ಧಾರವಾಡ: ವಿಶ್ವೇಶತೀರ್ಥ ಪಬ್ಲಿಕ್‌ ಸ್ಕೂಲ್‌ ಉದ್ಘಾಟನೆ


Team Udayavani, Apr 25, 2023, 1:31 PM IST

ಧಾರವಾಡ: ವಿಶ್ವೇಶತೀರ್ಥ ಪಬ್ಲಿಕ್‌ ಸ್ಕೂಲ್‌ ಉದ್ಘಾಟನೆ

ಧಾರವಾಡ: ಇಲ್ಲಿನ ಭಕ್ತರು ಉತ್ಕೃಷ್ಟ ವಿದ್ಯಾಕೇಂದ್ರವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಮಾಳಮಡ್ಡಿಯ ವಿಶ್ವೇಶತೀರ್ಥ ಪಬ್ಲಿಕ್‌ ಸ್ಕೂಲ್‌ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಿಶ್ವೇಶತೀರ್ಥರು ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತಿದ್ದರು.ಶಾಲೆ-ಕಾಲೇಜುಗಳನ್ನು ನಿರ್ಮಿಸುವುದರೊಂದಿಗೆ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ
ಆರಂಭಿಸಿ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಅನುಕೂಲತೆ ಕಲ್ಪಿಸಿದ್ದಾರೆ ಎಂದರು.

ವಿದ್ಯಾಕಾಶಿಯಲ್ಲಿ ಮತ್ತೊಂದು ಶಾಲೆ ಆರಂಭಗೊಳ್ಳುತ್ತಿರುವುದು ಹರ್ಷ ತಂದಿದೆ. ಮಾಳಮಡ್ಡಿಯ ವಿಶ್ವೇಶತೀರ್ಥ ಮಾರ್ಗದಲ್ಲಿ ವಿಶ್ವೇಶತೀರ್ಥ ಶಾಲೆ ಆರಂಭಗೊಂಡಿದೆ. ಪ್ರಹ್ಲಾದನಂಥ ಮಕ್ಕಳನ್ನು ರೂಪಿಸುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಬೇಕು. ಕೇವಲ ಗುರುಕುಲದ ಮಕ್ಕಳಿಗೆ ಮಾತ್ರವಲ್ಲ, ಲೌಕಿಕ ಶಿಕ್ಷಣ ಪಡೆಯುವ ಮಕ್ಕಳಿಗೂ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರ ಕಲಿಸುವುದು ಅವಶ್ಯಕ ಎಂದು ಹೇಳಿದರು.

ಜೆಎಸ್ಸೆಸ್‌ ಸಂಸ್ಥೆಯ ಕಾರ್ಯದರ್ಶಿ ಡಾ| ಅಜಿತಪ್ರಸಾದ ಮಾತನಾಡಿ, ಗುರುಕುಲಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗುರುಕುಲ ಆಧಾರಿತ ಶಿಕ್ಷಣ ನೀಡುವುದರಿಂದ ಶ್ರೀ ವಿಶ್ವೇಶತೀರ್ಥ ಸ್ಕೂಲ್‌ ನಿಸ್ಸಂದೇಹವಾಗಿ ಪ್ರಖ್ಯಾತ ಶಾಲೆಯಾಗಿ ಹೊರಹೊಮ್ಮಲಿದೆ ಎಂದರು. ಎಸ್‌.ಎಂ. ದಾಂಡೇವಾಲೆ ಮಾತನಾಡಿದರು. ಕೆ.ಆರ್‌. ದೇಶಪಾಂಡೆ, ಡಾ| ಆನಂದ ಪಾಂಡುರಂಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಪಾಲ್ಗೊಂಡು ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆದರು. ಹು-ಧಾ
ಪಶ್ಚಿಮ ಕ್ಷೇತ್ರದ ಚುನಾವಣೆಯಲ್ಲಿ ಪುನರ್‌ ಸ್ಪರ್ಧಿಸಿರುವ ಅರವಿಂದ ಬೆಲ್ಲದ ಅವರಿಗೆ ಶ್ರೀ ಗಳು ಆಶೀರ್ವದಿಸಿ ಶುಭ ಕೋರಿದರು. ವಿಶ್ರಾಂತ ಕುಲಪತಿ ಡಾ| ಪ್ರಮೋದ ಗಾಯಿ, ಡಾ| ಎಸ್‌.ಆರ್‌. ಕೌಲಗುಡ್ಡ, ಶ್ರೀಕಾಂತ ಕೆಮ್ತೂರ ಇದ್ದರು.

ಟಾಪ್ ನ್ಯೂಸ್

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು … ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು …ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ

Mudhol: ಸಭೆಗೆ ತಡವಾಗಿ ಬಂದ ಉಸ್ತುವಾರಿ ಸಚಿವರು… ಸಭೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು

Mudhol: ಸಭೆಗೆ ತಡವಾಗಿ ಬಂದ ಉಸ್ತುವಾರಿ ಸಚಿವರು… ಸಭೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು

Udupi: ಸರಕಾರಿ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ

Udupi: ಸರಕಾರಿ ವಸತಿ ಗೃಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ

Yathanal

MUDA Case: ಸಿದ್ದರಾಮಯ್ಯ ಅಧಿಕಾರದಲ್ಲಿದ್ರೆ ತನಿಖೆ ಮೇಲೆ ಪ್ರಭಾವ ಖಚಿತ: ಶಾಸಕ ಯತ್ನಾಳ್‌

Let Siddaramaiah bow to the court order and resign: Pramod Muthalik

Hubli; ಕೋರ್ಟ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರಮೋದ ಮುತಾಲಿಕ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು … ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು …ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Clown Festival: ಮಂಗಳೂರಿನಲ್ಲಿ ಅಕ್ಟೋಬರ್ 4 ರಿಂದ ಅಂತರಾಷ್ಟ್ರೀಯ ವಿದೂಷಕ ಉತ್ಸವ

Clown Festival: ಮಂಗಳೂರಿನಲ್ಲಿ ಅಕ್ಟೋಬರ್ 4ರಿಂದ ಅಂತರಾಷ್ಟ್ರೀಯ ವಿದೂಷಕ ಉತ್ಸವ

8

Arrested: ಜಲಮಂಡಳಿಯ ಸೆಂಟ್ರಿಂಗ್‌ ಸಾಮಗ್ರಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ 

Fraud: ಸರ್ಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ವಂಚನೆ 

Fraud: ಸರ್ಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ವಂಚನೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.