ನಿತ್ಯ-ಸತ್ಯವಾಗಬೇಕು ಮಾನವ-ಪ್ರಕೃತಿಯ ಒಡನಾಟ


Team Udayavani, Jul 5, 2023, 8:05 AM IST

HUMAN- NATURE

ಪ್ರಕೃತಿಯನ್ನು ಮಾತೆಯನ್ನಾಗಿ ಆರಾಧಿಸುತ್ತಾ ಬಂದಿರುವ ಪರಂಪರೆ ನಮ್ಮದು. ಪ್ರಕೃತಿಯಲ್ಲೇ ಹುಟ್ಟಿ ಪ್ರಕೃತಿಯಲ್ಲೇ ಲೀನವಾಗುವ ಎಂಬತ್ತ ನಾಲ್ಕು ಲಕ್ಷ ಜೀವರಾಶಿಯ ಬಾಳು ಅವ್ಯಕ್ತ ವಾದುದು. ಪಂಚಭೂತಗಳಿಂದ ಆವೃತವಾಗಿ ರುವ ಪ್ರಕೃತಿಯ ಹಂಗು-ಋಣದಲ್ಲಿ ಮತ್ತು ಪ್ರಕೃತಿ ಮಾತೆಗೆ ಕೃತಜ್ಞರಾಗಿರಬೇ ಕಾಗಿರುವುದು ಇಲ್ಲಿನ ಜೀವಿಗಳ ಪರಮ ಕರ್ತವ್ಯ. ನಿಸರ್ಗದ ಎಲ್ಲ ಜೀವಿಗಳಲ್ಲಿ ತನ್ನ ಬುದ್ಧಿಮತ್ತೆ, ವಿವೇಚನೆ ಯಿಂದ ಉಳಿದ ಜೀವಿಗಳಿಗಿಂತ ವಿಶಿಷ್ಟ ಮತ್ತು ಭಿನ್ನನಾಗಿರುವ ಮಾನವನ ಪ್ರಕೃತಿಯೊಂದಿಗಿನ ಒಡನಾಟ ಪ್ರಸ್ತುತ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಪ್ರಶ್ನಿಸುವ ಹಂತಕ್ಕೆ ಬಂದು ನಾವಿಂದು ನಿಂತಿದ್ದೇವೆ.

ಪ್ರಕೃತಿಯ ವೈಚಿತ್ರ್ಯ, ಕೊಡುಗೆ ವರ್ಣನೆಗೆ ಸಿಗುವಂತಹುದಲ್ಲ, ಉಪಮೆಗೂ ನಿಲುಕು ವಂತಹುದಲ್ಲ. ಪ್ರಕೃತಿ ಏನು ತಾನೇ ಕೊಟ್ಟಿಲ್ಲ. ವಾಸಿಸಲು ನಿರ್ಮಲ ಭೂಮಿ, ಉಸಿರಾಡಲು ಪರಿಶುದ್ಧ ಗಾಳಿ, ಕುಡಿಯಲು ಶುದ್ಧ ನೀರು, ನಿಸರ್ಗದತ್ತ ಆಹಾರ ವೆೃವಿಧ್ಯ… ಹೀಗೆ ನಾವೆಲ್ಲರೂ ಸಮಗ್ರವಾಗಿ ಬದುಕಲು ಪೂರಕ, ಪ್ರೇರಕವಾದ ಸುಂದರ ವ್ಯವಸ್ಥೆಯನ್ನು ಈ ಪ್ರಕೃತಿ ರೂಪಿಸಿಕೊಟ್ಟಿದೆ. ಇಂಥ ಪ್ರಕೃತಿ ನಮಗೆಲ್ಲರಿಗೂ ಮಾತೃ ಸಮಾನ. ಹಾಗೆಂದು ನಾವು ನಮ್ಮ ನಿಸರ್ಗವನ್ನು ಹಬ್ಬಹರಿದಿನಗಳ ಆಚರಣೆ ಸಂದರ್ಭದಲ್ಲೋ ಪೂಜಿಸುತ್ತೇವೆ ಮತ್ತು ಭಾಷಣದ ಸಂದರ್ಭದಲ್ಲಿ ಅಣಿ ಮುತ್ತುಗಳನ್ನು ಉದುರಿಸುತ್ತಿರುತ್ತೇವೆ. ಆದರೆ ನೈಜವಾಗಿ ನಾವಿಂದು ಪ್ರಕೃತಿಯ ಮೇಲೆ ಸವಾರಿ ಮಾಡುತ್ತಿದ್ದೇವೆ. ಇದರ ಪ್ರತಿಫ‌ಲವನ್ನು ಕೂಡ ಉಣ್ಣುತ್ತಿದ್ದೇವೆ.

