Manoj Muntashir: “ಹನುಮಂತ ದೇವರೇ ಅಲ್ಲ, ನಾವು ಅವರನ್ನು..” ʼಆದಿಪುರುಷ್ʼ ಸಂಭಾಷಣೆಕಾರ
Team Udayavani, Jun 21, 2023, 9:57 AM IST
ಮುಂಬಯಿ: ʼಆದಿಪುರುಷ್ʼ ಸಿನಿಮಾ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುವುದರ ಜೊತೆಗೆ ವಿವಾದಕ್ಕೂ ಕಾರಣವಾಗಿದೆ. ಈ ಎಲ್ಲಾ ಸವಾಲುಗಳನ್ನು ದಾಟಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 240 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ರಾಮಾಯಣದ ಕಥಾಹಂದರವನ್ನು ಹೊಂದಿರುವ ʼಆದಿಪುರುಷ್ʼ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾದಲ್ಲಿ ಬಳಸಲಾದ ಕಳಪೆ ವಿಎಫ್ ಎಕ್ಸ್ ಹಾಗೂ ಕೆಲ ಸಂಭಾಷಣೆಗಳ ವಿರುದ್ಧ ಬಿಟೌನ್ ಸೇರಿದಂತೆ ಇತರ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಹನುಮಾನ್ ಪಾತ್ರಧಾರಿಗೆ ಬರೆದ ಡೈಲಾಗ್ಸ್ ಗಳಿಗೆ ವಿರೋಧ ವ್ಯಕ್ತವಾಗಿದೆ. ಡೈಲಾಗ್ಸ್ ಬರೆದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಅವರಿಗೆ ಈ ಕಾರಣಕ್ಕಾಗಿ ಜೀವ ಬೆದರಿಕೆಗಳು ಬಂದಿದೆ. ಈ ಸಂಬಂಧ ಮುಂಬಯಿ ಪೊಲೀಸರು ಸಂಭಾಷಣೆಕಾರನಿಗೆ ಭದ್ರತೆಯನ್ನು ನೀಡಿದ್ದಾರೆ.
ಈ ವಿವಾದ ಚರ್ಚೆಯಲ್ಲಿರುವಾಗಲೇ ಇದೀಗ ಮನೋಜ್ ಮುಂತಾಶಿರ್ ಸಂದರ್ಶನವೊಂದರಲ್ಲಿ ಆಡಿರುವ ಮಾತು ವೈರಲ್ ಆಗಿದೆ.
ʼಆಜ್ ತಕ್ʼ ಜೊತೆ ಮಾತನಾಡಿರುವ ಅವರು “ಬಜರಂಗಬಲಿ ದೇವರಲ್ಲ, ಅವರು ಅಪ್ಪಟ ಭಕ್ತ ಮಾತ್ರ. ನಾವು ಹನುಮಾನ್ ರನ್ನು ದೇವರಾಗಿ ಮಾಡಿದ್ದೇವೆ. ಏಕೆಂದರೆ ಅವರ ಭಕ್ತಿ ಶಕ್ತಿಶಾಲಿ ಆಗಿತ್ತು” ಎಂದು ಹೇಳಿದ್ದಾರೆ.
ಸದ್ಯ ಈ ಸಂದರ್ಶನದ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. “ಈ ವ್ಯಕ್ತಿಗೆ ಹನುಮಂತನ ಬಗ್ಗೆ ಏನು ಗೊತ್ತಿಲ್ಲ. ಇದೇ ಕಾರಣಕ್ಕೆ ಆತ ಕಳಪೆ ಡೈಲಾಗ್ಸ್ ಬರೆದಿದ್ದಾನೆ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಸಿನಿಮಾದಲ್ಲಿ ಹನುಮಾನ್ ಪಾತ್ರಧಾರಿಯ ಐದು ಸಂಭಾಷಣೆಗಳನ್ನು ಬದಲಿಸಲಿದೆ ಎಂದು ಚಿತ್ರತಂಡ ಇತ್ತೀಚೆಗೆ ಹೇಳಿದೆ.
ಓಂ ರಾವತ್ ನಿರ್ದೇಶನ ಮಾಡಿರುವ ʼಆದಿಪುರುಷ್ʼ ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.
@manojmuntashir
साहब प्रश्न यह है ही नही की किसके लिए बोला जा रहा है और क्यों बोला जा रहा है ? प्रश्न यह है की जिसके द्वारा बोला जा रहा है वो क्यों बोला जा रहा है |हनुमान जी कब से यह बोल सकते हैं की कपड़ा तेरे बाप का, तेल तेरे बाप का, आग तेरे बाप का, जलेगी भी तेरे बाप की |… pic.twitter.com/M4dVlYfRZk
— Kumar Satyam 🇮🇳 (@RealKumarSatyam) June 18, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.