ಸಂಚಾರ ಉಲ್ಲಂಘನೆ ಪ್ರಕರಣಗಳು: 2.33 ಕೋಟಿ ಕೇಸ್‌, 473 ಕೋಟಿ ರೂ. ದಂಡ 


Team Udayavani, Jul 1, 2023, 1:25 PM IST

ಸಂಚಾರ ಉಲ್ಲಂಘನೆ ಪ್ರಕರಣಗಳು: 2.33 ಕೋಟಿ ಕೇಸ್‌, 473 ಕೋಟಿ ರೂ. ದಂಡ 

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಚಾರ ವಿಭಾಗವು ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋದ ಬೆನ್ನಲ್ಲೇ ಕಳೆದ ಎರಡೂವರೆ ವರ್ಷಗಳಲ್ಲಿ 2.33 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿ, 473 ಕೋಟಿ ರೂ. ದಂಡ ಸಂಗ್ರಹವಾಗಿದೆ.

ಹೌದು, ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಸಮಸ್ಯೆಯ ಜತೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಕಡಿವಾಣ ಹಾಕುವುದೇ ಪೊಲೀಸ್‌ ವಿಭಾಗಕ್ಕೆ ದೊಡ್ಡ ತಲೆನೋವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗವು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದರು. ಪರಿಣಾಮ 2021ರಿಂದ 2023ರ ವರೆಗೆ ಸಂಚಾರ ನಿಯಮ ಉಲ್ಲಂ ಸಿದ ಬರೋಬ್ಬರಿ 2.33 ಕೋಟಿ ಪ್ರಕರಣಗಳು ದಾಖಲಾದರೆ, 473 ದಂಡ ಸಂಗ್ರಹಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯಧಿಕ ಕೇಸ್‌ ಹಾಗೂ ದಂಡದ ಪ್ರಮಾಣ ಏರಿಕೆಯಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಸಂಖ್ಯೆ ಸೆರೆ ಹಿಡಿಯುವ ಕ್ಯಾಮೆರಾಗಳು, ಕ್ಷಣ ಮಾತ್ರದಲ್ಲಿ ಕಂಟ್ರೋಲ್‌ ರೂಂಗೆ ಮಾಹಿತಿ ರವಾನಿಸುತ್ತವೆ. ನಿಯಮ ಉಲ್ಲಂಘನೆಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ದಂಡ ಬೀಳುತ್ತದೆ. ಹೀಗಾಗಿ ಪೊಲೀಸರಿಗೂ ವಾಹನಗಳ ಮೇಲೆ ಕಣ್ಣಿಡುವ ಹೊರೆ ತಪ್ಪಿದೆ.

ಯಾವೆಲ್ಲಾ ಆಧುನಿಕ ತಂತ್ರಜ್ಞಾನ?: ಸುರಕ್ಷತೆ, ವಾಹನ ಸಂಖ್ಯೆ ಪರಿಶೀಲಿಸುವ, ವಾಹನ ಸಾಮರ್ಥ್ಯ ಪರಿಶೀಲಿಸುವ ಆಧುನಿಕ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮೆರಾ, ನಿಯಮ ಉಲ್ಲಂಘಿಸುವ ವಾಹನಗಳ ಸಂಖ್ಯೆ ಮೊಬೈಲ್‌ನಲ್ಲೇ ಸೆರೆಹಿಡಿದು ಕಳುಹಿಸುವ ವ್ಯವಸ್ಥೆ, ಬೆಂಗಳೂರಿನ 160ಕ್ಕೂ ಹೆಚ್ಚಿನ ಸಿಗ್ನಲ್‌ಗ‌ಳಲ್ಲಿ ಕೃತಕ ಬುದ್ದಿಮತ್ತೆ ಸಂಚಾರ ನಿಯಂ ತ್ರಣ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಂಡಿದೆ. ವೇಗಮಿತಿ ಪರಿಶೀಲನೆ ಯಂತ್ರ, ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆಗೆ ಆಧುನಿಕ ಆಲ್ಕೋಮೀಟರ್‌ ಬಳಕೆ, ಅಲ್ಲಲ್ಲಿ ವಾಹನ ತಪಾಸಣೆ ನಡೆಸಿ ಡಿಜಿಟಲ್‌ ರೂಪದಲ್ಲಿ ದಂಡ ವಿಧಿಸುವುದು ಸೇರಿದಂತೆ ಇನ್ನಿತರ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಅಡ್ಡಾದಿಡ್ಡಿ ವಾಹನ ಚಾಲನೆ, ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು “ಲೋಕಲ್‌ ಏರಿಯಾ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌’ ವ್ಯವಸ್ಥೆ ಇದೆ.

