![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 21, 2023, 7:10 AM IST
ಮುಂಬಯಿ: ಐದು ಬಾರಿಯ ಚಾಂಪಿಯನ್, ಕಳೆದ ಸಲ ಕೊನೆಯ ಸ್ಥಾನದ ಸಂಕಟ ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ಆದರೆ ಆರರಿಂದ ಮೇಲೆದ್ದು ಅಗ್ರ ನಾಲ್ಕರೊಳಗೆ ಬಂದು ನಿಲ್ಲುವ ಒತ್ತಡದಲ್ಲಿದೆ. ಇದಕ್ಕಿರುವುದು ಒಂದೇ ಅವಕಾಶ.
ರವಿವಾರ ತವರಿನ ವಾಂಖೇಡೆ ಅಂಗಳದಲ್ಲಿ ಸನ್ರೈಸರ್ ಹೈದ ರಾಬಾದ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿರುವ ರೋಹಿತ್ ಪಡೆ ಇಲ್ಲಿ ದೊಡ್ಡ ಗೆಲುವನ್ನು ದಾಖಲಿಸಿದರಷ್ಟೇ ಮುನ್ನಡೆ ಸಾಧ್ಯ. ಮುಂಬೈ ರನ್ರೇಟ್ ಇನ್ನೂ ಮೈನಸ್ನಲ್ಲಿ ಇರುವುದರಿಂದ ಒತ್ತಡ ಹೆಚ್ಚು. ಆರ್ಸಿಬಿ, ರಾಜಸ್ಥಾನ್ ತಂಡಗಳೆರಡು ಮುಂಬೈಗೆ ಭಾರೀ ಪೈಪೋಟಿ ನೀಡುತ್ತಿವೆ.
ಮುಂಬೈ ಕಳೆದೆರಡು ಪಂದ್ಯಗಳಲ್ಲಿ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಗುಜರಾತ್ ವಿರುದ್ಧ ವಾಂಖೇಡೆಯಲ್ಲಿ 5ಕ್ಕೆ 218 ರನ್ ಪೇರಿಸಿಯೂ ಗೆಲುವಿನ ಅಂತರ 27 ರನ್ನಿಗೆ ಸೀಮಿತಗೊಂಡಿತು. ಬಳಿಕ ಲಕ್ನೋ ವಿರುದ್ಧ ಅವರದೇ ಅಂಗಳದಲ್ಲಿ 5 ರನ್ ಸೋಲುಂಡಿತು. ಇಲ್ಲವಾದರೆ ಮುಂಬೈ ಈಗ ತೃತೀಯ ಸ್ಥಾನದಲ್ಲಿ ನೆಲೆಸಿರಬೇಕಿತ್ತು.
ಬೌಲರ್ ಬಹಳ ದುಬಾರಿ
ವಾಂಖೇಡೆಯಲ್ಲಿ ಮುಂಬೈ ಬೌಲರ್ ಬಹಳ ದುಬಾರಿ ಆಗುತ್ತಿ ರುವುದನ್ನು ಗಮನಿಸಬಹುದು. ಸತತ 4 ಪಂದ್ಯಗಳಲ್ಲಿ ಅದು ಎದುರಾಳಿಗೆ 200 ರನ್ ಬಿಟ್ಟುಕೊಟ್ಟಿತ್ತು; ಆರ್ಸಿಬಿ ಈ ಮೊತ್ತದಿಂದ ಒಂದೇ ರನ್ ಹಿಂದುಳಿದಿತ್ತು. ರವಿವಾರದ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಬೌಲಿಂಗ್ ಮತ್ತೆ ಕೈಕೊಟ್ಟರೆ ಬ್ಯಾಟರ್ಗಳು ಒತ್ತಡಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಕೂಟದಿಂದ ನಿರ್ಗಮಿ ಸಿದ್ದರಿಂದ ಹೈದರಾಬಾದ್ಗೆ ಇದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಕೊನೆಯಲ್ಲೊಂದು ಜೋಶ್ ತೋರಿ ಗೆಲುವಿನೊಂದಿಗೆ ಗುಡ್ಬೈ ಹೇಳುವ ಯೋಜನೆಯಂತೂ ಇದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.