![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 9, 2023, 7:33 AM IST
ಲಂಡನ್: ಬೇಸಗೆಯ ಧಗೆಯಿಂದ ಇನ್ನೇನು ಮುಂಗಾರಿನ ಸಿಂಚನದತ್ತ ದೇಶವು ತೆರೆದುಕೊಳ್ಳುತ್ತಿರುವಂತೆಯೇ 50 ವಿಜ್ಞಾನಿಗಳ ತಂಡವೊಂದು ಆಘಾತಕಾರಿ ಸುದ್ದಿಯನ್ನು ನೀಡಿದೆ. ಜಗತ್ತಿನ ತಾಪಮಾನ ಪ್ರತಿ 10 ವರ್ಷಗಳಿಗೆ 0.2 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗುತ್ತಿದೆ ಎಂಬ ಎಚ್ಚರಿಕೆಯ ಕರೆಗಂಟೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ.
2013ರಿಂದ 2022ರವರೆಗೆ ದಶಕದಲ್ಲಿ 0.2 ಡಿ.ಸೆ.ನಂತೆ ಮಾನವ ಉತ್ತೇಜಿತ ತಾಪಮಾನವು ಹೆಚ್ಚುತ್ತಿದ್ದು, ಇದು ಮಾನವಕುಲಕ್ಕೆ ಮುಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಈ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಜಗತ್ತಿನಾದ್ಯಂತ ತಾಪಮಾನ ಏರಿಕೆಯಾಗಲು ಮಾನವನ ಚಟುವಟಿಕೆಗಳೇ ಕಾರಣ ಎನ್ನುತ್ತದೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ ಸರ್ಕಾರಿ ಸಮಿತಿ(ಐಪಿಸಿಸಿ) ವರದಿ. ಮನುಷ್ಯರ ಚಟುವಟಿಕೆಗಳು ಹಸಿರುಮನೆ ಇಂಧನಗಳ ಹೊರಸೂಸುವಿಕೆಯನ್ನು ಹೆಚ್ಚಿಸಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಳವಾಗಿದೆ ಎಂದೂ ಈ ವರದಿ ಹೇಳಿದೆ.
ಸಾರ್ವಕಾಲಿಕ ದಾಖಲೆ:
ಕಳೆದ ಒಂದು ದಶಕದಲ್ಲಿ ಪ್ರತಿ ವರ್ಷ ಸರಾಸರಿ 54 ಗಿಗಾ ಟನ್ಗಳನ್ನು ಇಂಗಾಲದ ಡೈಆಕ್ಸೆ„ಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಹಸಿರುಮನೆ ಇಂಧನ ಹೊರಸೂಸುವಿಕೆಯು ಸಾರ್ವಕಾಲಿಕ ದಾಖಲೆ ಬರೆದಿದೆ ಎಂದೂ ವರದಿ ತಿಳಿಸಿದೆ. ಇದೇ ವರ್ಷದ ಡಿಸೆಂಬರ್ನಲ್ಲಿ ಯುಎಇಯಲ್ಲಿ ಕಾಪ್28 ಹವಾಮಾನ ಸಮ್ಮೇಳನ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ವರದಿ ಬಿಡುಗಡೆಯಾಗಿದೆ. 2050ರೊಳಗೆ ಜಾಗತಿಕ ತಾಪಮಾನವನ್ನು 1.5 ಡಿ.ಸೆ.ನಲ್ಲಿ ಮಿತಿಗೊಳಿಸುವ ನಿಟ್ಟಿನಲ್ಲಿ ಇಡಲಾದ ಹೆಜ್ಜೆಗಳ ಕುರಿತು ಈ ಸಮ್ಮೇಳನದಲ್ಲಿ ಪರಿಶೀಲನೆ ಕೈಗೊಳ್ಳಲಾಗುತ್ತದೆ.
ದೇಶಗಳು ಮಾಡಬೇಕಾದ್ದೇನು?
ಜಗತ್ತಿನ ತಾಪಮಾನದ ಮೇಲೆ ಎಂದೆಂದೂ ಸರಿಪಡಿಸಲಾಗದಂಥ ಹಾನಿ ಆಗಿದೆ. ಈಗ ನಮ್ಮ ಮುಂದಿರುವ ದಾರಿಯೆಂದರೆ, 2015ರ ಪ್ಯಾರಿಸ್ ಒಪ್ಪಂದದ ವೇಳೆ ನಿಗದಿಪಡಿಸಲಾದ ತಾಪಮಾನದ ಮಿತಿಯೊಳಗೆ ಇರಲು ಪ್ರಯತ್ನಿಸುವುದು. ಅಂದರೆ,
– 2035ರೊಳಗೆ ವಿಶ್ವವು ಹಸಿರುಮನೆ ಇಂಧನ ಹೊರಸೂಸುವಿಕೆಯನ್ನು ಶೇ.60ರಷ್ಟು ಕಡಿತಗೊಳಿಸಬೇಕು.
– ಇಂಗಾಲದ ಡೈ ಆಕ್ಸೆ„ಡ್, ಮೀಥೇನ್ ಹಾಗೂ ಪಳೆಯುಳಿಕೆ ಇಂಧನದ ಸುಡುವಿಕೆಯು 250 ಶತಕೋಟಿ ಟನ್ಗಳ ಮಿತಿ ಮೀರಬಾರದು.
– 2030ರೊಳಗಾಗಿ ಇಂಗಾಲದ ಡೈ ಆಕ್ಸೆ„ಡ್ ಹೊರಸೂಸುವಿಕೆಯನ್ನು ಕನಿಷ್ಠ ಶೇ.40ರಷ್ಟು ತಗ್ಗಿಸುವುದು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.