ಗದಗ: ನಯನ ಮನೋಹರ ಶೆಟ್ಟಿಕೆರೆಗೆ ಬೇಕಿದೆ ಕಾಯಕಲ್ಪ

ಬೋಟಿಂಗ್‌ ವ್ಯವಸ್ಥೆ, ಪಿಕ್ನಿಕ್‌ ಸ್ಪಾಟ್‌ ಮಾಡಬಹುದಾಗಿದೆ

Team Udayavani, Jun 19, 2023, 6:09 PM IST

ಗದಗ: ನಯನ ಮನೋಹರ ಶೆಟ್ಟಿಕೆರೆಗೆ ಬೇಕಿದೆ ಕಾಯಕಲ್ಪ

ಲಕ್ಷ್ಮೇ ಶ್ವರ: ಲಕ್ಷ್ಮೇ ಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶೆಟ್ಟಿಕೆರೆ ಸಸ್ಯ, ಪ್ರಾಣಿ, ಜಲ, ಖನಿಜ ಸಂಪತ್ತಿನ ಸುಂದರ ಪರಿಸರದೊಂದಿಗೆ ಮಲೆನಾಡಿನ ಭಾವನೆ ಮೂಡಿಸುತ್ತದೆ. ಸೌರಾಷ್ಟ್ರದಿಂದ ಪುಲಿಗೆರೆ(ಲಕ್ಷ್ಮೇ ಶ್ವರ) ಗೆ ಶ್ರೀ ಸೋಮೇಶ್ವರನನ್ನು ತಂದು ಪ್ರತಿಷ್ಠಾಪಿಸಿದಶಿವಶರಣ ಆದಯ್ಯನೇ ಶೆಟ್ಟಿಕೇರಿ ಕೆರೆ ಕಟ್ಟಿಸಿದ್ದಾನೆ ಎಂಬ ಪ್ರತೀತಿ ಇದೆ. ಆದರೆ, ಈ ಶೆಟ್ಟಿಕೆರೆ ಪಕ್ಷಿಧಾಮದ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಬೇಕೆಂಬುದು ಈ ಭಾಗದ ಜನರ ಆಶಾವಾದ.

ಕೈಬೀಸಿ ಕರೆಯುವ ಸಸ್ಯಕಾಶಿ: ಲಕ್ಷ್ಮೇ ಶ್ವರದಿಂದ 10ಕಿ.ಮೀ. ದೂರದ ಶೆಟ್ಟಿಕೇರಿ 224 ಎಕರೆ ವಿಶಾಲವಾಗಿದ್ದು, ಈ ವ್ಯಾಪ್ತಿಯಲ್ಲಿ 500 ಎಕರೆ ಅರಣ್ಯ ಪ್ರದೇಶವಿದೆ. ಇದಕ್ಕೆ ಹೊಂದಿಕೊಂಡು 40 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರ ವಿವಿಧ ಸಸ್ಯಗಳಿಂದ ಸದಾ ಹಸಿರಾಗಿದ್ದು, ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

ವಿದೇಶಿ ಪಕ್ಷಿಗಳ ಕಲರವ: ಉತ್ತರ ಕರ್ಣಾಟಕದ ರಂಗನತಿಟ್ಟು ಎನ್ನುವ ಸಮೀಪದ ಮಾಗಡಿ ಕೆರೆಗೆ
ಚಳಿಗಾಲದಲ್ಲಿ ಹಾರಿ ಬರುವ ವಿದೇಶಿ ಪಕ್ಷಿಗಳು ಸಮೀಪದ ಶೆಟ್ಟಿಕೆರಿಯಲ್ಲೂ ಬಿಡಾರ ಹೂಡುತ್ತವೆ. ಮಾಗಡಿ ಕೆರೆಗಿಂತಲೂ ಶೆಟ್ಟಿಕೆರೆ ಎರಡು ಪಟ್ಟು ಅಂದರೆ 234 ಎಕರೆ ವಿಸ್ತಾರವಾಗಿದೆ.

