ಸವಾಲುಗಳ ನಡುವೆ ಬಂಪರ್‌ ರಾಗಿ ಬೆಳೆದ ಮಾದರಿ ರೈತ


Team Udayavani, May 30, 2023, 1:47 PM IST

tdy-10

ರಾಮನಗರ: ಕಾಡುಪ್ರಾಣಿಗಳ ಹಾವಳಿ, ತೀವ್ರ ಬಿಸಿಲು, ಕೂಲಿಕಾರ್ಮಿಕರ ಸಮಸ್ಯೆ, ನೀರು ಮತ್ತು ವಿದ್ಯುತ್‌ ಅಭಾವ ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆಯೂ ಬೇಸಿಗೆಯಲ್ಲಿ ಬಂಪರ್‌ ರಾಗಿ ಬೆಳೆ ಬೆಳೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ತಾಲೂಕಿನ ಜವಳಗೆರೆ ದೊಡ್ಡಿ ಗ್ರಾಮದ ರೈತ ರಾಮಯ್ಯ. ಪ್ರತಿ ಎಕರೆ ಭೂಮಿಯಲ್ಲಿ 12 ರಿಂದ 16 ಕ್ವಿಂಟಲ್‌ವರೆಗೆ ರಾಗಿ ಬೆಳೆದರೆ ಹೆಚ್ಚು. ಆದರೆ, ರಾಮಯ್ಯ ಅವರು ರಾಗಿಯನ್ನು ನಾಟಿಮಾಡಿದ್ದು ಒಳ್ಳೆ ಫಸಲು ಬಂದಿದೆ. ಈ ಬಾರಿ 20 ರಿಂದ 22 ಕ್ವಿಂಟಲ್‌ ರಾಗಿ ಬರಲಿದೆ ಎಂದು ಅನುಭವಿ ರೈತರು ಮತ್ತು ಕೃಷಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಸವಾಲುಗಳ ನಡುವೆ ಬೇಸಾಯ: ರಾಗಿ ಫ‌ಸಲು ಬೆಳೆಯಲು ರಾಮಯ್ಯ ಸಾಕಷ್ಟು ಸವಾಲು ಎದುರಿಸಿದ್ದಾರೆ. ಗುಡ್ಡದಂಚಿನಲ್ಲಿರುವ ಇವರ 1 ಎಕರೆ ಭೂಮಿಗೆ ಕಾಡುಪ್ರಾಣಿಗಳ ಹಾವಳಿ ನಿತ್ಯ ನಿರಂತರ. ಒಂದು ಕಡೆ ಕಾಡುಪ್ರಾಣಿಗಳ ಹಾವಳಿಯಾದರೆ ಮತ್ತೂಂದು ಕಡೆ ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್‌ ಪೂರೈಕೆ ಕಾಡುತ್ತಿದೆ. ರಾತ್ರಿಯಿಡೀ ಬೆಂಕಿ ಹಾಕಿಕೊಂಡು ಹೊಲದಲ್ಲಿ ಕಾವಲು ಕಾಯುತ್ತಿದ್ದ ರಾಮಯ್ಯ, ಆಗಾಗ್ಗೆ ಪಟಾಕಿ ಸಿಡಿಸಿ ಕಾಡುಹಂದಿ ಮತ್ತು ಕಾಡಾನೆ ಜಮೀನಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೀಗ ರಾಗಿ ಉತ್ತಮ ಫಸಲು ನೀಡಿದ್ದು, ಕಟಾವು ಆರಂಭಿಸಿದ್ದಾರೆ.

