ತಪ್ಪಿತು ಅಕ್ಷಯ್- ರಣ್ಬೀರ್ ಬಾಕ್ಸ್ ಆಫೀಸ್ ಕದನ: ʼಅನಿಮಲ್ʼ ರಿಲೀಸ್ ಡೇಟ್ ಮುಂದೂಡಿಕೆ
Team Udayavani, Jul 2, 2023, 10:31 AM IST
ಮುಂಬಯಿ: ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ರಣ್ಬೀರ್ ಕಪೂರ್ ಅವರ ʼ ಅನಿಮಲ್ʼ ಸಟ್ಟೇರಿದ ದಿನದಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಡೇಟ್ ನಂತಯೇ ತೆರೆಗೆ ಬರಬೇಕು ಎನ್ನುವಾಗಲೇ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿರುವ ಸಿನಿಮಾದ ಚಿತ್ರೀಕರಣ ಇದೇ ವರ್ಷದ ಏಪ್ರಿಲ್ ನಲ್ಲಿ ಮನಾಲಿ, ಹಿಮಾಚಲ ಪ್ರದೇಶದಲ್ಲಿ ಶುರುವಾಗಿತ್ತು. ಬಹುತೇಕ ಸಿನಿಮಾದ ಎಲ್ಲಾ ಕೆಲಸಗಳು ಪೂರ್ತಿಗೊಂಡಿದ್ದು, ಇತ್ತೀಚೆಗೆ ರಣ್ಬೀರ್ ಕಪೂರ್ ಹಿಂದೆಂದೂ ಕಾಣಿಸಿಕೊಳ್ಳದ ಮಾಸ್ ಅವತಾರವುಳ್ಳ ಪೋಸ್ಟರ್ ವೊಂದನ್ನು ಸಿನಿಮಾ ತಂಡ ರಿವೀಲ್ ಮಾಡಿತ್ತು. ಈ ಪೋಸ್ಟರ್ ವೈರಲ್ ಆಗಿತ್ತು. ಸಿನಿಮಾವನ್ನು ಥಿಯೇಟರ್ ನಲ್ಲಿ ಆದಷ್ಟು ಬೇಗ ನೋಡಬೇಕೆಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವುದರಿಂದ ಸಿನಿಮಾ ಆಗಸ್ಟ್ ನಲ್ಲಿ ರಿಲೀಸ್ ಆಗಲ್ಲ ಎಂದು ವರದಿ ತಿಳಿಸಿದೆ. ಇದರಿಂದ ಅದೇ ಸಮಯದಲ್ಲಿ ರಿಲೀಸ್ ಆಗಬೇಕಿದ್ದ ಅಕ್ಷಯ್ ಕುಮಾರ್ ಅವರ ʼಓ ಮೈ ಗಾಡ್ -2ʼ, ಹಾಗೂ ಸನ್ನಿ ಡಿಯೋಲ್ ಅವರ ʼಗದರ್ 2ʼ ಸಿನಿಮಾದೊಂದಿಗಿನ ಕ್ಲ್ಯಾಶ್ ತಪ್ಪಿದಂತಾಗಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಸಿನಿಮಾ ರಿಲೀಸ್ ಆಗಬೇಕಿರುವ ಹೊಸ ದಿನಾಂಕವನ್ನು ಶೀಘ್ರದಲ್ಲಿ ಅನೌನ್ಸ್ ಮಾಡಲಾಗುದೆಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ರಣಬೀರ್ ಕಪೂರ್ ಯೊಂದಿಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ʼಅನಿಮಲ್ʼ ಸಿನಿಮಾದಲ್ಲಿ ನಟಿಸಿದ್ದಾರೆ.
#Xclusiv… ‘ANIMAL’ NOT ARRIVING ON INDEPENDENCE DAY WEEKEND… #Animal – starring #RanbirKapoor and directed by #SandeepReddyVanga – *won’t* release on 11 Aug 2023… Yes, the film has been postponed… A new release date will be announced in the coming days. #BhushanKumar pic.twitter.com/H55HDfvWxr
— taran adarsh (@taran_adarsh) July 1, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್ ಧ್ವನಿ; ಹೀರೋ ಮೇಲೆ ಆರೋಪ
Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್
Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.