ಲಕ್ನೋ ಸೂಪರ್‌ ಜೈಂಟ್ಸ್‌ V\s ಪಂಜಾಬ್‌ ಕಿಂಗ್ಸ್‌: ಬೃಹತ್‌ ಮೊತ್ತ ಪೇರಿಸಿದ ಲಕ್ನೋ


Team Udayavani, Apr 29, 2023, 6:32 AM IST

PUN LUCK

ಮೊಹಾಲಿ: ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನವೊಂದಕ್ಕೆ ಸಾಕ್ಷಿಯಾದ ಲಕ್ನೋ ಸೂಪರ್‌ ಜೈಂಟ್ಸ್‌ ಆತಿಥೇಯ ಪಂಜಾಬ್‌ ಕಿಂಗ್ಸ್‌ ವಿರುದ್ಧ 5 ವಿಕೆಟಿಗೆ 257 ರನ್‌ ಪೇರಿಸಿ ಮೊಹಾಲಿ ಮೈದಾನದಲ್ಲಿ ಮೆರೆದಾಡಿದೆ.

ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ 250 ರನ್‌ ಗಡಿ ದಾಟಿದ 2ನೇ ತಂಡವೆಂಬ ಹೆಗ್ಗಳಿಕೆ ಲಕ್ನೋ ತಂಡದ್ದಾಯಿತು. ಪುಣೆ ವಾರಿಯರ್ ಎದುರಿನ 2013ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ 5 ವಿಕೆಟಿಗೆ 263 ರನ್‌ ಪೇರಿಸಿದ್ದು ದಾಖಲೆ.

ಕಲ್‌ ಮೇಯರ್, ಮಾರ್ಕಸ್‌ ಸ್ಟೋಯಿನಿಸ್‌, ಆಯುಷ್‌ ಬದೋನಿ, ನಿಕೋಲಸ್‌ ಪೂರಣ್‌ ಅವರೆಲ್ಲ ಸೇರಿಕೊಂಡು ಮೊಹಾಲಿ ಅಂಗಳದಲ್ಲೇ ಪಂಜಾಬ್‌ ದಾಳಿಯನ್ನು ಧೂಳೀಪಟಗೈದರು. ಸ್ಟೋಯಿನಿಸ್‌ ಸರ್ವಾಧಿಕ 72, ಮೇಯರ್ 54, ಪೂರಣ್‌ 45 ಮತ್ತು ಬದೋನಿ 43 ರನ್‌ ರನ್‌ ಮಾಡಿದರು. ಲಕ್ನೋ ಸರದಿಯಲ್ಲಿ ಒಟ್ಟು 27 ಬೌಂಡರಿ, 14 ಸಿಕ್ಸರ್‌ ಸಿಡಿಯಲ್ಪಟ್ಟಿತು. ರಾಹುಲ್‌ ಚಹರ್‌ ಹೊರತುಪಡಿಸಿ ಪಂಜಾಬ್‌ನ ಉಳಿದ ಯಾವುದೇ ಬೌಲರ್‌ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಪಂಜಾಬ್‌ ವಿರುದ್ಧ ಮೊದಲ ಸುತ್ತಿನ ಪಂದ್ಯವನ್ನು 2 ವಿಕೆಟ್‌ಗಳಿಂದ ಕಳೆದುಕೊಂಡಿದ್ದ ಲಕ್ನೋ ಇಲ್ಲಿ ಭರ್ಜರಿ ಬ್ಯಾಟಿಂಗ್‌ಗೆ ಮುಂದಾಯಿತು. ಪವರ್‌ ಪ್ಲೇಯಲ್ಲಿ 2 ವಿಕೆಟಿಗೆ 74 ರನ್‌ ಪೇರಿಸಿದ ಲಕ್ನೋ, 8ನೇ ಓವರ್‌ನಲ್ಲೇ ನೂರರ ಗಡಿ ಮುಟ್ಟಿತು. 8ನೇ ಓವರ್‌ ಎಸೆಯಲು ಬಂದ ಗೂರ್ನೂರ್‌ ಬ್ರಾರ್‌ 24 ರನ್‌ ನೀಡಿ ದಂಡಿಸಿಕೊಂಡರು. 10 ಓವರ್‌ ಮುಕ್ತಾಯವಾದಾಗ ಲಕ್ನೋ ಸ್ಕೋರ್‌ 128ಕ್ಕೆ ಏರಿತ್ತು. ಆಗಲೇ ಬೃಹತ್‌ ಮೊತ್ತದ ಸೂಚನೆ ಲಭಿಸಿತ್ತು. ಉಳಿದ 10 ಓವರ್‌ಗಳಲ್ಲಿ ಲಕ್ನೋ ಮತ್ತೆ 129 ರನ್‌ ಪೇರಿಸಿತು. 15.5 ಓವರ್‌ಗಳಲ್ಲಿ 200 ರನ್‌ ಹರಿದು ಬಂತು.

