ವನಿತಾ ಏಷ್ಯಾ ಕಪ್ಗೆ ಬೆಂಬಿಡದ ಮಳೆ ಭಾರತ-ಪಾಕಿಸ್ಥಾನ ಪಂದ್ಯ ರದ್ದು
Team Udayavani, Jun 18, 2023, 5:30 AM IST
ಮಾಂಗ್ ಕಾಕ್ (ಹಾ.ಕಾಂಗ್): ಎಸಿಸಿ ವನಿತಾ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಮಳೆ ಕಾಟದಿಂದ ಮುಕ್ತವಾಗುವ ಸಾಧ್ಯತೆ ಇಲ್ಲ. ಶನಿವಾರವೂ ಮಳೆ ಮುಂದುವರಿದಿದ್ದು, ಭಾರತ-ಪಾಕಿಸ್ಥಾನ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಹಾಂಕಾಂಗ್-ನೇಪಾಲ ನಡುವಿನ ದಿನದ ಮೊದಲ ಪಂದ್ಯಕ್ಕೂ ಇದೇ ಗತಿಯಾಯಿತು.
ಇದರೊಂದಿಗೆ ಲೀಗ್ ಸ್ಪರ್ಧೆ ಮುಗಿದಂತಾಯಿತು. 12 ಪಂದ್ಯಗಳಲ್ಲಿ ಫಲಿತಾಂಶ ದಾಖಲಾದದ್ದು ಐದಕ್ಕೆ ಮಾತ್ರ. ಉಳಿದ 7 ಪಂದ್ಯಗಳಲ್ಲಿ ಟಾಸ್ ಕೂಡ ಹಾರಿಸಲಾಗಲಿಲ್ಲ.
ಆದರೂ ನಾಕೌಟ್ ಸ್ಪರ್ಧೆಗಳಿಗೆ ವೇದಿಕೆ ಸಜ್ಜುಗೊಂಡಿದೆ. “ಎ” ವಿಭಾಗದಿಂದ ಭಾರತ, ಪಾಕಿಸ್ಥಾನ; “ಬಿ’ ವಿಭಾಗದಿಂದ ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಉಪಾಂತ್ಯ ಪ್ರವೇಶಿವೆ. ಇಲ್ಲಿ ಭಾರತದ ಎದುರಾಳಿ ಶ್ರೀಲಂಕಾ. ಇನ್ನೊಂದು ಸೆಮಿಫೈನಲ್ ಪಾಕಿಸ್ಥಾನ-ಬಾಂಗ್ಲಾದೇಶ ನಡುವೆ ಸಾಗಲಿದೆ. ಲೀಗ್ ಹಂತದಲ್ಲಿ ಈ ನಾಲ್ಕೂ ತಂಡಗಳು ಒಂದೊಂದು ಗೆಲುವು ಸಾಧಿಸಿವೆ. ಉಳಿದೆರಡು ಪಂದ್ಯಗಳು ರದ್ದುಗೊಂಡಿವೆ.
ಭಾರತ ಉತ್ತಮ ರನ್ರೇಟ್ ಹೊಂದಿದ್ದ ಕಾರಣ “ಎ’ ವಿಭಾಗದ ಅಗ್ರಸ್ಥಾನ ಅಲಂಕರಿಸಿತು (5.425). ಪಾಕಿಸ್ಥಾನ (0.450) ದ್ವಿತೀಯ ಸ್ಥಾನಿಯಾಯಿತು.
“ಬಿ” ವಿಭಾಗದಲ್ಲೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಲಾ 4 ಅಂಕ ಗಳಿಸಿದವು. ರನ್ರೇಟ್ನಲ್ಲಿ ಬಾಂಗ್ಲಾ ಮುಂದಿತ್ತು (4.850). ಶ್ರೀಲಂಕಾಕ್ಕೆ ದ್ವಿತೀಯ ಸ್ಥಾನ ಲಭಿಸಿತು (0.090).
ಕೂಟದಿಂದ ಹೊರಬಿದ್ದ ತಂಡಗಳೆಂದರೆ ನೇಪಾಲ, ಹಾಂಕಾಂಗ್, ಯುಎಇ ಮತ್ತು ಮಲೇಷ್ಯಾ. ಸೆಮಿಫೈನಲ್ ಪಂದ್ಯಗಳು ಸೋಮವಾರ ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.