ಹೊಸ ತಳಿ: ಸುಧಾರಿತ ರಾಗಿ ತಳಿ ಎಂಎಲ್‌ 365 ರಾಗಿಯನ್ನು ಮಂಡ್ಯ ರೈತಸೇವಾ ಸಂಘದಲ್ಲಿ ಖರೀದಿಸಿದ್ದಾರೆ. ಬೇಸಿಗೆ ಸಮಯದಲ್ಲಿ ಈ ತಳಿ ಹೆಚ್ಚಿನ ಬಿಸಿಲನ್ನು ತಡೆದುಕೊಂಡು ಉತ್ತಮವಾಗಿ ಬೆಳೆಯುತ್ತದೆ ಎಂಬ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಈ ರಾಗಿಯನ್ನು ಒಟ್ಟಲು ಪಾತಿ ಮಾಡಿ, ಕೊಟ್ಟಿಗೆಗೊಬ್ಬರ ಹಾಗೂ ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರದಿಂದ ಒಟ್ಟಲು ಪಾತಿಯಲ್ಲಿ ಪೋಷಿಸಿ ನಿಗದಿತ ಅವಧಿಯಲ್ಲಿ ಇವರು ಬೆಳೆ ಬೆಳೆದ ಪರಿಣಾಮ ಉತ್ತಮ ಇಳುವರಿ ಪಡೆಯಲು ಕಾರಣವಾಗಿದೆ. ಯಾವುದೇ ರೋಗರುಜಿನಗಳಿಗೆ ಒಳಗಾಗದೆ ಬೆಳೆಯುವ ಈ ಬೆಳೆ ಉತ್ತಮ ಇಳುವರಿ ಜತೆಗೆ ರಾಗಿಹುಲ್ಲು ಸಹ ಸಮರ್ಪಕವಾಗಿ ಸಿಗುವುದರಿಂದ ರಾಸುಗಳ ಮೇವಿಗೂ ಅನುಕೂಲವಾಗುತ್ತದೆ ಎಂಬುದು ರೈತ ರಾಮಯ್ಯ ಅವರ ಅಭಿಪ್ರಾಯ.

ಕೈ ಬೋರಿನಿಂದ ನೀರು: ಬೇಸಿಗೆ ಬೆಳೆಯಾದ ರಾಗಿ ಬೆಳೆಗೆ ನೀರುಣಿಸಲು ರೈತ ರಾಮಯ್ಯ ಕೈ ಬೋರನ್ನು ಅವಲಂಬಿಸಿದ್ದಾರೆ. ಯಾವುದೇ ದೊಡ್ಡ ಯಂತ್ರ ಹಾಗೂ ರಿಗ್ಗಿಂಗ್‌ ಮಿಷನ್‌ ಬಳಸದೆ, ಸಣ್ಣಪುಟ್ಟ ಸಲಕರಣೆಗಳ ಸಹಾಯದಿಂದ ರೈತರೇ ಸ್ವಂತವಾಗಿ ಮಾನವ ಶ್ರಮದಿಂದ ತೋಡುವ ಈ ಬೋರ್‌ವೆಲ್‌ ರಾಮಯ್ಯ ಅವರ ಜಮೀನಿಗೆ ಬೇಕಾದಷ್ಟು ನೀರುಣಿಸುತ್ತಿದೆ. ಮಳೆಗಾಲದಲ್ಲಿ ಭತ್ತದ ಬೆಳೆ ಹಾಗೂ ಬೇಸಿಗೆಯಲ್ಲಿ ರಾಗಿ ಬೆಳೆಯುವ ಮೂಲಕ ನೀರಿನ ಸದ್ಬಳಕೆ ಮಾಡುತ್ತಿರುವುದು ವಿಶೇಷ. ಪ್ರತಿವರ್ಷ ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಿದ್ದ ಅವರು 16 ರಿಂದ 18 ಕ್ವಿಂಟಲ್‌ ವರೆಗೆ ಬೆಳೆ ಬೆಳೆದಿದ್ದಾರೆ. ಇದೇ ಮೊದಲ ಬಾರಿಗೆ 22 ಕ್ವಿಂಟಲ್‌ವರೆಗೆ ಇಳುವರಿ ನಿರೀಕ್ಷೆ ಹೊಂದಿದ್ದಾರೆ.

ಮಂಡ್ಯದ ವ್ಯವಸಾಯ ಸೇವಾ ಸಂಘದಿಂದ ರಾಗಿ ಖರೀದಿಸಿದ್ದು, ಬಿತ್ತನೆ ಬೀಜ ನೀಡಿದವರು ಶಿಫಾರಸು ಮಾಡಿದಂತೆ ರಾಗಿ ಬೆಳೆದಿದ್ದೇನೆ. ಹಿಂದೆಂದೂ ಬೆಳೆಯದಷ್ಟು ಉತ್ತಮ ಫಸಲು ಬಂದಿದೆ. ನನ್ನ ಶ್ರಮ ಸಾರ್ಥಕವೆನಿಸುತ್ತಿದೆ. ರಾಗಿಗೆ ಒಳ್ಳೆ ಬೇಡಿಕೆ ಇದ್ದು, ಈ ಬಾರಿ ಒಳ್ಳೆಯ ಆದಾಯ ಗಳಿಸುವ ನಿರೀಕ್ಷೆ ಇದೆ. -ರಾಮಯ್ಯ ಜವಳಗೆರೆ ದೊಡ್ಡಿ, ರಾಗಿ ಬೆಳೆದ ರೈತ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.