ಗುಡ್ಡಗಳ ನಡುವಿರುವ ವಿಶಾಲವಾದ ಕೆರೆಯ ಸುತ್ತಲೂ ಅರಣ್ಯ, ಪ್ರಶಾಂತ ವಾತಾವರಣದಿಂದ ವಿದೇಶಿ ಹಕ್ಕಿಗಳ ವಾಸ್ತವ್ಯ, ಸಂತಾನೋತ್ಪತ್ತಿ, ಕಲರವಕ್ಕೆ ನೈಸರ್ಗಿಕವಾಗಿ ರೂಪಿತವಾದ ಪ್ರದೇಶವಾಗಿದೆ. ಪ್ರತಿವರ್ಷ ಇಲ್ಲಿಗೆ ಮಂಗೋಲಿಯಾ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ಭೂತಾನ್‌ ಮತ್ತು ಜಮ್ಮು-ಕಾಶ್ಮೀರದ ಲಡಾಕ್‌ನಿಂದ ಸುಮಾರು 16 ಜಾತಿಯ ಸಾವಿರಾರು ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತವೆ. ಶೆಟ್ಟಿಕೆರೆಯಲ್ಲಿನ ಪಕ್ಷಿಗಳ ಚಲ್ಲಾಟ, ನೀರಿನಲ್ಲಿ ಬಣ್ಣಗಳ ರಂಗೋಲಿ ಚಿತ್ತಾರ, ಬಾನಿನಲ್ಲಿ ರಾಕೆಟ್‌, ಕ್ಷಿಪಣಿಗಳ ರೀತಿಯ ಹಾರಾಟದ ವಿಸ್ಮಯದ ದೃಶ್ಯ, ನೀರಿನಿಂದ ಮೇಲೆ ಹಾರುವ, ಕೆಳಗಿಳಿಯುವ, ತೇಲುವ ಪಕ್ಷಿಗಳ ಲೋಕದ ನಯನಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಜನ ಬರುತ್ತಾರೆ.

ವನ್ಯ ಪ್ರಾಣಿಗಳ ಆಶ್ರಯ ತಾಣ: ಶೆಟ್ಟಿಕೇರಿಯಲ್ಲಿ ಮೀನುಗಾರಿಕೆಯೂ ನಡೆಯುತ್ತದೆ ಮತ್ತು ಕೆರೆಯಲ್ಲಿ ಅಪರೂಪದ ಮೃದು ಚರ್ಮದ ನೀರು ನಾಯಿಗಳೂ ವಾಸಿಸುತ್ತಿವೆ. ಇಲ್ಲಿನ 500 ಎಕರೆ ವಿಸ್ತಾರದ ಅರಣ್ಯ ಪ್ರದೇಶದಲ್ಲಿ ಪುನುಗು ಬೆಕ್ಕು, ಕತ್ತೆಕಿರುಬ, ಜಿಂಕೆ, ನಕ್ಷತ್ರ ಆಮೆ, ಉಡಾ, ಹೆಬ್ಟಾವು, ನರಿ, ತೋಳ, ನವಿಲು, ಕಾಡು ಕುರಿ ಸೇರಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿದೆ.

ಶೆಟ್ಟಿಕೆರೆಗೆ ಮಾರ್ಗ: ಲಕ್ಷ್ಮೇ ಶ್ವರದಿಂದ ಬಟ್ಟೂರ ಮಾರ್ಗವಾಗಿ ಶೆಟ್ಟಿಕೆರೆ 10 ಕಿ.ಮೀ. ಅಂತರದಲ್ಲಿದೆ. ಶಿರಹಟ್ಟಿಯಿಂದ 8.ಕಿ.ಮೀ.
ಅಂತರದಲ್ಲಿದೆ. ಸುತ್ತಲೂ ಅರಣ್ಯ, ಗುಡ್ಡದ ಪ್ರದೇಶ ಪ್ರಶಾಂತ ವಾತಾವರಣವಿದೆ. ಪಕ್ಷಿ ಪ್ರೇಮಿಗಳು, ಶಾಲಾ ಮಕ್ಕಳು,
ನೌಕರರು ಒಂದು ದಿನದ ಬಿಡುವಿನ ವೇಳೆಯಲ್ಲಿ ಶೆಟ್ಟಿಕೇರಿಯಲ್ಲಿ ಪಕ್ಷಿ ವೀಕ್ಷಣೆ ಮಾಡಬಹುದು. ಹತ್ತಿರದಲ್ಲಿಯೇ ಇರುವ ಹೊಳಲಮ್ಮನಗುಡ್ಡ, ಅರಣ್ಯ ಇಲಾಖೆಯ ನರ್ಸರಿ, ಶಿರಹಟ್ಟಿ ಫಕ್ಕೀರೇಶ್ವರ ಮಠ, ವರವಿ ಮೌನೇಶ್ವರ, ಲಕ್ಷ್ಮೇ ಶ್ವರದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರದ ದರ್ಶನ ಪಡೆಯಬಹುದು.

