![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, May 3, 2023, 10:49 AM IST
ದೆಹಲಿ: ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಚರಂಡಿಗೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಬಂಧಿಸಿರುವ ಘಟನೆ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ಆರೋಪಿಗಳನ್ನು ಶುಭಮ್ ಮತ್ತು ಅವರ ಪತ್ನಿ ಫಾತಮಾ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಪ್ರಮುಖ ಆರೋಪಿ ಸನ್ನಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತಮ್ ನಗರದ ಶಿವ ವಿಹಾರ್ನ ಡಂಪ್ಯಾರ್ಡ್ ಎದುರಿನ ನಜಾಫ್ಗಢ ಬಳಿಯ ಚರಂಡಿಯಲ್ಲಿ ಬೃಹತ್ ಬ್ಯಾಗ್ ವೊಂದು ಬಿದ್ದಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿ ನೋಡಿದಾಗ, ಬ್ಯಾಗ್ ನೊಳಗೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಿಸಾಕಿರುವುದು ಗೊತ್ತಾಗಿದೆ. ಕೂಡಲೇ ತನಿಖೆಗಿಳಿದ ಪೊಲೀಸರಿಗೆ ಬ್ಯಾಗ್ ನಲ್ಲಿರುವ ಶವ ವಿಕಾಸ್ ನಗರದ ನಿವಾಸಿ ಉಮೇಶ್ ಅವರದೆಂದು ಗೊತ್ತಾಗಿದೆ.
ಭಾನುವಾರ ಸಂಜೆ ಉಮೇಶ್ ತನ್ನ ಪರಿಚಯವುಳ್ಳ ಸನ್ನಿ ಎಂಬಾತನ ಕೋಣೆಗೆ ಹೋಗಿದ್ದಾರೆ. ಅಲ್ಲಿ ಕೆಲವರು ಅಮಲು ಪದಾರ್ಥಗಳನ್ನು ಸೇವಿಸುತ್ತಿದ್ದರು. ಈ ವೇಳೆ ಅಲ್ಲಿದ ದಂಪತಿ ಹಾಗೂ ಸನ್ನಿ ಅವರೊಂದಿಗೆ ಉಮೇಶ್ ಅವರ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು ಉಮೇಶ್ ಅವರನ್ನ ಕೊಲೆ ಮಾಡುವವರೆಗೂ ಹೋಗಿದೆ. ಉಮೇಶ್ ನನ್ನು ಕೊಲೆಗೈದು ಅವರ ಶವವನ್ನು ಬ್ಯಾಗ್ ನಲ್ಲಿಟ್ಟು ಚರಂಡಿಗೆ ಎಸೆಯಲಾಗಿದೆ. ಈ ಕುರಿತು ದಂಪತಿಯನ್ನು ಬಂಧಿಸಲಾಗಿದ್ದು, ಸನ್ನಿ ಪರಾರಿ ಆಗಿದ್ದಾನೆ. ಘಟನೆಗೆ ನಿಖರವಾದ ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.