ಪ್ರಕೃತಿ ಇಲ್ಲದೆ ಸಕಲ ಜೀವರಾಶಿಗಳ ಜೀವನವಿದೆಯೇ?, ಸಾಧ್ಯವೇ?. ಆದರೆ ದುರಂತವೆಂದರೆ ವಿವೇಚನಾಯುಕ್ತ ಮಾನ ವನೇ ಈ ರಮಣೀಯ ಸೃಷ್ಟಿಯ ನಾಶಕ್ಕೆ ಹೊರಟಿರುವುದು.

ಕ್ಷಮಾಧರಿತ್ರಿ ಎಂದು ಪೂಜಿಸಲ್ಪಡುವ ಭೂಮಾತೆಯನ್ನು ಮಾನವ ದಂಧೆಯಾಗಿ, ಕೊಳಚೆ, ದುರ್ಗಂಧಮಯವನ್ನಾಗಿ ಮಾಡು ವತ್ತ ಹೊರಟಿದ್ದಾನೆ. ನದಿ-ತೊರೆ- ಜಲಾಶಯ-ಸಾಗರಗಳು ಆಧುನಿಕ ಪರಿ ಕರಗಳಿಂದ ತುಂಬಿ ಮಲಿನಗೊಂಡಿವೆ. ಮಾನ ವನ ಆಧುನಿಕ ಮತ್ತು ಯಾಂತ್ರಿಕ ಜೀವನ ಶುದ್ಧ ಗಾಳಿಯನ್ನು ನಮ್ಮಿಂದ ಕಸಿಯುವತ್ತ ಸಾಗುತ್ತಿದೆ. ಸಸ್ಯ ಶ್ಯಾಮಲೆಯ ರಾಶಿ ದುರಾಶೆಗೆ ಬಲಿಯಾಗುತ್ತಿದೆ. ಇತರ ಜೀವರಾಶಿಗಳ ಮೇಲೆ ಮಾನವ ಸವಾರಿಗೈಯ್ಯುತ್ತಿದ್ದಾನೆ… ಹೀಗೆ ಸಮಗ್ರ ಪಂಚಭೂತಗಳ ಪ್ರಕೃತಿ ಮಾನವನ ದುರಹಂಕಾರ, ದುರಾಶೆ, ಮದ, ಆಧುನಿಕ ಜೀವನದ ಭರಾಟೆಗೆ ಬಲಿ ಯಾಗುತ್ತಿದೆ. ಮಾನವನ ಇವೆಲ್ಲ ಘಾತಕ-ವಿಕೃತ ಶಕ್ತಿಗೆ ಪ್ರಕೃತಿ ಮುನಿಸಲಾರಳೇ? ತತ್‌ ಪರಿಣಾಮವೇ ವರ್ತಮಾನಗಳಲ್ಲಿ ಘಟಿಸುವ ಪ್ರಕೃತಿ ವಿಕೋಪದ ಭೀಷಣ ರೂಪಗಳು.

ಸಿರಿವಂತ ರಾಜನೋರ್ವ ಮನಮೋಹಕ ಉದ್ಯಾನವನ ನಿರ್ಮಿಸಿದ್ದ. ಫ‌ಲ ಪುಷ್ಪಗಳ ಸಂದೋಹಗಳ ಈ ಉದ್ಯಾನವನದಲ್ಲಿ ಪಕ್ಷಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಇನ್ನು ಮಕ್ಕಳು ಉದ್ಯಾನದಲ್ಲಿ ಆಟವಾಡಿ ಫ‌ಲಪುಷ್ಪ ಕಿತ್ತುಕೊಂಡು ಹೋಗುತ್ತಿದ್ದರು. ಇದರಿಂದ ವಿಚಲಿತನಾದ ರಾಜ ಸುಂದರ ಉದ್ಯಾನವನ ವನ್ನು ಪಕ್ಷಿಗಳು ಮತ್ತು ಮಕ್ಕಳು ಹಾಳು ಗೆಡವುತ್ತಿದ್ದಾರೆ ಎಂದು ಆಕ್ರೋಶಗೊಂಡು ಯಾರನ್ನು ಉದ್ಯಾನವನಕ್ಕೆ ಬಿಡಬಾರದೆಂದು ಆಜ್ಞಾಪಿಸಿ, ಬೇಲಿ-ತಡೆಗೋಡೆ ನಿರ್ಮಿ ಸುತ್ತಾನೆ. ಕೆಲವೇ ವಾರಗಳಲ್ಲಿ ಉದ್ಯಾನವನ ಯಾರ ಒಡನಾಟ ಇಲ್ಲದೇ ಸೊರಗಲು ಆರಂಭವಾಗುತ್ತದೆ. ಫ‌ಲ-ಪುಷ್ಪಗಳ ಉತ್ಪತ್ತಿಯೇ ನಿಂತು ಬಿಡುತ್ತದೆ. ಉದ್ಯಾನವನ ಬರಡಾಗತೊಡಗುತ್ತದೆ.

