ಹಲವರ Twitter ಖಾತೆಗೆ ಸದ್ದಿಲ್ಲದೆ ಮರಳಿದ‌ ಬ್ಲೂಟಿಕ್‌!

ಎರಡೇ ದಿನಗಳಲ್ಲಿ ಎಲಾನ್‌ ಮಸ್ಕ್ ಯೂಟರ್ನ್; ಅಲಿಯಾ, ಶಾರುಖ್‌, ಟ್ರಂಪ್‌ ಟ್ವಿಟರ್‌ ಖಾತೆಗಳ ಬ್ಲೂಟಿಕ್‌ ವಾಪಸ್‌

Team Udayavani, Apr 24, 2023, 7:44 AM IST

twitter

ನವದೆಹಲಿ: ಚಂದಾದಾರಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ಭಾರತವೂ ಸೇರಿದಂತೆ ಜಗತ್ತಿನ ಹಲವು ಖ್ಯಾತನಾಮರ ಟ್ವಿಟರ್‌ ಖಾತೆಯಲ್ಲಿದ್ದ ಬ್ಲೂಟಿಕ್‌ ತೆಗೆದುಹಾಕಿದ ಎರಡೇ ದಿನಗಳಲ್ಲಿ ಎಲಾನ್‌ ಮಸ್ಕ್ ಯೂಟರ್ನ್ ಹೊಡೆದಿದ್ದಾರೆ. ಭಾನುವಾರ ಸದ್ದಿಲ್ಲದೇ ಹಲವು ಪ್ರಮುಖರ ಖಾತೆಯ ದೃಢೀಕೃತ ಬ್ಲೂಟಿಕ್‌ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸಿದ್ದಾರೆ.
10 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಖಾತೆಗಳ ಬ್ಲೂಟಿಕ್‌ ಅನ್ನು ಟ್ವಿಟರ್‌ ಪುನಸ್ಥಾಪಿಸಿದೆ. ಇದರಿಂದಾಗಿ ಯಾವುದೇ ಹಣ ಪಾವತಿಸದೇ ಬಾಲಿವುಡ್‌ ತಾರೆಯರಾದ ಅಲಿಯಾ ಭಟ್‌, ಶಾರುಖ್‌ ಖಾನ್‌, ಕ್ರಿಕೆಟಿಗ ವಿರಾಟ್‌ ಕೋಹ್ಲಿ, ಎಂ.ಎಸ್‌.ಧೋನಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‌ಗೇಟ್ಸ್‌ ಸೇರಿದಂತೆ ಪ್ರಮುಖರಿಗೆ ಬ್ಲೂಟಿಕ್‌ ವ್ಯವಸ್ಥೆ ಮತ್ತೆ ಸಿಕ್ಕಿದೆ.

ಇನ್ನು, ಭಾನುವಾರ ಟ್ವೀಟ್‌ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ “ಟ್ವಿಟರ್‌ನ ಪಾವತಿ ವ್ಯವಸ್ಥೆಗೆ ಚಂದಾದಾರನಾಗಿದ್ದೇನೆ. ಜತೆಗೆ ಫೋನ್‌ ನಂಬರ್‌ ಕೂಡ ನೀಡಿದ್ದೇನೆ. ಆದರೂ, ನನಗೆ ಬ್ಲೂಟಿಕ್‌ ವ್ಯವಸ್ಥೆ ಇಲ್ಲ” ಎಂದು ಬರೆದುಕೊಂಡಿದ್ದಾರೆ.

ತಮಾಷೆಯ ಸಂಗತಿಯೆಂದರೆ, ಹಲವು ಮಂದಿ ಕೊನೆಯುಸಿರೆಳೆದ ಪ್ರಮುಖರ ಟ್ವಿಟರ್‌ ಖಾತೆಗಳಿಗೆ ಕೂಡ ಬ್ಲೂಟಿಕ್‌ ವ್ಯವಸ್ಥೆ ಪುನಸ್ಥಾಪಿಸಲಾಗಿದೆ. ಟ್ವಿಟರ್‌ನ ಸಹ ಸಂಸ್ಥಾಪಕ ಜ್ಯಾಕ್‌ ಡೋರ್ಸೆ ಅವರಿಗೆ ಇನ್ನೂ ಬ್ಲೂಟಿಕ್‌ ವ್ಯವಸ್ಥೆಯನ್ನು ನೀಡಿಲ್ಲ.

ತೂ ಚೀಸ್‌ ಬಡೀ ಹೆ ಮಸ್ಕ್ ಮಸ್ಕ್…
ಬ್ಲೂಟಿಕ್‌ ಕಳೆದುಕೊಂಡ ಕೂಡಲೇ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರು, ದೃಢೀಕೃತ ಖಾತೆಗೆ ಚಂದಾದಾರಿಕೆ ಪಡೆದುಕೊಂಡಿದ್ದರು. ಆದರೆ, ಅವರಿಗೆ ಬ್ಲೂಟಿಕ್‌ ಸಿಕ್ಕಿರಲಿಲ್ಲ. ಹೀಗಾಗಿ, “ಟ್ವಿಟರ್‌ ಭಯ್ನಾ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಖಾತೆಗೆ ಬ್ಲೂಟಿಕ್‌ ನೀಡಿ” ಎಂದು ಕೋರಿದ್ದರು. ನಂತರ ಅವರ ಬ್ಲೂಟಿಕ್‌ ಅನ್ನೂ ಮರಳಿಸಲಾಯಿತು. ಇದಕ್ಕೆ ಧನ್ಯವಾದ ಹೇಳಿ ಟ್ವೀಟ್‌ ಮಾಡಿದ ಬಿಗ್‌ಬಿ, ಬಾಲಿವುಡ್‌ನ‌ ಎವರ್‌ಗ್ರೀನ್‌ ಹಾಡು “ತೂ ಚೀಸ್‌ ಬಡೀ ಹೆ ಮಸ್ತ್ ಮಸ್ತ್…” ಅನ್ನು ಸ್ವಲ್ಪ ಬದಲಾಯಿಸಿ, “ತೂ ಚೀಸ್‌ ಬಡೀ ಹೆ ಮಸ್ಕ್ ಮಸ್ಕ್…” ಎಂದು ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.