ಗುತ್ಯಡ್ಕ: ಕೆಸರಿನಿಂದ ಗದ್ದೆಯಂತಾದ 3.5 ಕಿ.ಮೀ. ರಸ್ತೆ

ತಾಲೂಕು ಕೇಂದ್ರಕ್ಕೆ ಭೇಟಿ ನೀಡಲು 120 ಕಿ.ಮೀ. ದೂರ

Team Udayavani, Jun 28, 2023, 3:58 PM IST

ಗುತ್ಯಡ್ಕ: ಕೆಸರಿನಿಂದ ಗದ್ದೆಯಂತಾದ 3.5 ಕಿ.ಮೀ. ರಸ್ತೆ

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಗುತ್ಯಡ್ಕ ಪರಿಸರದ ಸುಮಾರು 3.5 ಕಿ.ಮೀ ರಸ್ತೆಯು ಕೆಸರಿನಿಂದಾಗಿ ಗದ್ದೆ ಯಂತಾಗಿದ್ದು, ಹರಸಾಹಸಪಟ್ಟು ಸಂಚರಿ ಸಬೇಕಾದ ದುಃಸ್ಥಿತಿ ಇಲ್ಲಿನ ಜನರದ್ದು.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಗುತ್ಯಡ್ಕ ರಾಷ್ಟ್ರೀಯ ಉದ್ಯಾನವನಕ್ಕೆ ಒಳಪಡದಿದ್ದರೂ ಈ ಊರಿಗೆ ಸಂಸೆ ಗಡಿಯಿಂದ 5 ಕಿ.ಮೀ. ತೆರಳಬೇಕಾದರೆ ಪಿಕಪ್‌, ಜೀಪು ಬಿಟ್ಟರೆ ಬೇರಾವ ವಾಹನ ಸಂಚರಿಸಲು ಸಾಧ್ಯವಿಲ್ಲ. ಎಳನೀರು ಗಡಿಭಾಗದಿಂದ ಕುರ್ಚಾರು ಕೊರೆಕಲ್‌ ರಸ್ತೆ 3.5 ಕಿ.ಮೀ. ದೂರವಿದೆ. ಈಗಾಗಲೇ ಶಾಸಕ ಹರೀಶ್‌ ಪೂಂಜ ನಿಧಿಯಿಂದ 100 ಮೀಟರ್‌, ನಕ್ಸಲ್‌ ಫಂಡ್‌ನಿಂದ 100 ಮೀಟರ್‌ ಕಾಂಕ್ರೀಟ್‌ ರಸ್ತೆ ಬಿಟ್ಟರೆ ಉಳಿದ ರಸ್ತೆಗಳಲ್ಲಿ ಸಾಗಲು ವಾಹನ ಬಿಡಿ ನಡೆದಾಡಲು ಸಾಧ್ಯವಾಗದ ಹೀನಾಯ ಸ್ಥಿತಿ ಇದೀಗ ನಿರ್ಮಾಣವಾಗಿದೆ.

ಗುತ್ಯಡ್ಕಕ್ಕೆ ಬೆಳ್ತಂಗಡಿಯಿಂದ ದಿಡುಪೆ-ಎಳನೀರು- ಸಂಸೆ ರಸ್ತೆ ಬಳಸಿದರೆ 30 ಕಿ.ಮೀ. ದೂರ. ಆದರೆ ರಾ.ಉ. ಅರಣ್ಯದೊಳಗೆ ಅಭಿವೃದ್ಧಿಗೆ ಆಸ್ಪದವಿಲ್ಲ. ಹಾಗಾಗಿ ಚಾರ್ಮಾಡಿ – ಕೊಟ್ಟಿಗೆಹಾರ -ಸಂಸೆ ಅಥವಾ ಕಾರ್ಕಳ- ಎಸ್‌.ಕೆ. ಬಾರ್ಡರ್‌ -ಕಳಸ -ಸಂಸೆಯಾಗಿ 120 ಕಿ.ಮೀ. ಸುತ್ತಿ ಬಳಸಿ ಗುತ್ಯಡ್ಕ, ಎಳನೀರು, ಬಡಮನೆ, ಬಂಗಾರ ಪಲ್ಕೆ ನಿವಾಸಿಗಳು ತಾಲೂಕು ಕೇಂದ್ರಕ್ಕೆ ಬರಬೇಕಾಗಿದೆ.

ದಿನನಿತ್ಯದ ಅಗತ್ಯತೆಗಳಿಗೆ ಇವರು ಚಿಕ್ಕಮಗಳೂರು ವ್ಯಾಪ್ತಿಯ ಸಂಸೆ, ಕಳಸವನ್ನೇ ಅವಲಂಬಿಸಿದ್ದಾರೆ. ಗುತ್ಯಡ್ಕ ಒಂದೇ ಭಾಗದಲ್ಲಿ 35 ಕುಟುಂಬಗಳಿದ್ದು 180ಕ್ಕೂ ಅಧಿಕ ಜನಸಂಖ್ಯೆಯಿದೆ. ಈವರೆಗೆ 8 ಮಂದಿ ಜಿಲ್ಲಾಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ ಕೇವಲ 3.5 ಕಿ.ಮೀ. ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಎಷ್ಟೇ ಸರಕಾರ ಬಂದುರುಳಿದರೂ ಸಾಧ್ಯವಾಗಿಲ್ಲ.

