ICSE, ISC Result ಪ್ರಕಟ ; ಉತ್ತರ ಪ್ರದೇಶ ಮೇಲುಗೈ
Team Udayavani, May 14, 2023, 7:11 PM IST
ಟಾಪರ್ ಗಳಾದ ಮೊಹಮ್ಮದ್ ಆರ್ಯನ್ ತಾರಿಕ್ ಮತ್ತು ಅವಿಶಿ ಸಿಂಗ್
ಹೊಸದಿಲ್ಲಿ: ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ICSE 10 ಮತ್ತು ISC 12ನೇ ತರಗತಿಯ ಫಲಿತಾಂಶಗಳನ್ನು ಭಾನುವಾರ ಮೇ 14 ರಂದು ಪ್ರಕಟಿಸಲಾಗಿದೆ. ಭಾರತೀಯ ಶಾಲಾ ಪ್ರಮಾಣಪತ್ರ (ISC), ಮತ್ತು ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ICSE) ಫಲಿತಾಂಶಗಳನ್ನು ಪತ್ರಿಕಾಗೋಷ್ಠಿಯ ಮೂಲಕ ಪ್ರಕಟಿಸಲಾಗಿದೆ.
ಉತ್ತರ ಪ್ರದೇಶದ ವಿದ್ಯಾರ್ಥಿಗಳು ಐಸಿಎಸ್ಇ (10 ನೇ ತರಗತಿ) ಮತ್ತು ಐಎಸ್ಸಿ (12 ನೇ ತರಗತಿ) ಪರೀಕ್ಷೆಗಳ ಮೆರಿಟ್ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. 10ನೇ ತರಗತಿಯಲ್ಲಿ 98.94 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರು ಈ ಬಾರಿ ಬಾಲಕರಿಗಿಂತ ಮೇಲುಗೈ ಸಾಧಿಸಿದ್ದಾರೆ. ಉತ್ತೀರ್ಣ ಶೇಕಡಾ 96.93 ರಷ್ಟಿದೆ. 12 ನೇ ತರಗತಿಯಲ್ಲಿ 96.93 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ವರ್ಷ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು ಎಸ್ಎಂಎಸ್ನಲ್ಲಿಯೂ ಪ್ರವೇಶಿಸಬಹುದಾಗಿದೆ. ಒಟ್ಟಾರೆಯಾಗಿ, 2023 ರ ಐಸಿಎಸ್ಇ, ಐಎಸ್ಸಿ ಪರೀಕ್ಷೆಗಳಿಗೆ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಫಲಿತಾಂಶಗಳ ಜತೆಗೆ, ಸಿಐಎಸ್ಸಿಇ 10ನೇ ಮತ್ತು 12ನೇ ಸ್ಥಾನಕ್ಕೆ ಟಾಪರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಐಎಸ್ಸಿಯಲ್ಲಿ, ರಾಜಾಜಿಪುರಂನ ಸಿಟಿ ಮಾಂಟೆಸ್ಸರಿ ಇಂಟರ್ ಕಾಲೇಜಿನ ಮೊಹಮ್ಮದ್ ಆರ್ಯನ್ ತಾರಿಕ್ ಅಖಿಲ ಭಾರತ ಟಾಪರ್ ಆಗಿದ್ದು, ದೇಶದ ಇತರ ನಾಲ್ವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅವರು 400 ರಲ್ಲಿ 399 ಅಂಕಗಳನ್ನು ಪಡೆಡಿದ್ದಾರೆ (99.75%).
ICSE ಪರೀಕ್ಷೆಯಲ್ಲಿ, ಆಗ್ರಾದ ಸೇಂಟ್ ಆಂಥೋನಿ ಜೂನಿಯರ್ ಕಾಲೇಜಿನ ಉತ್ತರ ಪ್ರದೇಶದ ವಿದ್ಯಾರ್ಥಿನಿ ಅವಿಶಿ ಸಿಂಗ್ 500 ರಲ್ಲಿ 499 ಅಂಕಗಳನ್ನು (99.8%) ಗಳಿಸುವ ಮೂಲಕ ದೇಶದ ಇತರ ಎಂಟು ಮಂದಿಯೊಂದಿಗೆ ಮೊದಲ ರ್ಯಾಂಕ್ ಅನ್ನು ಹಂಚಿಕೊಂಡಿದ್ದಾರೆ.
ಐಎಸ್ಸಿಯಲ್ಲಿ 398 ಅಂಕಗಳನ್ನು (99.5%) ಪಡೆಯುವ ಮೂಲಕ ಉತ್ತರ ಪ್ರದೇಶದ ಐದು ವಿದ್ಯಾರ್ಥಿಗಳು ಜಂಟಿಯಾಗಿ ದೇಶದ ಇತರರೊಂದಿಗೆ ಎರಡನೇ ಶ್ರೇಣಿಯನ್ನು ಹಂಚಿಕೊಂಡಿದ್ದಾರೆ. ಅವರೆಂದರೆ ಲಕ್ನೋದ ಲಾ ಮಾರ್ಟಿನಿಯರ್ ಗರ್ಲ್ಸ್ನ ಯೋಗಂಜನಾ ಸಿಂಗ್, ಸಿಎಂಎಸ್ ರಾಜೇಂದ್ರ ನಗರದ ತನಿಷ್ಕ್ ಸೋಂಕರ್, ಸಿಎಂಎಸ್ ರಾಜಾಜಿಪುರಂನ ಅರ್ಪಿತಾ ಸಿಂಗ್, ಕಾನ್ಪುರದ ಚಿಂಟೆಲ್ಸ್ ಶಾಲೆಯ ಆಹಾನಾ ಅರೋರಾ ಮತ್ತು ಸಿಎಂಎಸ್ ಗೋಮತಿ ನಗರದ ಆಯೇಶಾ ಖಾನ್.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!
Kasaragod: ಗಾಯಕಿಯ ಮಾನಭಂಗ; ದೂರು: ಗಾಯಕ ರಿಯಾಸ್ ಬಂಧನ
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.