![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 5, 2023, 4:39 PM IST
ಕನ್ನಡ ಚಿತ್ರರಂಗದಲ್ಲಿ ಸಂಪೂರ್ಣ ಲವ್ ಸ್ಟೋರಿ ಚಿತ್ರಗಳು ತೆರೆಗೆ ಬಂದು ಬಹಳ ದಿನಗಳೇ ಆಗಿವೆ. ಇದೀಗ ಬೇಸಿಗೆಯ ಬಿಸಿಲಿಗೆ ತಂಪೆರೆಯಲು ಸಂಪೂರ್ಣ ಲವ್ ಸ್ಟೋರಿ “ಫೀಲ್ ಮೈ ಲವ್’ ಎಂಬ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಸಂಪೂರ್ಣ ಹೊಸಬರ ತಂಡವೇ ನಿರ್ಮಾಣ ಮಾಡಿರುವ ಚಿತ್ರಕ್ಕೆ ಡಿ.ಟಿ ರಮೇಶ್ ನಿರ್ದೇಶನವಿದೆ. “ಜಿ.ಟಿ ಪ್ರೊಡಕ್ಷನ್’ ಬ್ಯಾನರ್ನಡಿಯಲ್ಲಿ ಗೌಸ್ ಪೀರ್ಸಾಬ್ ಚಿತ್ರ ನಿರ್ಮಿಸುತ್ತಿದ್ದು, ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರ “ಫೀಲ್ ಮೈ ಲವ್’ ಆಗಿದೆ.
“ಚಿತ್ರದಲ್ಲಿ ನನ್ನ ಪಾತ್ರ ಎರಡು ಶೇಡ್ಗಳಲ್ಲಿ ಮೂಡಿಬಂದಿದೆ. ಟೀನೇಜ್ ಹುಡುಗನ ಶೇಡ್ ಮಾಡುವುದು ಚಾಲೆಂಜಿಂಗ್ ಆಗಿ ಇತ್ತು. ಅದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದೇನೆ. 4-5 ವರ್ಷದ ಗ್ಯಾಪ್ ನಂತರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇತ್ತೀಚೆಗೆ ಕನ್ನಡದಲ್ಲಿ ಸಂಪೂರ್ಣ ಲವ್ ಸ್ಟೋರಿ ಚಿತ್ರ ಬಂದಿದ್ದು ಕಡಿಮೆ. ನಮ್ಮ ಚಿತ್ರ ಒಂದು ಭಿನ್ನ ಕಥೆ, ಹೊಸ ಪ್ರತಿಭೆಗಳನ್ನು ಒಳಗೊಂಡ ಚಿತ್ರವಾಗಿದೆ. ನಮ್ಮ ಚಿತ್ರ ಫ್ಯಾಮಿಲಿ ಆಡಿಯೆನ್ಸ್ಗೆ ಇಷ್ಟವಾಗುತ್ತದೆ.’ ಎಂಬುದು ಚಿತ್ರದ ನಾಯಕ ರಾಕೇಶ್ ಮಾತು.
ಚಿತ್ರದಲ್ಲಿ ನಾಯಕ ನಾಯಕಿಯಾಗಿ ರಾಕೇಶ್, ಚರಿತಾ ಕಾಣಿಸಿಕೊಂಡಿದ್ದಾರೆ. ಪ್ರೀತು ಪೂಜಾ, ಮಂಜುನಾಥ್ ಹೆಗಡೆ, ಬೃಂದೇಶ್ವರೀ ಬಾನವಾಡಿ, ವಿಜಯ್ ಕಾಶಿ, ಅಭಿಲಾಶ್, ಬುಲೆಟ್ ವಿನು, ರಾಜೇಶ್, ಯೋಗಿ ಆಚಾರ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ಚಿತ್ರಕ್ಕೆ ಕಥೆ, ನಿರ್ದೇಶನ ಡಿ.ಟಿ ರಮೇಶ್, ಗೌಸ್ ಪೀರ್ಸಾಬ್ ನಿರ್ಮಾಣ, ವಿನಯ್ ಹೊಸದುರ್ಗ ಛಾಯಾಗ್ರಹಣ, ಸಂಗೀತ ರಾಹುಲ್ ರಾಜ್ ಮ್ಯೂಸಿಕ್, ದೀಪಕ್ ಗೌಡ ಸಂಕಲನ, ರಾಘು ಆರ್,ಜೆ ನೃತ್ಯ ಸಂಯೋಜನೆ, ಮಂಜು ನಾಗಪ್ಪ ಸಾಹಸವಿದೆ. ನಿಹಾಲ್ ತಾವರೂ, ವಿಜಯ್ ಪ್ರಕಾಶ್, ಐಶ್ವರ್ಯ ರಂಗರಾಜನ್ ಹಿನ್ನೆಲೆ ಗಾಯನ ಚಿತ್ರಕ್ಕಿದೆ.
ಬೆಂಗಳೂರು, ಬಳ್ಳಾರಿ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮೇ 12 ರಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.