![Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು](https://www.udayavani.com/wp-content/uploads/2024/07/fraud-4-415x276.jpg)
ಸುಳ್ಯ: ಗುಡುಗು ಸಹಿತ ಗಾಳಿ-ಮಳೆ
Team Udayavani, May 30, 2023, 6:30 AM IST
![ಸುಳ್ಯ: ಗುಡುಗು ಸಹಿತ ಗಾಳಿ-ಮಳೆ](https://www.udayavani.com/wp-content/uploads/2023/05/thunder-strom-620x413.jpg)
ಸುಳ್ಯ/ಸುಬ್ರಹ್ಮಣ್ಯ: ಸುಳ್ಯ ಹಾಗೂ ಕಡಬ ತಾಲೂಕಿನ ಕೆಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕೆಲವೆಡೆ ಧಾರಕಾರ ಮಳೆ ಹಾಗೂ ಕೆಲವೆಡೆ ಕೇವಲ ಹನಿ ಮಳೆಯಾಗಿದೆ. ಕೆಲವೆಡೆ ಗುಡುಗು – ಗಾಳಿ ಮಾತ್ರವೇ ಬಂದಿದೆ. ಪಂಜ, ಬಳ್ಪ, ಬೆಳ್ಳಾರೆ, ಸುಳ್ಯ, ಸಂಪಾಜೆ, ಕೊಲ್ಲಮೊಗ್ರು, ಸುಬ್ರಹ್ಮಣ್ಯ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಬೆಳ್ತಂಗಡಿ: ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನಲ್ಲಿ ರಾತ್ರಿ 8 ಗಂಟೆ ಬಳಿಕ ಹಲವೆಡೆ ಗಾಳಿ, ಮಿಂಚು, ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸಂಜೆವರೆಗೆ ಬಿಸಿಲಿನಿಂದ ಕೂಡಿದ ವಾತಾವರಣವಿದ್ದು ರಾತ್ರಿ 8ರ ಬಳಿಕ ಚಾರ್ಮಾಡಿ, ಮುಂಡಾಜೆ ಸಹಿತ ಇತರೆಡೆ ಉತ್ತಮ ಮಳೆ ಕಂಡುಬಂತು.
ಭಾರೀ ಸಿಡಿಲು ಮಿಂಚಿನೊಂದಿಗೆ ಮುಂಡಾಜೆ, ಸತ್ಯನಪಲ್ಕೆ, ಉಜಿರೆ, ಬೆಳ್ತಂಗಡಿ, ದಿಡುಪೆ, ಮಾಚಾರ್, ಕೊಕ್ಕಡ – ಪಾರ್ಪಿಕಲ್ಲು ಮುಂತಾದ ಕಡೆ ಗುಡುಗು ಸಹಿತ ಮಳೆಯಾಗಿದೆ.
ಸೆಖೆಯ ವಾತಾವರಣ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ತೀವ್ರ ಸೆಖೆಯ ವಾತಾವರಣ ಮುಂದುವರಿದಿದೆ. ಸಂಜೆಯ ವೇಳೆ ಬೆಳ್ತಂಗಡಿ, ಕಡಬ, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ ಸೋಮವಾರ ಗರಿಷ್ಠ 35.6 ಡಿಗ್ರಿ ಹಾಗೂ ಕನಿಷ್ಠ 26.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಟಾಪ್ ನ್ಯೂಸ್
![Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು](https://www.udayavani.com/wp-content/uploads/2024/07/fraud-4-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Missing ನೇಲ್ಯಕುಮೇರ್: ತಡರಾತ್ರಿ ಬಾಡಿಗೆಗೆ ತೆರಳಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆMissing ನೇಲ್ಯಕುಮೇರ್: ತಡರಾತ್ರಿ ಬಾಡಿಗೆಗೆ ತೆರಳಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆ](https://www.udayavani.com/wp-content/uploads/2024/07/GIRISH-150x99.jpg)
Missing ನೇಲ್ಯಕುಮೇರ್: ತಡರಾತ್ರಿ ಬಾಡಿಗೆಗೆ ತೆರಳಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆ
![ಪುತ್ತೂರು: ಮುಚ್ಚಿಹೋದ ಶಾಲೆಯಿಂದ ಮುಚ್ಚಲಿದ್ದ ಶಾಲೆಗೆ ಜೀವದಾನ!](https://www.udayavani.com/wp-content/uploads/2024/07/Puttur-150x62.jpg)
ಪುತ್ತೂರು: ಮುಚ್ಚಿಹೋದ ಶಾಲೆಯಿಂದ ಮುಚ್ಚಲಿದ್ದ ಶಾಲೆಗೆ ಜೀವದಾನ!
![9-Bantwala](https://www.udayavani.com/wp-content/uploads/2024/07/9-Bantwala-150x90.jpg)
Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್
![6-belthangady](https://www.udayavani.com/wp-content/uploads/2024/07/6-belthangady-150x90.jpg)
Belthangady: ಉತ್ತಮ ಮಳೆ; ತೆಂಕಾರಂದೂರು ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ
![3-holiday](https://www.udayavani.com/wp-content/uploads/2024/07/3-holiday-150x90.jpg)
Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.