ಇನ್ನು ಶೀಘ್ರದಲ್ಲೇ ಡ್ರೋನ್‌ ಕ್ಯಾಮೆರಾ ಬಳಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇಂತಹ ಹೈಟೆಕ್‌ ತಂತ್ರಜ್ಞಾನದಿಂದ ಕೇಸ್‌ಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಈ ಹಿಂದೆ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂ ಸುವ ವಾಹನಗಳ ನಂಬರ್‌ಗಳನ್ನು ಪುಸ್ತಕದಲ್ಲಿ ಬರೆದು ದಂಡ ವಿಧಿಸುತ್ತಿದ್ದರು. ಇದು ಪೊಲೀಸರಿಗೂ ಕಿರಿ-ಕಿರಿ ಉಂಟಾಗುತ್ತಿತ್ತು.

5 ತಿಂಗಳಲ್ಲಿ 154 ಕೋಟಿ ದಂಡ ಸಂಗ್ರಹ : ರಾಜ್ಯ ರಾಜಧಾನಿ ದೇಶದಲ್ಲೇ 2ನೇ ಅತೀ ಹೆಚ್ಚಿನ ವಾಹನ ಹೊಂದಿರುವ ನಗರವಾಗಿದೆ. 1.9 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ಈ ಪೈಕಿ 73.32 ಲಕ್ಷ ಬೈಕ್‌ಗಳಿದ್ದರೆ, 22.33 ಲಕ್ಷ ಕಾರುಗಳಿವೆ. ಪ್ರತಿದಿನ 65 ಲಕ್ಷಕ್ಕೂ ಹೆಚ್ಚಿನ ವಾಹನಗಳು ರಸ್ತೆಗಿಳಿಯುತ್ತಿವೆ. 2021ರಲ್ಲಿ ದಾಖಲಾಗಿದ್ದ 93 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್‌, 2022ಕ್ಕೆ 1.4 ಕೋಟಿಗೆ ಏರಿಕೆಯಾಗಿದೆ.

ಇನ್ನು 2023 ಮೇ ತಿಂಗಳವರೆಗೆ 35.73 ಲಕ್ಷ ಪ್ರಕರಣ ದಾಖಲಾಗಿವೆ. 2021ರಲ್ಲಿ 140 ಕೋಟಿ ರೂ., 2022ರಲ್ಲಿ 179 ಕೋಟಿ ರೂ. ಹಾಗೂ 2023ರಲ್ಲಿ 5 ತಿಂಗಳಲ್ಲಿ ಬರೋಬ್ಬರಿ 154 ಕೋಟಿ ರೂ. ದಂಡ ಟ್ರಾಫಿಕ್‌ ಫೋಲಿಸ್‌ ಖಜಾನೆ ಸೇರಿದೆ.

2021-2023ರ ವರೆಗೆ ನಿಯಮ ಉಲ್ಲಂಘಿಸಿದ ಅಂಕಿ-ಅಂಶ: 

1,00,45,885 ಹೆಲ್ಮೆಟ್‌ ಧರಿಸದೆ ಚಾಲನೆ 52,60,665

ಹಿಂಬದಿ ಸವಾರ ಹೆಲ್ಮೆಟ್‌ ಧರಿಸದಿರುವುದು 3,16,636

ಮೊಬೈಲ್‌ ಬಳಸಿ ವಾಹನ ಚಾಲನೆ 24,27,310

ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ 16,57,531

ಸಿಗ್ನಲ್‌ ಜಂಪ್‌ 6,05,312 ಸೇಫ್ಟಿ ಬೆಲ್ಟ್ ಧರಿಸದಿರುವುದು

8,81074 ತಪ್ಪು ನೋಂದಣಿ ಸಂಖ್ಯೆ ಅಳವಡಿಕೆ

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿಯೇ ಸಂಚಾರ ನಿಯಮ ರೂಪಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ತಂತ್ರಜ್ಞಾನ ಬಳಕೆಯಿಂದ ದಾಖಲಾದ ಕೇಸ್‌, ಸಂಗ್ರಹಿಸಿದ ದಂಡವೂ ಹೆಚ್ಚಿದೆ. ● ಸಚಿನ್‌ ಘೋರ್ಪಡೆ, ಡಿಸಿಪಿ, ಉತ್ತರ ಸಂಚಾರ ವಿಭಾಗ

-ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

8-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕದಿಯುತ್ತಿದ್ದ ಆರೋಪಿ ಸೆರೆ

7-bng

Bengaluru: ದ್ವಿಚಕ್ರ ವಾಹನ ಕಳ್ಳತನ ಆರೋಪಿ ಸೆರೆ, 4 ಬೈಕ್‌ ಜಪ್ತಿ

4-bng-crime

Bengaluru: ಪತ್ನಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.