ಖಾನ್‌ ರನೌಟ್‌ 1
ಅಲ್ಜಾರಿ ಜೋಸೆಫ್ ಔಟಾಗದೆ 0
ಇತರ 5
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 177
ವಿಕೆಟ್‌ ಪತನ: 1-5, 2-32, 3-91, 4-121, 5-166, 6-175, 7-178.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 4-0-46-1
ಸಂದೀಪ್‌ ಶರ್ಮ 4-0-25-2
ಆ್ಯಡಂ ಝಂಪ 4-0-32-1
ಆರ್‌. ಅಶ್ವಿ‌ನ್‌ 4-0-37-0
ಯಜುವೇಂದ್ರ ಚಹಲ್‌ 4-0-36-1

ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಗಿಲ್‌ ಬಿ ಪಾಂಡ್ಯ 1
ಜಾಸ್‌ ಬಟ್ಲರ್‌ ಬಿ ಶಮಿ 0
ದೇವದತ್ತ ಪಡಿಕ್ಕಲ್‌ ಸಿ ಮೋಹಿತ್‌ ಬಿ ರಶೀದ್‌ 26
ಸಂಜು ಸ್ಯಾಮ್ಸನ್‌ ಸಿ ಮಿಲ್ಲರ್‌ ಬಿ ಅಹ್ಮದ್‌ 60
ರಿಯಾನ್‌ ಪರಾಗ್‌ ಸಿ ಮಿಲ್ಲರ್‌ ಬಿ ರಶೀದ್‌ 5
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 56
ಧ್ರುವ ಜುರೆಲ್‌ ಸಿ ಶರ್ಮಾ ಬಿ ಶಮಿ 18
ರವಿಚಂದ್ರನ್‌ ಅಶ್ವಿ‌ನ್‌ ಸಿ ತೆವಾಟಿಯಾ ಬಿ ಶಮಿ 10
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 03
ಒಟ್ಟು (19.2 ಓವರ್‌ಗಳಲ್ಲಿ 7 ವಿಕೆಟ್‌ಗೆ) 179
ವಿಕೆಟ್‌ ಪತನ: 1-2, 2-4, 3-47, 4-55, 5-114, 6-161, 7-171
ಬೌಲಿಂಗ್‌: ಮೊಹಮ್ಮದ್‌ ಶಮಿ 4-1-25-3
ಹಾರ್ದಿಕ್‌ ಪಾಂಡ್ಯ 4-0-24-1
ಅಲ್ಜಾರಿ ಜೋಸೆಫ್ 3-0-47-0
ರಶೀದ್‌ ಖಾನ್‌ 4-0-46-2
ಮೋಹಿತ್‌ ಶರ್ಮಾ 2-0-7-0
ನೂರ್‌ ಅಹ್ಮದ್‌ 2.2-0-29-1

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.