ಮಂಗಳೂರು: ಮತ ಯಂತ್ರಗಳಿಗೆ ಇನ್ನೂ ಆರು ತಿಂಗಳು ಭದ್ರತೆ!
Team Udayavani, May 16, 2023, 8:10 AM IST
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13 ರಂದು ಪೂರ್ಣಗೊಂಡು ಫಲಿತಾಂಶ ಹೊರಬಿದ್ದಿದ್ದರೂ ಬಳಕೆಯಾದ ಮತಯಂತ್ರಗಳು ಕನಿಷ್ಠ 6 ತಿಂಗಳು ಆಯಾಯ ಜಿಲ್ಲೆಯಲಿಲ ವಿಶೇಷ ಭದ್ರತೆಯಲ್ಲಿರುತ್ತವೆ.
ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು ಮುಂಬರುವ ದಿನದಲ್ಲಿ ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಸಂದರ್ಭ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡು ಮರು ಮತ ಎಣಿಕೆಗೆ ಸೂಚಿಸಲೂ ಬಹುದು. ಹಾಗಾಗಿ ಎಲ್ಲ ಮತಯಂತ್ರಗಳನ್ನು ವಿಶೇಷ ಭದ್ರತೆಯಲ್ಲಿ ಇರಿಸಲಾಗುತ್ತದೆ. ಆದ್ದರಿಂದ ಯಂತ್ರಗಳಲ್ಲಿರುವ ಮತಗಳನ್ನು ಅಳಿಸುವುದಾಗಲೀ ಇತರ ಚುನಾವಣೆಗೆ ತತ್ಕ್ಷಣಕ್ಕೆ ಬಳಸುವುದಾಗಲೀ ಮಾಡುವಂತಿಲ್ಲ.
ಆಯಾ ಜಿಲ್ಲೆಯಲ್ಲಿರುವ ಮತ ಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂ ವ್ಯಾಪ್ತಿಗೆ ಬಿಗಿ ಭದ್ರತೆ ವಿಧಿಸಿದ್ದು, ವಿಧಾನಸಭಾವಾರು ಮತಯಂತ್ರ ಗಳನ್ನು ಜೋಡಿಸಿಡಲಾಗಿದೆ. ಕೊಠಡಿ ಸುತ್ತ ಸಿಸಿ ಕೆಮರಾ ಅಳವಡಿಸಲಾಗಿದೆ. 24 ಗಂಟೆಯೂ ಬಿಗಿ ಪೊಲೀಸ್ ಭದ್ರತೆ ಇರಲಿದೆ. ಯಾವುದೇ ಕಾರಣಕ್ಕೂ ಕೊಠಡಿಯನ್ನು ತೆರೆಯುವಂತಿಲ್ಲ. ತೆರೆಯಲೇ ಬೇಕಾದರೆ ಎಲ್ಲ ರಾಜಕೀಯ ಪಕ್ಷಗಳವರ ಗಮನಕ್ಕೆ ತರಲಾಗುತ್ತದೆ.
ಕೇಂದ್ರ ಚುನಾವಣ ಆಯೋಗ ಕೈಗೊಳ್ಳುವ ವಿ.ಸಭೆ ಹಾಗೂ ಲೋಕಸಭೆಗೆ ಬಳಸುವ ಮತಯಂತ್ರಗಳನ್ನು ಸ್ಥಳೀಯ ಚುನಾವಣೆಗೆ ಬಳಸುವುದಿಲ್ಲ. ಮತ ಎಣಿಕೆ ಆದ ಬಳಿಕ ನ್ಯಾಯಾಲಯದಲ್ಲಿ ಆಕ್ಷೇಪಣೆ ಇಲ್ಲದ ಮತಯಂತ್ರಗಳನ್ನು ಮತ್ತೂಂದು ಚುನಾವಣೆಗೆ ಬಳಸಲಾಗುತ್ತದೆ.
ಹೈದರಾಬಾದ್ನ ಮತಯಂತ್ರ
ಹಿಂದಿನ ಬಿಇಎಲ್ ಉತ್ಪಾದಿತ ಮತಯಂತ್ರಗಳ ಬದಲಿಗೆ ಹೈದರಾಬಾದ್ನ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಸಂಸ್ಥೆಯವರು ರೂಪಿಸಿದ “ಮಾರ್ಕ್ 3′ ಮತಯಂತ್ರಗಳನ್ನು ಈ ಬಾರಿ ತರಿಸಲಾಗಿತ್ತು. ಒಂದು ಮತಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಹೆಸರಿಗೆ ಅವಕಾಶವಿತ್ತು. ಹಿಂದಿನ ಮತಯಂತ್ರಗಳಲ್ಲಿ ಒಂದು ಕಂಟ್ರೋಲ್ ಯುನಿಟ್ಗೆ 4 ಬ್ಯಾಲೆಟ್ ಯುನಿಟ್ಗಳನ್ನಷ್ಟೇ ಜೋಡಿಸಲು ಸಾಧ್ಯವಿತ್ತು. ಈಗಿನದ್ದರಲ್ಲಿ 24 ಬ್ಯಾಲೆಟ್ ಯುನಿಟ್ ಜೋಡಿಸಬಹುದಾಗಿದೆ.
ಪ್ರತೀ ತಿಂಗಳು ಪರಿಶೀಲನೆ
ಇವಿಎಂ, ವಿವಿ ಪ್ಯಾಟ್, ಮತ್ತು ಕಂಟ್ರೋಲ್ ಯುನಿಟ್ಗಳನ್ನು ಜಿಲ್ಲಾ ಕೇಂದ್ರದಲ್ಲೇ ಸಂಗ್ರಹಿಸಿ ಇಡಲಾಗುತ್ತದೆ. ಹೀಗೆ ಇರಿಸಿರುವ ಮತಯಂತ್ರಗಳನ್ನು ಪ್ರತೀ ತಿಂಗಳು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಥವಾ ಉಪ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೊಠಡಿಗಳಿಗೆ ಮತ್ತೆ ಬೀಗ ಹಾಕಿ ಸೀಲ್ ಮಾಡುತ್ತಾರೆ. ಕೊಠಡಿಗಳ ಕೀಲಿ ಕೈಗಳು ಈ ಇಬ್ಬರು ಅಧಿಕಾರಿಗಳ ಸುಪರ್ದಿಯಲ್ಲೇ ಇರುತ್ತವೆ.
ವಿವಿ ಪ್ಯಾಟ್ ಸ್ಲಿಪ್ ಪ್ರತ್ಯೇಕ ಲಕೋಟೆಯಲ್ಲಿ!
ಈ ಬಾರಿ ವಿವಿ ಪ್ಯಾಟ್ನ ಸ್ಲಿಪ್ಗ್ಳನ್ನು ತೆಗೆದು ಕಪ್ಪು ಲಕೋಟೆಯಲ್ಲಿ ಹಾಕಿ ಭದ್ರತೆಯಲ್ಲಿಡಲಾಗಿದೆ. ವಿವಿ ಪ್ಯಾಟ್ ಒಳಗೆ ಇರುವ ಪೇಪರ್ ರೋಲ್ಗಳನ್ನು ತೆಗೆದು ಭದ್ರತೆಯಲ್ಲಿಡಲಾಗಿದೆ. ಯಂತ್ರಗಳನ್ನು ಕೂಡ ಅವುಗಳಿಗೆ ಇರುವ ಪ್ರತ್ಯೇಕ ಬಾಕ್ಸ್ಗಳಲ್ಲಿ ಹಾಕಿ ಸ್ಟ್ರಾಂಗ್ ರೂಂನಲ್ಲಿ ಕಾಪಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.