ಪಿಕ್ನಿಕ್‌ ಸ್ಪಾಟ್‌ ಮಾಡಿ: ಅರಣ್ಯ ಸಂಪತ್ತು ವೀಕ್ಷಿಸಲು ವಾಚಿಂಗ್‌ ಟಾವರ್‌, ಬೈನಾಕ್ಯೂಲರ್‌, ಕಾವಲು ಸಿಬ್ಬಂದಿ ಇತರೇ ಅವಶ್ಯಕ ಸವಲತ್ತುಗಳನ್ನು ಕಲ್ಪಿಸಬೇಕು. ಸುತ್ತಲೂ ಗುಡ್ಡ, ಅರಣ್ಯ, ಕೆರೆ, ನರ್ಸರಿಯನ್ನೊಳಗೊಂಡ ನಯನಮನೋಹರ ಪ್ರದೇಶವಿದಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆಗೆ ನದಿ ನೀರು ಹರಿಸುವ ಯೋಜನೆ ಪ್ರಗತಿ ಹಂತದಲ್ಲಿದೆ. ಕೆರೆಯಲ್ಲಿನ ಹೂಳು, ಕಸ, ಗಿಡಗಂಟಿಗಳಿಂದ ಕೂಡಿರುವ ಕೆರೆಯ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ಬೋಟಿಂಗ್‌ ವ್ಯವಸ್ಥೆ, ಪಿಕ್ನಿಕ್‌ ಸ್ಪಾಟ್‌ ಮಾಡಬಹುದಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

ಶೆಟ್ಟಿಕೆರೆ ಪಕ್ಷಿಧಾಮ ಅಭಿವೃದ್ಧಿಗೂ ಆದ್ಯತೆ ನೀಡಿ

ಗದಗ ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತಿರುವ ಎಚ್‌.ಕೆ. ಪಾಟೀಲ ಅವರು ಇದೀಗ ಕಾನೂನು, ಪ್ರವಾಸೋದ್ಯಮ ಸಚಿವ ಸ್ಥಾನದ ಜತೆಗೆ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ  ನಿಗಮದ ಅಧ್ಯಕ್ಷರೂ ಆಗಿರುವುದು ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ಲದೇ, ಸೋಮವಾರ ಸಚಿವರೊಂದಿಗೆ ಹಿರಿಯ ಐಎಎಸ್‌ ಅಧಿಕಾರಿ ಮನೋಜಕುಮಾರ ಅವರು ಜಿಲ್ಲೆಯ ವಿವಿಧ ಪ್ರವಾಸಿ, ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಿ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೊಳ್ಳಲಿದ್ದಾರೆ. ಮಾಗಡಿ ಪಕ್ಷಿಧಾಮಕ್ಕೆ ಆಗಮಿಸಿದ ಸಂದರ್ಭ ಶೆಟ್ಟಿಕೆರೆ ಪಕ್ಷಿಧಾಮಕ್ಕೂ ಭೇಟಿ ನೀಡಿ ಈ ಕ್ಷೇತ್ರದ ಅಭಿವೃದ್ಧಿಗೂ ಮುಂದಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಜಗದೀಶಗೌಡ ಪಾಟೀಲ, ಮಂಜುನಾಥ
ಗೌರಿ, ದೀಪಕ ಲಮಾಣಿ, ಹನುಮಂತಪ್ಪ ಹರಿಜನ, ಶಿವಾನಂದ ಬನ್ನಿಮಟ್ಟಿ ಆಗ್ರಹಿಸಿದ್ದಾರೆ. ಈ ಹಿಂದೆ ಹಿಂದೆ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಅಭಿವೃದ್ಧಿಯ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.