ದೇವನಹಳ್ಳಿ: ಸಿದ್ಧವಾಯ್ತು ಕಸ ವಿಲೇವಾರಿ ಘಟಕ; ಜೂನ್‌ 15ರೊಳಗೆ ಘಟಕ ಉದ್ಘಾಟನೆ

6 ತಿಂಗಳ ಹಿಂದೆ ಗ್ರಾಪಂಯೂ ಮೂಲ ಭೂತ ಸೌಕರ್ಯ ವಂಚಿತವಾಗಿತ್ತು.

Team Udayavani, May 26, 2023, 3:34 PM IST

ದೇವನಹಳ್ಳಿ: ಸಿದ್ಧವಾಯ್ತು ಕಸ ವಿಲೇವಾರಿ ಘಟಕ; ಜೂನ್‌ 15ರೊಳಗೆ ಘಟಕ ಉದ್ಘಾಟನೆ

ದೇವನಹಳ್ಳಿ: ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿಸುವ ಸಲುವಾಗಿ ರಾಜ್ಯ ಸರಕಾರದ ಆದೇಶದಂತೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿ, ಆರೋಗ್ಯಕರ ಮತ್ತು ಸ್ವಚ್ಛ ಗ್ರಾಮ ಪಂಚಾಯಿತಿಗಳನ್ನಾಗಿಸುವ ಉದ್ದೇಶದಿಂದ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ.

ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಗಡಿ ಗ್ರಾಮದಲ್ಲಿ ಸುಸಜ್ಜಿತ ವಾದ 80/40 ಅಡಿಗಳ ಖಾಲಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿ, 9 ಬ್ಲಾಕ್‌ ಗಳನ್ನಾಗಿಸಿದ್ದು, ಘನ ತ್ಯಾಜ್ಯದ ಉಪಯುಕ್ತತೆ ಮತ್ತು ಕೊಂಡುಕೊಳ್ಳುವವರ ಅಗತ್ಯಕ್ಕೆ ಸಂಬಂಧಿಸಿದಂತೆ, ವಿವಿಧ ಹಂತದಲ್ಲಿ ಕಸವನ್ನು ವಿಂಗಡಿಸಿ ಶೇಖರಿಸಲಾಗುತ್ತಿದ್ದು, ಹಸಿ ಕಸ ವನ್ನು ಪ್ರತ್ಯೇಕಿಸಿ ಪ್ಲಾಸ್ಟಿಕ್‌ ಮತ್ತು ಇತರೆ ವಸ್ತುಗಳನ್ನು ತೆಗೆದು ಕಾಂಪೋಸ್ಟ್‌ (ನರೇಗಾ) ಅಡಿಯಲ್ಲಿ 10/15 ಅಡಿಯ
ನಿರ್ಮಾಣಗೊಂಡ ತೊಟ್ಟಿಯಲ್ಲಿ ತುಂಬಿಸ ಲಾಗುತ್ತದೆ.

ತುಂಬಿದ ಕಸದ ಮೇಲೆ ಇಎಂ ಸಲ್ಯೂಷನ್‌ ಅನ್ನು ಸಿಂಪಡಿಸಿ ಹಸಿಕಸ ಕೊಳೆತು ಗೊಬ್ಬರ ವನ್ನಾಗಿಸಲಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರದಂತೆ, ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಜ್ಜು ಗೊಳಿಸಲಾಗಿದೆ.

ಉದ್ಘಾಟನೆ ವಿಳಂಬಕ್ಕೆ ಕಾರಣ: ಕಳೆದ ಫೆಬ್ರವರಿಯಲ್ಲಿ ಘಟಕದ ಕಟ್ಟಡ ಕಾಮಗಾರಿ ಮುಕ್ತಯವಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿ ಯಲ್ಲಿದ್ದಿದ್ದರಿಂದ ಉದ್ಘಾಟನೆಗೆ ಅಡ್ಡಿಯಾಗಿ ವಿಳಂಬ ವಾಗಿತ್ತು. ಜೂ.15ರೊಳಗೆ ಸರಕಾರದ ಶಿಷ್ಟಾ ಚಾರದ ಅಡಿಯಲ್ಲಿ ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ನಿರ್ವಹಣೆ ಹೇಗೆ ?
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಹಳ್ಳಿಗಳು ಬರಲಿದ್ದು, ಈಗಾಗಲೇ ಎಸ್‌ಬಿಎಂ ಯೋಜನೆಯಡಿಯಲ್ಲಿ ಮತ್ತು ದಾನಿಗಳ ಸಹಕಾರದಲ್ಲಿ ಕಸವಿಲೇವಾರಿ ಟ್ಯಾಕ್ಟರ್‌, ಮಾರುತಿ ಸುಪರ್‌ ಕ್ಯಾರಿ ವಾಹನ ಇದ್ದು, ಸ್ವ-ಸಹಾಯ ಸಂಘದ 6 ಜನ ಸದಸ್ಯರನ್ನು ಒಳಗೊಂಡಂತಹ ಸ್ವಚ್ಛತಾಗಾರರನ್ನು ಒಡಂಬಡಿಕೆ ಮೂಲಕ ನೇಮಿಸಿಕೊಂಡಿದ್ದು, ಪ್ರತಿ ಹಳ್ಳಿಯಿಂದ ಒಣ/ಹಸಿ ಕಸವನ್ನು ಸಂಗ್ರಹಿಸಿ, ವಾರದ 3 ದಿನ (ದಿನ ಬಿಟ್ಟು ದಿನ) ದಿನಚರಿ ಮೂಲಕ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿ ಕ್ರಮವಹಿಸಲಾಗಿದೆ.

6 ತಿಂಗಳ ಹಿಂದೆ ಗ್ರಾಪಂಯೂ ಮೂಲ ಭೂತ ಸೌಕರ್ಯ ವಂಚಿತವಾಗಿತ್ತು. ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಪಂನಲ್ಲಿದ್ದ ವರ್ಗ 1ರ ಸ್ವಂತ ಸಂಪನ್ಮೂಲವನ್ನು ಬಳಸಿ ಕೊಂಡು ಸುಸಜ್ಜಿತವಾದ ಹೈಟೆಕ್‌ ಗ್ರಂಥಾ ಲಯ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು 2-3 ತಿಂಗಳಲ್ಲಿ ಪ್ರಾರಂಭಿಸಲು ಸಭೆಗಳನ್ನು ಕರೆದು ಸೂಕ್ತ ತೀರ್ಮಾನ ತೆಗೆದುಕೊಂಡು 4 ತಿಂಗಳ ಅವಧಿ ಯಲ್ಲಿ ಗ್ರಂಥಾಲಯ ಮತ್ತು ವಿಲೇವಾರಿ ಘಟಕವನ್ನು ನಿರ್ಮಾಣ ಮಾಡ ಲಾಗಿದೆ. ಈಗಾಗಲೇ ಗ್ರಂಥಾಲಯದಲ್ಲಿ
ಗ್ರಾಪಂ ವ್ಯಾಪ್ತಿಯ ನಾಗರೀಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, ಜೂ.15ರ ನಂತರ ಕಸ ವಿಲೇವಾರಿ ಘಟವೂ ಕಾರ್ಯ ನಿರ್ವಹಿಸಲು  ಸ್ವಚ್ಛ ಗ್ರಾಪಂಯನ್ನಾಗಿಸಲು ನಾಗರೀಕರ ಸಹಕಾರ ನೀಡಬೇಕು.
● ಪ್ರಕಾಶ್‌.ಎಚ್‌, ಪಿಡಿಒ, ಜಾಲಿಗೆ ಗ್ರಾಪಂ

 

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.