ಪಶ್ಚಿಮಘಟ್ಟ ಶ್ರೇಣಿಯಲ್ಲಿ ಹುಟ್ಟುವ ನೇತ್ರಾವತಿ ಉಗಮಸ್ಥಾನವು ಇಲ್ಲೇ ಬರುತ್ತದೆ. ಕುರ್ಚಾರು ಮುಂದಕ್ಕೆ ಸಾಗಿದರೆ ರಾಷ್ಟ್ರೀಯ ಉದ್ಯಾನವನದೊಳು ಸುಮಾರು 6 ಕಿ.ಮೀ. ಗುಡ್ಡಗಾಡು ಹತ್ತಿ ಸಾಗಿದರೆ ನೇತ್ರಾವತಿ ಪೀಕ್‌ ಪಾಯಿಂಟ್‌ ಸಿಗುತ್ತದೆ. ಇದೊಂದು ಚಾರಣಿಗರ ಸ್ವರ್ಗವಾಗಿದ್ದು ಪ್ರತಿನಿತ್ಯ 200ಕ್ಕೂ ಅಧಿಕ ಮಂದಿ ಭೇಟಿ ನೀಡಿದರೆ ವಾರಾಂತ್ಯದಲ್ಲಿ ಸಾವಿರ ಮಂದಿಯಷ್ಟು ಸೇರುತ್ತಾರೆ. ಇಲ್ಲಿಗೆ ತೆರಳಲು ಅರಣ್ಯ ಇಲಾಖೆ ಪ್ರತಿಯೊಬ್ಬರಿಗೆ 500 ರೂ. ಟಿಕೆಟ್‌ ನಿಗದಿ ಪಡಿಸಿದೆ. ಆದರೆ ಪ್ರವಾಸಿಗರಿಗೆ ಬರಲು ಸೂಕ್ತ ರಸ್ತೆ ಸೌಕರ್ಯವೇ ಇಲ್ಲ.

ಇಡಿಸಿ ಸಮಿತಿ ರಚಿಸಲು ಮನವಿ ನೀಡಲಿ
ಗ್ರಾಮದ ಅಭಿವೃದ್ಧಿಗೆ ಇಡಿಸಿ (ಎಕೋ ಡೆವಲಪ್‌ಮೆಂಟ್‌ ಕಮಿಟಿ) ಪರಿಸರ ಅಭಿವೃದ್ಧಿ ಸಮಿತಿ ರಚಿಸಿದರೆ ಅರಣ್ಯ ಇಲಾಖೆಯಿಂದ ಚಾರಣಿಗರಿಂದ ಸಂಗ್ರಹಿಸಿದ ಶೇ. 50 ಮೊತ್ತ ಕಮಿಟಿಗೆ ಸೇರುತ್ತದೆ. ಉಳಿದಂತೆ ಸರಕಾರವು ಅನುದಾನ ಒದಗಿಸಿದಾಗ ಗ್ರಾಮದ ಅಗತ್ಯ ಅಭಿವೃದ್ಧಿಗೆ ಕಾರ್ಯ ಕೈಗೊಳ್ಳ ಬಹುದು. ಈಗಾಗಲೇ ಸಭೆ ಕರೆದು ಮನವಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
-ಸ್ವಾತಿ, ವಲಯ ಅರಣ್ಯಾಧಿಕಾರಿ, ಕುದುರೆಮುಖ ಅರಣ್ಯ ವಿಭಾಗ

ಅಭಿವೃದ್ಧಿಗೆ ಆದ್ಯತೆ
ಮೊದಲ ಹಂತದಲ್ಲಿ ಎಳನೀರು ಭಾಗದ ರಸ್ತೆ ಹಾಗೂ ಕಿಂಡಿ ಅಣೆಕಟ್ಟಿಗೆ ಆದ್ಯತೆ ನೀಡಿ 5 ಕೋ.ರೂ. ಅನುದಾನ ಒದಗಿಸಿ ಅಭಿವೃದ್ಧಿಪಡಿಸಲಾಗಿದೆ. ಮುಂದೆ ಸರಕಾರ ಅನುದಾನ ಒದಗಿಸಿದರೆ ಗುತ್ಯಡ್ಕ ಭಾಗದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
-ಹರೀಶ್‌ ಪೂಂಜ, ಶಾಸಕ

ಜನಪರ
– ಅಸಮರ್ಪಕ ರಸ್ತೆಯಿಂದ ಆರೋಗ್ಯ ಹದಗೆಟ್ಟರೆ ಸಮಸ್ಯೆ
– ತುರ್ತು ಸೇವೆಗೆ ಆಸ್ಪತ್ರೆ ಸೌಲಭ್ಯವಿಲ್ಲ
– ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರಿಗೆ ಬರಬೇಕು
– ಕುರ್ಚಾರು ಸಮೀಪ ಕುಸಿದ ರಸ್ತೆ ದುರಸ್ತಿಗೆ ಬೇಡಿಕೆ
– ಚಿಕ್ಕಮಗಳೂರಿಗೆ ಬಿಟ್ಟುಕೊಡಲು ಆಗ್ರಹ

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.