ಸಿಂಧು, ಶ್ರೀಕಾಂತ್ ಜಯ: ಲಕ್ಷ್ಯ ಪರಾಭವ
Team Udayavani, Apr 27, 2023, 6:22 AM IST
ದುಬಾೖ: ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ಗೆಲುವಿನ ಓಟ ಆರಂಭಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಲಕ್ಷ್ಯ ಸೇನ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.
ವನಿತಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಪಿ.ವಿ. ಸಿಂಧು ತೈಪೆಯ ವೆನ್ ಚಿ-ಸು ಅವರನ್ನು 46 ನಿಮಿಷ ಗಳ ಹೋರಾಟದ ಬಳಿಕ 21-15, 22-20 ಅಂತರದಿಂದ ಮಣಿಸು ವಲ್ಲಿ ಯಶಸ್ವಿಯಾದರು. ಸಿಂಧು ಅವರ ಮುಂದಿನ ಎದುರಾಳಿ ಚೀನದ ಹಾನ್ ಯೆ.
ಪುರುಷರ ಸಿಂಗಲ್ಸ್ನಲ್ಲಿ ಕೆ. ಶ್ರೀಕಾಂತ್ ಬಹ್ರೈನ್ನ ಅದ್ನಾನ್ ಇಬ್ರಾಹಿಂ ಅವರನ್ನು ಕೇವಲ 25 ನಿಮಿಷ ಗಳಲ್ಲಿ 21-13, 21-8 ಅಂತರ ದಿಂದ ಹಿಮ್ಮೆಟ್ಟಿಸಿದರು.
ವನಿತಾ ಡಬಲ್ಸ್, ಮಿಶ್ರ ಡಬಲ್ಸ್
ವನಿತಾ ಡಬಲ್ಸ್ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿ ಚಂದ್ ಸೇರಿಕೊಂಡು ಇಂಡೋನೇಷ್ಯಾದ ಲ್ಯಾನ್ನಿ ಟ್ರಿಯಾ ಮಾಯಾಸರಿ-ರಿಬ್ಕಾ ಸುಗಿಯಾರ್ಟೊ ಜೋಡಿಯನ್ನು 17-21, 21-17, 21-18ರಿಂದ ಪರಾಭವಗೊಳಿಸಿದರು.
ಮಿಶ್ರ ಡಬಲ್ಸ್ನಲ್ಲಿ ರೋಹನ್ ಕಪೂರ್-ಸಿಕ್ಕಿ ರೆಡ್ಡಿ ಜಯ ಸಾಧಿಸಿದ್ದಾರೆ. ಇವರು ಮಲೇಷ್ಯಾದ ಚಾನ್ ಪೆಂಗ್ ಸೂನ್-ಚೆ ಯೀ ಸೀ ವಿರುದ್ಧ 21-12, 21-16ರಿಂದ ಗೆದ್ದರು.
ಕಾಮನ್ವೆಲ್ತ್ ಗೇಮ್ಸ್ ಬಂಗಾರ ಪದಕ ವಿಜೇತ ಲಕ್ಷ್ಯ ಸೇನ್ ಅವರನ್ನು ವಿಶ್ವದ 7ನೇ ನಂಬರ್ ಆಟಗಾರ ಸಿಂಗಾಪುರದ ಲೋಹ್ ಕೀನ್ ವ್ಯೂ 21-7, 23-21 ಅಂತರದಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.