ಸೋನಿಯಾ ಸಂಬಂಧಿಯ ಆಸ್ತಿಯನ್ನೇ ಕಬಳಿಸಲು ಯತ್ನಿಸಿದ್ದನಂತೆ ಅತೀಕ್ ಅಹ್ಮದ್
Team Udayavani, Apr 22, 2023, 7:22 AM IST
ಪ್ರಯಾಗ್ರಾಜ್: ಯುಪಿಎ ಅಧಿಕಾರವಧಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಸೋನಿಯಾ ಗಾಂಧಿ ಅವರ ಸಂಬಂಧಿಯ ಆಸ್ತಿಯನ್ನೇ ಕಬಳಿಸಲು ಮಾಫಿಯಾ ಡಾನ್ ಅತೀಕ್ ಅಹ್ಮದ್ ಯತ್ನಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಸೋನಿಯಾ ಗಾಂಧಿ ಅವರ ಮಾವ ಫಿರೋಜ್ ಗಾಂಧಿ ಕುಟುಂಬದ ವೀರಾ ಗಾಂಧಿ ಪ್ರಯಾಗ್ರಾಜ್ನ ನಿವಾಸಿ. ನಗರದ ಐಷಾರಾಮಿ ಸಿವಿಲ್ ಲೈನ್ಸ್ ಪ್ರದೇಶದ ಎಂ.ಜಿ.ಮಾರ್ಗ್ನಲ್ಲಿರುವ ಪ್ಯಾಲೇಸ್ ಥಿಯೇಟರ್ನ ಮಾಲೀಕರಾಗಿದ್ದರು. ಇದು ಅವರಿಗೆ ಕುಟುಂಬದ ಪಾಲಿನಿಂದ ಬಂದ ಆಸ್ತಿಯಾಗಿತ್ತು.
2007ರಲ್ಲಿ ಈ ಆಸ್ತಿಯ ಮೇಲೆ ಅತೀಕ್ ಕಣ್ಣಿಟ್ಟಿದ್ದ. ತನ್ನ ಸಹಚರರಿಂದ ಈ ಆಸ್ತಿಯನ್ನು ವಶಪಡಿಸಿ ಕೊಂಡು, ಥಿಯೇಟರ್ಗೆ ಬೀಗ ಜಡಿದಿದ್ದ.
ಈ ಸಂಬಂಧ ವೀರಾ ಗಾಂಧಿ ಸ್ಥಳೀಯ ಪೊಲೀಸರು ಮತ್ತು ಆಡಳಿತದ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಅವರು ಸೋನಿಯಾ ಗಾಂಧಿ ಅವರಿಗೆ ಈ ವಿಚಾರವನ್ನು ಮುಟ್ಟಿಸಿದ್ದರು. ಈ ವೇಳೆ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದರು. ನಂತರ ಸ್ಥಳೀಯ ಜಿಲ್ಲಾಡಳಿತದ ಮೂಲಕ ಪುನಃ ಈ ಆಸ್ತಿಯು ವೀರಾ ಗಾಂಧಿ ಅವರ ಕೈಸೇರಿತು. ಕೆಲ ವರ್ಷಗಳ ನಂತರ ವೀರಾ ಗಾಂಧಿ ಅವರು ಪ್ರಯಾಗ್ರಾಜ್ನಲ್ಲಿರುವ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ.
ಗುಡ್ಡು ಗೆ ಹುಡುಕಾಟ: ಅತೀಕ್ ಸಹಚರ ಗುಡ್ಡು ಮುಸ್ಲಿಂ ಪತ್ತೆಗಾಗಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್ಟಿಎಫ್) ಒಡಿಶಾದಲ್ಲಿ ಬೀಡುಬಿಟ್ಟಿದೆ. ಈ ಸಂಬಂಧ ಬಾರ್ಗಾಡ್ನಲ್ಲಿ ವ್ಯಕ್ತಿಯೊಬ್ಬನನ್ನು 2 ದಿನಗಳ ಹಿಂದೆ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಅಸದ್ ಕಾಲಿಯಾ ಬಂಧನ
ಅತೀಕ್ನ ಬಲಗೈ ಬಂಟ ಅಸದ್ ಕಾಲಿಯಾನನ್ನು ಪ್ರಯಾಗ್ರಾಜ್ನಲ್ಲಿ ಉತ್ತರ ಪ್ರದೇಶ ಪೊಲೀ ಸರು ಬಂಧಿಸಿದ್ದು, ಆತನಿಂದ ದೇಸಿ ಬಂದೂಕು ಮತ್ತು ಸಜೀವ ಗುಂಡುಗಳನ್ನು ವಶಪಡಿಸಿ ಕೊಂಡಿದ್ದಾರೆ. ಈತ ಅತೀಕ್ನ ಎಲ್ಲ ರಿಯಲ್ ಎಸ್ಟೇಟ್ ದಂಧೆಗಳನ್ನು ನೋಡಿಕೊಳ್ಳುತ್ತಿದ್ದ. ಈತನ ತಲೆಗೆ ಉತ್ತರ ಪ್ರದೇಶ ಪೊಲೀಸರು 50,000 ರೂ. ಬಹುಮಾನ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttarakhand: 200 ಅಡಿ ಆಳದ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್, 30ಕ್ಕೂ ಹೆಚ್ಚು ಸಾ*ವು
Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್ ಬುಲ್ ಶ್ವಾನದ ಕಿತ್ತ ಕಿವಿ ಜೋಡಣೆ
Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!
Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!
Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hiriyur: ಹೆದ್ದಾರಿಗೆ ಮಣ್ಣು ಕುಸಿದು ಹತ್ತು ಕಿ.ಮೀ ಟ್ರಾಫಿಕ್ ಜಾಮ್
Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?
Bengaluru: ಬಿಡಿಎಗೆ ವಂಚನೆ: 19 ಮಂದಿ ವಿರುದ್ಧ ಕೇಸ್
Uttarakhand: 200 ಅಡಿ ಆಳದ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್, 30ಕ್ಕೂ ಹೆಚ್ಚು ಸಾ*ವು
Kanahosahalli: ಹೋಬಳಿಯಾದ್ಯಂತ ಭಾರಿ ಮಳೆ; ಹಳ್ಳದಲ್ಲಿ ಕೊಚ್ಚಿಹೋದ ಮಿನಿ ಲಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.