![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 24, 2023, 7:14 AM IST
ಭೋಪಾಲ್: ಗುರುವಿಗೆ ತಿರುಮಂತ್ರ ಎನ್ನುವ ಮಾತಿಗೆ ತಕ್ಕಂತೆ, ವಿದ್ಯೆ ಕೊಟ್ಟ ಶಿಕ್ಷಕರಿಗೆ ಕೇಡು ಬಯಸುವ ಶಿಷ್ಯರೂ ಇದ್ದಾರೆ! ಅಂಥದ್ದೊಂದು ಪ್ರಕರಣಕ್ಕೆ ಮಧ್ಯಪ್ರದೇಶ ಸಾಕ್ಷಿಯಾಗಿದೆ. ಗುರುವನ್ನು ಮಾತನಾಡಿಸುವ ನೆಪದಲ್ಲಿ ಬಂದ ಶಿಷ್ಯರಿಬ್ಬರು ನಗುನಗುತ್ತಲೇ ಗುರುವಿಗೇ ಗುಂಡುಹಾರಿಸಿ ಪರಾರಿಯಾಗಿದ್ದಾರೆ.
ಈ ಘಟನೆ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಮೊರೆನಾ ಜಿಲ್ಲೆಯ ಜೌರಾರೋಡ್ ನಗರದಲ್ಲಿ ಗಿರ್ವಾರ್ ಸಿಂಗ್ ಎಂಬವರು ಕೋಚಿಂಗ್ ಸೆಂಟರ್ ಒಂದನ್ನ ನಡೆಸುತ್ತಿದ್ದು, ನೂರಾರು ವಿದ್ಯಾರ್ಥಿಗಳು ಇವರ ಬಳಿ ಪಾಠ ಕಲಿತಿದ್ದಾರೆ. ಇದೇ ರೀತಿ ಇವರ ಬಳಿಯೇ 12ನೇ ತರಗತಿವರೆಗೆ ಟ್ಯೂಷನ್ ಪಡೆದ ಯುವಕರಿಬ್ಬರು, ಕೋಚಿಂಗ್ ಸೆಂಟರ್ಗೆ ಬಂದು ಸಿಂಗ್ ಅವರನ್ನು ಹೊರಕರೆದು ಕುಶಲೋಪರಿ ವಿಚಾರಿಸುತ್ತಲೇ, ಅವರ ಮೇಲೆ ಗುಂಡುಹಾರಿಸಿ ಪರಾರಿಯಾಗಿದ್ದಾರೆ. ಸಿಂಗ್ ಅವರನ್ನು ಶೀಘ್ರವೇ ಆಸ್ಪತ್ರೆಗೆ ದಾಖಲಿಸಿದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹತ್ಯೆಗೆ ಯತ್ನಿಸಿದ ಇಬ್ಬರೂ ಹುಡುಗರು ಟ್ಯೂಷನ್ ಶುಲ್ಕ ಕೊಡಬೇಕಿತ್ತು.
ಅದನ್ನು ಒಂದೆರಡು ಸಮಾರಂಭಗಳಲ್ಲಿ ಅವರು ಎದುರಾದಾಗ ಸಿಂಗ್ ಕೇಳಿದ್ದರು. ಅದೇ ಕಾರಣಕ್ಕೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.