![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 19, 2023, 6:44 PM IST
ಪಣಜಿ: ಮಹದಾಯಿ ರಕ್ಷಣೆಗಾಗಿ ಅಭಯಾರಣ್ಯದ ಕೆಲ ಭಾಗಗಳನ್ನು ಹುಲಿ ಯೋಜನೆ ಎಂದು ಘೋಷಿಸಿದರೆ ಮಹದಾಯಿ ರಕ್ಷಣೆ ಖಚಿತ. ಅಭಯಾರಣ್ಯದಲ್ಲಿ ಹುಲಿಗಳ ಅಸ್ಥಿತ್ವವು ಸಾಬೀತಾಗಿದೆ ಮತ್ತು ಯೋಜನೆಯು ಕರ್ನಾಟಕದ ನೀರಿನ ನಿರ್ವಹಣೆ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. ಹೀಗಾದಾಗ ಮಾತ್ರ ಮಹದಾಯಿ ರಕ್ಷಣೆ ಸಾಧ್ಯ ಎಂದು ಗೋವಾದ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಹೇಳಿದರು.
ಕ್ರಾಂತಿ ದಿನದ ನಿಮಿತ್ತ ಗೋವಾದ ಮಾಶೆಲ್ ನಲ್ಲಿ ಪತ್ರಕರ್ತರ ಸಂಘ ಆಯೋಜಿಸಿದ್ದ ಮಹದಾಯಿ ಪರಮ ಸತ್ಯ ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ ಮಾತನಾಡಿದರು. ಮಾಶೆಲ್ನ ಲೋಟಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಜೇಂದ್ರ ಕೇರ್ಕರ್ ಮಾತನಾಡಿದರು. ಸಹ ಭಾಷಣಕಾರರಾಗಿ ಪತ್ರಕರ್ತ ರಾಜು ನಾಯ್ಕ್, ಪತ್ರಕರ್ತ ಸಂಜಯ್ ಘುಗ್ರೇಟಕರ್ ಉಪಸ್ಥಿತರಿದ್ದರು.
ಪತ್ರಕರ್ತ ರಾಜು ನಾಯ್ಕ ಮಾತನಾಡಿ, ಕರ್ನಾಟಕದ ಕಳಸಾ-ಬಂಡೂರ ಮತ್ತಿತರ ಯೋಜನೆಗಳಿಂದ ಮಹದಾಯಿ ಬಿಕ್ಕಟ್ಟಿಗೆ ಸಿಲುಕಿದೆ. ಕರ್ನಾಟಕದ ಈ ಪ್ರಯತ್ನವನ್ನು ದುರ್ಬಲಗೊಳಿಸಲು ಈ ಪ್ರಶ್ನೆಗೆ ಸಂಪೂರ್ಣ ಅಧ್ಯಯನದ ಅಗತ್ಯವಿದೆ. ಕರ್ನಾಟಕದ ವಕೀಲರು ಮತ್ತು ರಾಜಕಾರಣಿಗಳು ಕಳಸಾ-ಭಂಡೂರ ಮತ್ತು ಇತರ ಸ್ಥಳಗಳಿಗೆ ಅಧ್ಯಯನ ಮಾಡಲು ಮತ್ತು ವೀಕ್ಷಣೆಗಳನ್ನು ದಾಖಲಿಸಲು ಬರುತ್ತಾರೆ. ಮಹದಾಯಿ ನೀರು ಹರಿವನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುವುದು ತಪ್ಪು. ಕರ್ನಾಟಕದ ಈ ಕ್ರಮ ಅಸ್ವಾಭಾವಿಕ ಎಂದರು.
ಪತ್ರಕರ್ತ ಸಂಜಯ್ ಘುಗ್ರೆಟ್ಕರ್ ಮಾತನಾಡಿ, ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ರವರ ಸರ್ಕಾರವು 1978ರಲ್ಲಿ ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ನಿರ್ಧರಿಸಿತ್ತು. ಅಂದಿನಿಂದ ಕರ್ನಾಟಕದಲ್ಲಿ ಹಲವು ಸರ್ಕಾರಗಳು ಬಂದು ಹೋದವು. ಆದರೆ ಮಹದಾಯಿ ವಿಚಾರದಲ್ಲಿ ಪಾತ್ರ ಬದಲಾಗಿಲ್ಲ.ಆದರೂ ಗೋವಾದಲ್ಲಿ ಸರ್ಕಾರ ತನ್ನದೇ ಆದ ರೀತಿಯಲ್ಲಿ ಹೋರಾಟ ನಡೆಸುತ್ತಿದೆ. ಪರಿಸರವಾದಿಗಳ ಮಾರ್ಗದರ್ಶನದೊಂದಿಗೆ ಹೋರಾಟ ನಡೆಸಿದರೆ ಮಾತ್ರ ಮಹದಾಯಿ ಬಿಕ್ಕಟ್ಟು ಬಗೆಹರಿಯುತ್ತದೆ ಎಂದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.