![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 3, 2023, 11:08 PM IST
ಹುಣಸೂರು: ಪತಿಯ ಸಾವಿನ ದೃಶ್ಯವನ್ನು ನೋಡಿದ ಮಹಿಳೆಯೊಬ್ಬರು ದಿಗ್ಭ್ರಾಂತ ಳಾಗಿ ವಿಷ ಸೆವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ದಾರುಣ ಘಟನೆ ತಾಲೂಕಿನ ಕೊಯಮುತ್ತೂರು ಕಾಲೋನಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಗ್ರಾಮದ ಬಂಡಾರಿಯವರ ಪುತ್ರ ದೊರೆ(55) ಹಾಗೂ ಇವರ ಪತ್ನಿ ಸಾವಿತ್ರಿ (47) ಸಾವಿನಲ್ಲೂ ಒಂದಾದ ದಂಪತಿ. ಇವರಿಗೆ ಒರ್ವಪುತ್ರ ಹಾಗೂ ಒಬ್ಬಳು ಮಗಳಿದ್ದು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ.
ಮೃತದೊರೆ ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಕೆ.ಅರ್.ನಗರಕ್ಕೆ ಹೋದಿದ್ದ ವೇಳೆ ಅಪಘಾತಕ್ಕೊಳಗಾಗಿ ತಮಿಳುನಾಡಿನ ಕೊಯಮುತ್ತೂರು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,ವಾರದ ಹಿಂದೆ ಮನೆಗೆ ಬಂದಿದ್ದರು. ಪತಿಯ ಐಡಿಎಫ್ಸಿ ಮತ್ತು ಇಕ್ವಿಟಾಕ್ಸ್ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದು ಅಲ್ಲದೆ ವಿವಿದ ಸಂಘಗಳಲ್ಲಿಯು ಸಹ ಸಾಕಷ್ಟು ಸಾಲ ಮಾಡಿಕೊಂಡಿದ್ದರು.
ದೊರೆ ಮನೆಯಲ್ಲಿಯೆ ಔಷದೋಪಚಾರ ಪಡೆದುಕೊಳ್ಳುತ್ತಿದ್ದು ಸೋಮವಾರ ಪತ್ನಿ ಸಾವಿತ್ರಿ ಪತಿಗೆ ಬೆಳಗ್ಗೆ ತಿಂಡಿ ತಿನ್ನಿಸಿ ಔಷಧಿ ಮಾತ್ರೆಗಳನ್ನು ನೀಡಿ ಕೂಲಿ ಕೆಲಸಕ್ಕೆಂದು ಹೊರ ಹೋಗಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಪತಿ ಪ್ರಾಣ ಬಿಟ್ಟಿರುವುದನ್ನು ಕಂಡು ದಿಗಿಲಿನಿಂದ ಮನೆಯಲ್ಲಿದ್ದ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆ ಬಾಗಿಲು ತೆಗೆದಿರುವುದನ್ನು ಕಂಡು ಪಕ್ಕದ ಮನೆಯವರು ಕೂಗಿದರಾದರೂ ಹೊರಬರದಿದ್ದಾಗ ಒಳಗೆ ಹೋಗಿ ನೋಡಿದಾಗ ದಂಪತಿಗಳು ಸಾವನ್ನಪ್ಪಿರುವುದನ್ನು ಕಂಡು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ.
ಮೃತರಿಗೆಒರ್ವ ಮಗ ಒರ್ವಪುತ್ರಿಯರಿದ್ದುಇಬ್ಬರು ಮದುವೆಯಾಗಿ ಬೇರೆ ಬೇರೆಕಡೆ ವಾಸವಾಗಿದ್ದು ಈ ಮೃತ ದಂಪತಿಗಳು ಮಾತ್ರ ಈ ಮನೆಯಲ್ಲಿದ್ದರು. ಈ ಸಂಬಂಧ ಹುಣಸೂರುಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು ಪೋಲಿಸರು ಮುಂದಿನ ಕ್ರಮಕೈಗೊಂಡಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.