Rain ವಿಳಂಬ: ಬರಿದಾಗುತ್ತಿದೆ ಕಾವೇರಿ
Team Udayavani, Jun 19, 2023, 6:27 AM IST
ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದರೂ ನಿರೀಕ್ಷಿತ ಮಳೆಯಾಗುತ್ತಿಲ್ಲ. ವಾರ್ಷಿಕ 150ರಿಂದ 250 ಇಂಚಿಗೂ ಅಧಿಕ ಮಳೆಯಾಗುವ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಾವೇರಿಯ ಒಡಲು ಬರಿದಾಗಿದೆ.
ಬಿಸಿಲ ನಡುವೆಯೇ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ದೊಂದಿಗೆ ಚಳಿಯೂ ಇದೆ. ಆದರೆ ಮಳೆಗಾಲದ ಲಕ್ಷಣ ಗೋಚರಿಸುತ್ತಿಲ್ಲ. ಮಳೆ ವಿಳಂಬದಿಂದ ಕೃಷಿಕ ವರ್ಗ ಆತಂಕಗೊಂಡಿದೆ. ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಜಲಮೂಲಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಹಸುರು ಆಹಾರದ ಕೊರತೆಯಿಂದ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ.
ಜಿಲ್ಲೆಯ ವಿವಿಧೆಡೆ ಕಾವೇರಿ ಒಡಲು ಬರಿ ದಾ ಗಿದ್ದು, ಕಲ್ಲು ಬಂಡೆಗಳು ಕಾಣಿಸುತ್ತಿವೆ. ರಾಜ್ಯ ಮತ್ತು ಹೊರ ರಾಜ್ಯದ ಕೋಟ್ಯಂತರ ಮಂದಿಗೆ ಕುಡಿಯುವ ನೀರನ್ನು ಒದಗಿಸು ತ್ತಿರುವ ಕಾವೇರಿ ಮಳೆಯಿಲ್ಲದೆ ಬಡವಾಗಿದೆ. ಇನ್ನು ಒಂದು ವಾರದಲ್ಲಿ ಉತ್ತಮ ಮಳೆಯಾಗ ದಿದ್ದಲ್ಲಿ ಪರಿಸ್ಥಿತಿ ಕೈಮೀರಿ ಕುಡಿಯುವ ನೀರಿಗೂ ಬರ ಬರುವ ಸಾಧ್ಯತೆ ಇದೆ.
ಪ್ರತಿವರ್ಷ ಜೂನ್ ಮೊದಲ ವಾರ ದಿಂದಲೇ ಸುರಿಯುತ್ತಿದ್ದ ಮಳೆ ಕಳೆದ ಕೆಲವು ವರ್ಷಗಳಿಂದ ತನ್ನ ವೇಳಾಪಟ್ಟಿಯನ್ನೇ ಬದಲಾಯಿಸಿಕೊಂಡು ಬಿಟ್ಟಿದೆ. ಈ ಬಾರಿ ಯಂತೂ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಜುಲೈಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಗಳಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಒಣಗುತ್ತಿರುವ ಬೆಳೆ; ಕೃಷಿಕರು ಕಂಗಾಲು
ಸುಂಟಿಕೊಪ್ಪ:ಜೂನ್ ತಿಂಗಳಿನಲ್ಲಿ ಸುರಿಯುವ ಮೃಗಶಿರ ಮಳೆ ರೈತರ ಚಟುವಟಿಕೆಗಳಿಗೆ ಆಶಾ ದಾಯಕ. ಆದರೆ ಈ ವರ್ಷ ಮಳೆ ಬಾರದೆ ಕರಿಮೆಣಸಿನ ಫಸಲಿಗೆ ಹೊಡೆತ ನೀಡಿದೆ. ಭತ್ತದ ಬಿತ್ತನೆಗಾಗಿ ಗದ್ದೆ ಹದ ಮಾಡಿದ ರೈತ ಮಳೆಗಾಗಿ ಆಕಾಶದತ್ತ ನೋಡುವಂತಾಗಿದೆ. ಕರಿಮೆಣಸು ಕಾಳು ಕಟ್ಟುವ ಸಮಯದಲ್ಲಿ ಮಳೆ ಇಲ್ಲವಾಗಿರುವುದು ಮುಂದಿನ ವರ್ಷದ ಕರಿಮೆಣಸು ಇಳುವರಿಗೆ ಭಾರೀ ಹಿನ್ನಡೆಯಾಗಲಿದೆ. ಕಾಫಿ ಗಿಡಕ್ಕೂ ಜೂನ್ ತಿಂಗಳ ಮಳೆ ಅನಿವಾರ್ಯವಾಗಿದ್ದು, ಬೆಳೆಗಾರರು ವರುಣನ ಕೃಪೆಗಾಗಿ ಕಾದು ಕುಳಿತಿದ್ದಾರೆ.
ಕಾಫಿ, ಕರಿಮೆಣಸಿನಿಂದ ಬದುಕು ಸಾಗಿಸುತ್ತಿರುವ ಕೊಡಗು ಜಿಲ್ಲೆಯ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಮಳೆ ಕೈಕೊಟ್ಟಿರೆ ಸರಿಯಾಗಿ ಇಳುವರಿ ಬಾರದಿದ್ದರೆ ಈ ವರ್ಷ ಬ್ಯಾಂಕ್ ಸಾಲ ಹೇಗೆ ಕಟ್ಟುವುದು, ವಿದ್ಯಾರ್ಥಿಗಳ ಶಾಲೆ ಕಾಲೇಜಿನ ಶುಲ್ಕ ಹೇಗೆ ಪಾವತಿಸುವುದು, ಗೊಬ್ಬರ ಖರೀದಿಸುವುದು ಎಲ್ಲಿಂದ ಕೂಲಿ ಕಾರ್ಮಿಕರಿಗೆ ಸಂಬಳ ನೀಡುವುದೆಂತು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ
Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ
Kutumba Awards-2024: ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ
Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್
Harapanahalli: ಕೆಎಸ್ಆರ್ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.