Nuclear plant: ವಿಶ್ವದ ಬೃಹತ್ ಪರಮಾಣು ಸ್ಥಾವರಕ್ಕೆ ಸಂಕಷ್ಟ !
ಉದ್ಯೋಗಿ ಮಾಡಿದ ಎಡವಟ್ಟಿನಿಂದ ಸಂಸ್ಥೆಗೆ ತಲೆಬಿಸಿ
Team Udayavani, May 26, 2023, 7:55 AM IST
ಟೋಕ್ಯೋ: ಸುರಕ್ಷತಾ ಮಾನದಂಡಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ, ವಿಶ್ವದ ಬೃಹತ್ ಪರಮಾಣು ಸ್ಥಾವರ ಟೋಕ್ಯೋ ಎಲೆಕ್ಟ್ರಿಕ್ ಪವರ್ ಕಂಪನಿ (ಟೆಪ್ಕೋ) ಕಾರ್ಯಾಚರಣೆಗೆ ಇತ್ತೀಚೆಗೆ ತಡೆ ನೀಡಲಾಗಿತ್ತು. ಇದೀಗ ಅದೇ ಸಂಸ್ಥೆಯ ಉದ್ಯೋಗಿಯೊಬ್ಬರ ನಿರ್ಲಕ್ಷ್ಯದಿಂದ ಕಂಪನಿಯ ಅಗತ್ಯ ದಾಖಲೆಗಳು ಕಳೆದುಹೋಗಿದ್ದು, ಇದರಿಂದ ಸಂಸ್ಥೆ ಮತ್ತಷ್ಟು ಕಾಲ ನಿರ್ಬಂಧ ಎದುರಿಸುವಂತಾಗಿದೆ. 2011ರ ಫುಕುಶಿಮಾ ದುರಂತದ ಬಳಿಕ ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರವು ರಾಷ್ಟ್ರದ ಕೆಲವೇ ಕೆಲವು ಪರಮಾಣು ಸ್ಥಾವರಗಳಿಗೆ ಮಾತ್ರ ಕಾರ್ಯಾಚರಣೆ ಅನುಮತಿ ನೀಡಿದೆ.
33 ಸ್ಥಾವರ ಕಾರ್ಯಾಚರಣೆ ಮರು ಆರಂಭಗೊಳಿಸಲು ಅನುಮತಿಗಾಗಿ ಕಾಯುತ್ತಿದ್ದು, ಈ ಪೈಕಿ ಟೆಪ್ಕೋ ಕೂಡ ಸೇರಿದೆ. ಆದರೆ, ಸುರಕ್ಷತೆ ವಿಚಾರದಲ್ಲಿ ಅಗತ್ಯ ಮಾನದಂಡ ಪೂರೈಸದ ಹಿನ್ನೆಲೆ ಕಳೆದವಾರವಷ್ಟೇ ಪ್ರಾಧಿಕಾರ, ಟೆಪ್ಕೋ ಕಾರ್ಯಾಚರಣೆಗೆ ತಡೆ ನೀಡಿತ್ತು. ಬಳಿಕ ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಇರುವಂಥ ದಾಖಲೆಗಳನ್ನು ಪ್ರಸ್ತುತಪಡಿಸಲು ಸಂಸ್ಥೆ ಯೋಜಿಸಿದ್ದು, ಕಂಪನಿಯ ಉದ್ಯೋಗಿಯೊಬ್ಬರಿಗೆ ದಾಖಲೆಗಳನ್ನು ತರುವಂತೆ ಸೂಚಿಸಿದೆ. ಆದರೆ, ಉದ್ಯೋಗಿ ದಾಖಲೆಗಳನ್ನು ತನ್ನ ಕಾರಿನ ಮೇಲೆ ಇಟ್ಟು ಮರೆತು ಕಾರು ಚಲಾಯಿಸಿದ್ದು, ದಾಖಲೆಗಳು ಎಲ್ಲೋ ಬಿದ್ದುಹೋಗಿವೆ. ಈಗ ದಾಖಲೆಗಳ ಕೆಲವೇ ಪುಟಗಳು ಸಿಕ್ಕಿದ್ದು, ಇನ್ನೂ 38 ಪುಟಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಒಟ್ಟಾರೆ ಉದ್ಯೋಗಿಯ ಎಡವಟ್ಟು ಸಂಸ್ಥೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel ಸರ್ಜಿಕಲ್ ಸ್ಟ್ರೈಕ್: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್ ಬಾಂಬ್!
India ವರ, ಇರಾಕ್, ಇರಾನ್ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು
Sunita Williams;ಬಾಹ್ಯಾಕಾಶದಿಂದ ಕರೆ ತರುವ ಕಾರ್ಯ ಆರಂಭ
Sheikh Hasina ಭಾರತದಿಂದ ಗಡೀಪಾರಿಗೆ ಬಾಂಗ್ಲಾದೇಶ ಪ್ರಯತ್ನ?
UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್ ಬೆಂಬಲ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ
FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್ಐಆರ್ ಹಾಕಿದ ಗುರುಗ್ರಾಮ್ ಪೊಲೀಸರು
Mangaluru: ಕೌನ್ ಬನೇಗಾ ಕರೋಡ್ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.