ನಾಯಕ ಕೆ.ಎಲ್‌. ರಾಹುಲ್‌ (12) ಅವರನ್ನು ಬೇಗನೇ ಕಳೆದುಕೊಂಡಿತಾದರೂ ಕೈಲ್‌ ಮೇಯರ್ ಸಿಡಿದು ನಿಂತರು. ಪವರ್‌ ಪ್ಲೇಯಲ್ಲೇ ಅವರ ಅರ್ಧ ಶತಕ ಪೂರ್ತಿ ಗೊಂಡದ್ದು ವಿಶೇಷ. ಮೇಯರ್ 54 ರನ್‌ಗೆ ಎದುರಿಸಿದ್ದು ಕೇವಲ 24 ಎಸೆತ. ಸಿಡಿಸಿದ್ದು 7 ಬೌಂಡರಿ, 4 ಸಿಕ್ಸರ್‌.

ಬದೋನಿ 43 ರನ್‌ಗಾಗಿ 24 ಎಸೆತ ಎದುರಿಸಿದರು. ಇದು 3 ಬೌಂಡರಿ, 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಸ್ಟೋಯಿನಿಸ್‌ ಅವರದು ಸರ್ವಾಧಿಕ 72 ರನ್‌ ಕೊಡುಗೆ. ಎದುರಿಸಿದ್ದು 40 ಎಸೆತ. ಅವರು 6 ಫೋರ್‌, 5 ಸಿಕ್ಸರ್‌ ಬಾರಿಸಿದರು. ಹ್ಯಾಟ್ರಿಕ್‌ ಬೌಂಡರಿಯೊಂದಿಗೆ ಬ್ಯಾಟಿಂಗ್‌ಗೆ ಮುಹೂರ್ತವಿರಿಸಿದ ಪೂರಣ್‌ 19 ಎಸೆತಗಳಿಂದ 45 ರನ್‌ ಚಚ್ಚಿದರು (7 ಬೌಂಡರಿ, 1 ಸಿಕ್ಸರ್‌). ಡೆತ್‌ ಓವರ್‌ಗಳಲ್ಲಿ ಲಕ್ನೋ 73 ರನ್‌ ರಾಶಿ ಹಾಕಿತು.

ಟಾಪ್ ನ್ಯೂಸ್

12

BBK11: 11 ವರ್ಷದ ಬಿಗ್‌ಬಾಸ್‌ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಸಲಿ ಮತ್ತು ಯಾಕೆ?

ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ

ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ

Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!

Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

AUSvsPAK: Australia announces squad for Pak series: Team has no captain!

AUSvsPAK: ಪಾಕ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡಕ್ಕೆ ನಾಯಕನೇ ಇಲ್ಲ!

Shimoga: ಹೆಚ್ಚಾಯ್ತು ಕಾಟ; ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ

Shimoga: ಹೆಚ್ಚಾಯ್ತು ಕಾಟ; ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AUSvsPAK: Australia announces squad for Pak series: Team has no captain!

AUSvsPAK: ಪಾಕ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡಕ್ಕೆ ನಾಯಕನೇ ಇಲ್ಲ!

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

1–ind-ccc

Team India; ಮುಂಬಯಿ ಟೆಸ್ಟ್‌ಗೆ ಮುನ್ನ 2 ದಿನ ಕಡ್ಡಾಯ ಅಭ್ಯಾಸ!

1-ms

Mohammed Shami ಗೈರು ಭಾರತಕ್ಕೆ ದೊಡ್ಡ ಹೊಡೆತ ಎಂದ ಆಸೀಸ್‌ ಕೋಚ್‌: ಕ್ಷಮೆ ಯಾಚಿಸಿದ ಶಮಿ

Tejasvi1

Goa: ದಿ ಐರನ್​ ಮ್ಯಾನ್​ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಜನಪ್ರತಿನಿಧಿ ತೇಜಸ್ವಿ ಸೂರ್ಯ!

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

12

BBK11: 11 ವರ್ಷದ ಬಿಗ್‌ಬಾಸ್‌ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಸಲಿ ಮತ್ತು ಯಾಕೆ?

ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ

ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ

Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!

Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!

4(1)

Kaup ಕೊಳಚೆ ಮುಕ್ತಿಗೆ ಸರ್ವರ ಸಹಕಾರ

3

Mallikatte: ಸಿಟಿ ಆಸ್ಪತ್ರೆ ಜಂಕ್ಷನ್‌; ರಸ್ತೆ ಕಾಂಕ್ರೀಟ್‌ ಕಾಮಗಾರಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.