![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Jun 17, 2023, 8:03 PM IST
ಶಿರ್ವ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಕಾಲು ಬಗ್ಗೇಡಿಗುತ್ತು ನಾಗಬ್ರಹ್ಮಸ್ಥಾನದ ಬಳಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಜೂ. 17 ರಂದು ಶಿರ್ವ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದಲ್ಲಿ ಶಿರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುರ್ಕಾಲು ಸುಭಾಷ್ನಗರ ನಿವಾಸಿಗಳಾದ ಪ್ರೇಮನಾಥ್ ಆಲಿಯಾಸ್ ರೇವ್(22),ಸಂಪತ್ ಬಂಗೇರ(25),ಬೆಳಪು ನಿವಾಸಿ ಮುದಸ್ಸಿರ (19)ಬಂಧಿತರು. ಸೂಫಿಯಾನ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪ್ರೇಮನಾಥ್ನ ವಶದಲ್ಲಿದ್ದ 142.92 ಗ್ರಾಂ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು,ಮೋಟಾರ್ ಬೈಕ್ಮತ್ತು 4 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.