ದಾವಣಗೆರೆ: ಪುಂಡಾನೆಯನ್ನು ಪಳಗಿಸುವಲ್ಲಿ ಸಕ್ರೆಬೈಲು ಆನೆ ಬಿಡಾರ ಮಾವುತರು ಯಶಸ್ವಿ
ದಾವಣಗೆರೆಯಲ್ಲಿ ಮಹಿಳೆ, ಮಗು ಸಾವಿಗೆ ಕಾರಣವಾಗಿದ್ದ ಪುಂಡಾನೆ
Team Udayavani, Jul 3, 2023, 8:14 PM IST
ಶಿವಮೊಗ್ಗ: ದಾವಣಗೆರೆಯಲ್ಲಿ ಮಗು, ಮಹಿಳೆ ಮೇಲೆ ಸಾವಿಗೆ ಕಾರಣವಾಗಿದ್ದ ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್ ಮೇಲೆ ದಾಳಿ ಮಾಡಿದ್ದ ಪುಂಡಾನೆಯನ್ನು (ಅಭಿಮನ್ಯು) ಪಳಗಿಸುವಲ್ಲಿ ಸಕ್ರೆಬೈಲು ಆನೆಬಿಡಾರದ ಮಾವುತರು ಯಶಸ್ವಿಯಾಗಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ದಾವಣಗೆರೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಜನರಿಗೆ ನಡುಕ ಉಂಟು ಮಾಡಿದ್ದ ಈ ಆನೆಯನ್ನು ಸೆರೆ ಹಿಡಿಯುವುದು ಸವಾಲಾಗಿತ್ತು. ವನ್ಯಜೀವಿ ವೈದ್ಯ ಡಾ.ವಿನಯ್ ಯಶಸ್ವಿಯಾಗಿ ಡಾರ್ಟಿಂಗ್ ಮಾಡಿದ್ದರೂ ಮುಂದೆ ಹೋಗಬೇಕಿದ್ದ ಆನೆ ವಾಪಾಸ್ ತಿರುಗಿದ ಬಂದ ಪರಿಣಾಮ ಆನೆ ದಾಳಿಗೆ ಒಳಗಾಗಿದ್ದರು. ಅಲ್ಲಿಂದ ಆನೆಯನ್ನು ಸಕ್ರೆಬೈಲು ಆನೆಬಿಡಾರಕ್ಕೆ ತಂದು ಕ್ರಾಲ್ನಲ್ಲಿ ಇಡಲಾಗಿತ್ತು.
ಏ.11ರಿಂದ ಕ್ರಾಲ್ನಲ್ಲಿ ಬಂಧಿಯಾಗಿದ್ದ ಆನೆಗೆ ಸೋಮವಾರ ಹೊರ ತರಲಾಯಿತು. ಉಗ್ರ ಸ್ವರೂಪಿಯಾಗಿದ್ದ ಆನೆಯನ್ನು ಸತತ ಪ್ರಯತ್ನದ ಮೂಲಕ ಶಾಂತ ಸ್ವರೂಪಕ್ಕೆ ತರುವಲ್ಲಿ ಜಮೇದಾರ್ ಕುದ್ರತ್ ಪಾಷಾ ಹಾಗೂ ಮಂಜು ಅವರ ತಂಡ ಯಶಸ್ವಿಯಾಗಿದೆ.
ಸೋಮವಾರ ಪೂಜೆ ನೆರವೇರಿಸುವ ಮೂಲಕ ಆನೆಯನ್ನು ಕ್ರಾಲ್ನಿಂದ ಹೊರ ತರಲಾಯಿತು. ಈ ವೇಳೆ ಕುಮ್ಕಿ ಆನೆಗಳು ಜತೆಯಲ್ಲಿ ಇದ್ದವು. ಕೆಲದಿನಗಳವರೆಗೂ ಕ್ರಾಲ್ ಸುತ್ತಮುತ್ತವೇ ಅದಕ್ಕೆ ಇತರೆ ಆನೆಗಳು, ಜನರ ಸಂಪರ್ಕಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳುವುದು. ಇದರಲ್ಲಿ ಯಾವುದೇ ತೊಂದರೆ ಕಂಡುಬರದಿದ್ದರೆ ಕೆಲವೇ ದಿನಗಳಲ್ಲಿ ಆನೆ ಬಿಡಾರದ ಕ್ಯಾಂಪಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಸಿಗಲಿದೆ ಎನ್ನುತ್ತಾರೆ ವನ್ಯಜೀವಿ ವಲಯ ಡಿಎಫ್ಒ ಪ್ರಸನ್ನ ಕೃಷ್ಣ.
ಕೆಲ ದಿನಗಳ ಹಿಂದೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಇದಕ್ಕೆ ಅಭಿಮನ್ಯು ಎಂದು ನಾಮಕರಣ ಮಾಡಿದ್ದರು. ಆನೆ ದಾಳಿಗೆ ಒಳಗಾಗಿದ್ದ ಡಾ.ವಿನಯ್ ಹಲವು ಚಿಕಿತ್ಸೆಗಳ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ… ರೌಡಿಶೀಟರ್ ಕಾಲಿಗೆ ಗುಂಡೇಟು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.