ಬೀದಿ ನಾಯಿಯೊಂದಿಗೆ ಅಪ್ರಾಪ್ತ ಮಕ್ಕಳ ಮದುವೆ ಮಾಡಿಸಿದ ಗ್ರಾಮಸ್ಥರು: ಕಾರಣವೇ ವಿಚಿತ್ರ
Team Udayavani, Apr 19, 2023, 9:47 AM IST
ಭುವನೇಶ್ವರ್: ದೇಶದಲ್ಲಿ ನಂಬಿಕೆಗಳು ಎಷ್ಟು ಇದೆಯೋ, ಅಷ್ಟೇ ದೊಡ್ಡಮಟ್ಟದಲ್ಲಿ ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿ ಆಚರಣೆಯ ಸಲುವಾಗಿ ಮೂಡನಂಬಿಕೆಗಳು ಜೀವಂತವಾಗಿದೆ. ಮಕ್ಕಳನ್ನು ದುಷ್ಟ ಶಕ್ತಿಗಳಿಂದ ದೂರಮಾಡುವ ಸಲುವಾಗಿ ನಾಯಿಗಳೊಂದಿಗೆ ವಿವಾಹ ಮಾಡಿಸಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಸೊರೊ ಬ್ಲಾಕ್ನ ಬಂಧ್ಸಾಹಿ ಗ್ರಾಮದ ಹೋ ಬುಡಕಟ್ಟು ಜನಾಂಗದವರಾದ ಸಿಂಗ್ಗಳಲ್ಲಿ ಒಂದು ನಂಬಿಕೆಯಿದೆ. ಅದು ಏನೆಂದರೆ ಸಣ್ಣ ಮಕ್ಕಳ ದವಡೆಯಲ್ಲಿ ಮೇಲಿನ ಹಲ್ಲು ಮೊದಲು ಹುಟ್ಟಿದರೆ ಅದು ಅಶುಭವೆಂದು ನಂಬಲಾಗುತ್ತದೆ. ಹಾಗಾದರೆ ಮಕ್ಕಳಿಗೆ ಕೆಡುಕುಗಳು ಆಗುತ್ತವೆ ಎನ್ನುವುದನ್ನು ಈ ಬುಡಕಟ್ಟ ಜನಾಂಗದ ನಂಬಿಕೆ. ಮಕ್ಕಳಿಗೆ ಸಂಭವಿಸಬಹುದಾದ ಅಪಾಯವನು ಹೋಗಲಾಡಿಸುವ ವಿಧಾನವೆಂದರೆ ಆ ಮಕ್ಕಳನ್ನು ನಾಯಿಯೊಂದಿಗೆ ಮದುವೆ ಮಾಡಿಸಬೇಕು. ಹಾಗೆ ಮಾಡಿದರೆ ಮಕ್ಕಳಿಗೆ ಬರುವ ಅಪಾಯ ಆ ನಾಯಿಗಳಿಗೆ ಬರುತ್ತದೆ ಎನ್ನುವುದು ಈ ಬುಡಕಟ್ಟು ಜನಾಂಗದ ನಂಬಿಕೊಂಡು ಬಂದಿರುವ ಹಳೆಯ ನಂಬಿಕೆ.
ಈ ಕಾರಣದಿಂದಾಗಿ ಇಬ್ಬರು ಅಪ್ರಾಪ್ತ ಮಕ್ಕಳ ಮದುವೆಗಾಗಿ ಎರಡು ಬೀದಿ ನಾಯಿಗಳನ್ನು ಹುಡುಕಿದ್ದಾರೆ. ಅದರಂತೆ 11 ವರ್ಷದ ಬಾಲಕ ತಪನ್ ಸಿಂಗ್ (ದಾರಿ ಸಿಂಗ್ನ ಮಗ) ಹೆಣ್ಣು ನಾಯಿಯನ್ನು ಮದುವೆಯಾಗಿದ್ದರೆ, 7 ವರ್ಷದ ಲಕ್ಷ್ಮಿಯನ್ನು (ಬುಟುನ ಮಗಳು) ಗಂಡು ನಾಯಿಯೊಂದಿಗೆ ಮದುವೆ ಮಾಡಸಿದ್ದಾರೆ. ಈ ಮದುವೆ ಮಕ್ಕಳನ್ನು ದುಷ್ಟ ಶಕ್ತಿಗಳಿಂದ ದೂರವಿಡುತ್ತದೆ ಎನ್ನುವುದು ಅವರ ನಂಬಿಕೆ.
ಮದುವೆಯ ಆಚರಣೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ನಡೆಯಿತು. ಮದುವೆ ಶಾಸ್ತ್ರೋಕ್ತವಾಗಿ ನಡೆದ ನಂತರ ಆಗಬಹುದಾದ ಅನಿಷ್ಟವು ನಾಯಿಗಳಿಗೆ ಹೋಗುತ್ತದೆ ಎಂದು ಸಮುದಾಯವು ನಂಬುತ್ತದೆ. ಇದು ವೈಜ್ಞಾನಿಕವಾಗಿ ಯಾವುದೇ ಅರ್ಥವನ್ನು ಹೊಂದಿಲ್ಲ. ಆದರೆ ಹಿರಿಯರು ನಂಬಿಕೊಂಡು ಬಂದಿದ್ದರಿಂದ ಇದು ಮುಂದುವರೆದಿದೆ ಎಂದು ಗ್ರಾಮದ 28 ವರ್ಷದ ಪದವೀಧರ ಸಾಗರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.