ರಾಜ ಈ ಬೆಳವಣಿಗೆಯಿಂದ ನೊಂದು ಬಳಲುತ್ತಾನೆ. ಆತನಿಗೆ ತನ್ನ ತಪ್ಪಿನ ಅರಿವಾ ಗುತ್ತದೆ. ನಿರ್ಬಂಧಗಳನ್ನೆಲ್ಲ ಹಿಂಪಡೆಯಲು ಆದೇಶಿಸುತ್ತಾನೆ. ಉದ್ಯಾನವನಕ್ಕೆ ಮತ್ತೆ ಮಕ್ಕಳು, ಪಕ್ಷಿಗಳೆಲ್ಲ ಬರಲಾರಂಭಿಸಿ ಉದ್ಯಾ ನವನ ಮತ್ತೆ ಹಿಂದಿನಂತೆ ಫ‌ಲ-ಪುಷ್ಪಗಳಿಂದ ಸಮೃದ್ಧವಾಗುತ್ತದೆ. ರಾಜನೂ ಆನಂದ ತುಂದಿಲನಾಗುತ್ತಾನೆ.

ಈ ಕಥೆಯಲ್ಲಿ ಪ್ರಕೃತಿಯ ಜೀವರಾಶಿಯ ನಡುವಿನ ಪ್ರೇಮ ಪಾಠದ ಜತೆಗೆ ಅಹಂಕಾರದ ವರ್ತನೆಗೆ ತಕ್ಕ ಶಾಸ್ತಿಯ ಎಚ್ಚರವೂ ಅಡಕ ವಾಗಿದೆ. ಪ್ರಕೃತಿಯೊಂದಿಗಿನ ಹೊಂದಾ ಣಿಕೆ-ಸಹಜೀವನವನ್ನು ಎತ್ತಿ ಹಿಡಿಯುತ್ತದೆ ಈ ಕಥೆ. ಇಂದು ನಮ್ಮ ಸುತ್ತಮುತ್ತ ಘಟಿಸುವ ಪ್ರಕೃತಿ ಸಂಬಂಧಿತ ಭೂಕುಸಿತ, ಪ್ರವಾಹ, ಕಡಲ ಪ್ರತಾಪ, ಗಾಳಿಯ ಅಬ್ಬರ ಇನ್ನು ಕೆಲವು ನಿಸರ್ಗ ವಿಕೋಪಗಳು ಕಥೆಯಲ್ಲಿನ ರಾಜನ ವರ್ತನೆಯಂತೆ ಮಾನವನ ದುರ್ವರ್ತನೆಯ ಅಟ್ಟಹಾಸದಿಂದಲೇ.

“ಬಹು ಚಿತ್ರ ಜಗತ್ತ ಬಹುದಾಕರಣ ಪರಶಕ್ತಿ ಅನಂತಗುಣ ಪರಮಹ’ ಎಂಬಂತೆ ಪ್ರಕೃತಿ ಮಾತೆಯ ಈ ಮಹಿಮೆಯನ್ನು ಅಂತಃಕರಣ ದಲ್ಲಿರಿಸಿ ನಿಸರ್ಗವನ್ನು ಸ್ವತ್ಛ- ಶುದ್ಧವನ್ನಾಗಿಸಿ, ಒಡನಾಟವನ್ನು ನಿತ್ಯ-ಸತ್ಯವನ್ನಾಗಿರಿಸಿ, ಅನ್ಯ ಜೀವರಾಶಿಗಳತ್ತ ಲಕ್ಷ್ಯವಿರಿಸಿ ಪ್ರಕೃತಿ ಮಾತೆಯನ್ನು ಅರ್ಚಿಸುತ್ತಾ ