![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 2, 2023, 4:53 PM IST
ರಾಂಚಿ: ಸ್ಟುಡಿಯೋವೊಂದರ ಬಳಿ ಪಾರ್ಕ್ ಮಾಡಿದ್ದ ಬೈಕ್ಗೆ ಸ್ಕೂಟರ್ ಡಿಕ್ಕಿ ಹೊಡೆದದನ್ನು ಪ್ರಶ್ನಿಸಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಐದು ಮಂದಿ ಗಾಯಗೊಂಡಿದ್ದಾರೆ.
ಸ್ಟುಡಿಯೋ ಮಾಲಿಕರಾದ ಆಶೀಷ್ ಎಂಬವರು ತಮ್ಮ ಬೈಕ್ನ್ನು ಸ್ಟುಡಿಯೋ ಹೊರಗೆ ಪಾರ್ಕ್ ಮಾಡಿದ್ದರು. ಪಾರ್ಕ್ ಮಾಡಿದ್ದ ಬೈಕ್ಗೆ ಸ್ಕೂಟರ್ ಡಿಕ್ಕಿ ಹೊಡೆದು ಹಾನಿಯಾಗಿದೆ. ಬೈಕ್ಗೆ ಹಾನಿ ಮಾಡಿದ್ದಕ್ಕೆ ಪರಿಹಾರ ನೀಡುವಂತೆ ಆಶೀಷ್ ಸ್ಕೂಟರ್ ಸವಾರನ ಬಳಿ ಆಗ್ರಹಿಸಿದ್ದಾರೆ . ಸ್ಕೂಟರ್ ಸವಾರ ಪರಿಹಾರ ನೀಡಲು ನಿರಾಕರಿಸಿದಾಗ ಈರ್ವರ ನಡುವೆಯೂ ಮಾತಿಗೆ ಮಾತು ಬೆಳೆದಿದೆ. ಇದೇ ವೇಳೆ ಸ್ಕೂಟರ್ ಸವಾರ ತಮ್ಮ ಸ್ನೇಹಿತರನ್ನು ಘಟನಾ ಸ್ಥಳಕ್ಕೆ ಬರಲು ಹೇಳಿದ್ದಾನೆ.
ಸ್ಕೂಟರ್ ಸವಾರನ ಪರವಾಗಿ ದೊಣ್ಣೆ, ಹರಿತ ಆಯುಧಗಳ ಜೊತೆ ಘಟನಾ ಸ್ಥಳಕ್ಕೆ ಬಂದ ಸುಮಾರು 20 ಕ್ಕೂ ಹೆಚ್ಚು ಮಂದಿ ಆಶೀಷ್ ಮತ್ತು ಜೊತೆಯಲ್ಲಿದ್ದವರ ಮೇಲೆ ಏಕಾಏಕಿ ಹಲ್ಲೆ ಮಾಡತೊಡಗಿದ್ದಾರೆ. ಘಟನೆಯಲ್ಲಿ ಆಶೀಷ್ ಸೇರಿ 5 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಈ ಘಟನೆಯಿಂದ ಭಯಭೀತರಾಗಿರುವ ಸ್ಥಳೀಯ ಅಂಗಡಿ ಮಾಲಿಕರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವ್ಯಕ್ತಿಗೆ ಚಾಕು ತೋರಿಸಿ 3.5 ಲಕ್ಷ ರೂ.ನ ಸರ ಕಳ್ಳತನ
You seem to have an Ad Blocker on.
To continue reading, please turn it off or whitelist Udayavani.