ಹಣ ಇಲ್ಲ ಎಂದವಳಿಗೆ ಉಚಿತ ಟಿಕೆಟ್ನಲ್ಲಿ ಬಾ ಎಂದಿದ್ದ ಪ್ರಿಯಕರ !
ಕಂದಮ್ಮನನ್ನು ಬಿಟ್ಟು ಪ್ರಿಯಕರನ ಬಳಿ ಬಂದ ಹುಬ್ಬಳ್ಳಿ ಯುವತಿ
Team Udayavani, Jun 15, 2023, 7:42 AM IST
ಪುತ್ತೂರು: ಮಹಿಳೆಯೋರ್ವಳು ತನ್ನ ಹನ್ನೊಂದು ತಿಂಗಳ ಕಂದಮ್ಮನನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಪುತ್ತೂರಿನ ಕೋಡಿಂ ಬಾಡಿಯಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ಪ್ರಿಯಕರನ ಬಳಿ ಬಂದು ಬಳಿಕ ಇಬ್ಬರೂ ಅಲ್ಲಿಂದ ಬೇರೆಡೆಗೆ ಪರಾರಿಯಾದ ಘಟನೆ ಜೂ. 13ರಂದು ಸಂಭವಿಸಿದೆ.
ಯುವತಿಯ ಪ್ರೇಮದ ವಿಷಯ ಅರಿತಿದ್ದ ಮನೆಯವರು ಆಕೆ ನಾಪತ್ತೆಯಾದ ತತ್ಕ್ಷಣವೇ ಕೋಡಿಂಬಾಡಿಗೆ ಬಂದು ಹುಡುಕಾಟ ನಡೆಸಿದ್ದರು. ಈ ಮಧ್ಯೆ ಮರುದಿನ ಇಬ್ಬರೂ ಸಿದ್ದಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ವಿವಾಹಿತೆಯನ್ನು ಹುಬ್ಬಳ್ಳಿಗೆ ವಾಪಸು ಕರೆದೊಯ್ದ ಮಾಹಿತಿ ಲಭ್ಯವಾಗಿದೆ.
ಏನಿದು ಘಟನೆ
ಹುಬ್ಬಳ್ಳಿಯ 25 ವರ್ಷದ ವಿವಾಹಿತೆ ಅದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ಕೋಡಿಂಬಾಡಿ ಭಾಗದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿರುವ ವಿಚಾರ ಯುವತಿ, ಆಕೆಯ ಮನೆಯವರಿಗೆ ಮೊದಲೇ ತಿಳಿದಿತ್ತು. ತವರು ಮನೆಯಲ್ಲಿದ್ದ ಆಕೆ ಮೂರು ದಿನಗಳ ಹಿಂದೆ ಮನೆ ಮಂದಿಯ ಕಣ್ತಪ್ಪಿಸಿ ತನ್ನ ಮಗುವನ್ನು ತೊರೆದು, ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು. ಆಕೆ ನೇರವಾಗಿ ಪ್ರಿಯಕರನ ಬಳಿಗೆ ಬಂದಿರಬಹುದು ಎಂಬ ಶಂಕೆಯಿಂದ ಆಕೆಯ ಮನೆಯವರು ಜೂ. 13ರಂದು ರಾತ್ರಿ ಸುಮಾರು 11 ಗಂಟೆಯ ವೇಳೆ ಪುತ್ತೂರಿನ ಕೋಡಿಂಬಾಡಿಗೆ ಬಂದು ಹುಡುಕಾಟ ನಡೆಸಿದ್ದಾರೆ.
ಗ್ರಾ.ಪಂ. ಸದಸ್ಯನ ನೆರವು
ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರ್ ಸ್ಥಳಕ್ಕೆ ಬಂದು ಅವರನ್ನು ವಿಚಾರಿಸಿ ತತ್ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಪ್ರಿಯಕರನು ಯುವತಿಯೊಂದಿಗೆ ಅಲ್ಲಿಂದ ಪರಾರಿಯಾಗಿದ್ದ. ಹುಡುಕಾಟ ಮುಂದುವರಿಸಿದ ಪೊಲೀಸರು ಟವರ್ ಲೊಕೇಶನ್ ಮೂಲಕ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದನ್ನು ಪತ್ತೆ ಹಚ್ಚಿದರು.
ಆಧಾರ್ ಲಿಂಕ್ಗಾಗಿ ಮನೆಯಿಂದ ಬಂದಿದ್ದಳು..!
ಮನೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಹಲವು ದಿನಗಳಿಂದ ಯೋಜನೆ ರೂಪಿಸಿದ್ದರೂ ಮನೆ ಮಂದಿ ನಿಗಾ ಇರಿಸಿದ್ದರು ಎನ್ನಲಾಗಿದೆ. ಆದರೆ ಮೂರು ದಿನಗಳ ಹಿಂದೆ ಆಧಾರ್ ಲಿಂಕ್ ಮಾಡುವುದಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಪೇಟೆಗೆ ಬಂದಿದ್ದಳು. ಇದನ್ನು ನಿಜವೆಂದು ಮನೆಮಂದಿ ನಂಬಿದ್ದರು. ಆದರೆ ಆಕೆ ಅಷ್ಟು ಬೇಗ ಕಣ್ಣು ತಪ್ಪಿಸಿ ತೆರಳುತ್ತಾಳೆಂದು ತಿಳಿದಿರಲಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರು ಹಾಕಿದ ವಿದ್ಯಮಾನವು ನಡೆದಿದೆ. ಬಸ್ ಪ್ರಯಾಣಕ್ಕಾಗಿಯೇ ಆಧಾರ್ ಕಾರ್ಡ್ ತಂದಿದ್ದಳು ಎನ್ನಲಾಗಿದೆ.
ಹಣ ಇಲ್ಲ ಅಂದಿದ್ದಳು
ಟಿಕೆಟ್ ಉಚಿತ ಎಂದಿದ್ದ..!
ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಮಹಿಳೆಗೆ ಸರಕಾರಿ ಬಸ್ನಲ್ಲಿ ಉಚಿತ ಪ್ರಯಾಣ ವರವಾಗಿ ಪರಿಣಮಿಸಿತ್ತು. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಪ್ರಿಯಕರನ ಬಳಿ ಹೇಳಿದಾಗ ಸರಕಾರದ ಹೊಸ ಯೋಜನೆಯಂತೆ ಉಚಿತ ಟಿಕೆಟ್ನಲ್ಲಿ ಬರಬಹುದು ಎಂದು ಆತ ತಿಳಿಸಿದ್ದ. ಅದರಂತೆ ಆಧಾರ್ ಕಾರ್ಡ್ ತೋರಿಸಿ ಆಕೆ ಬಂದಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.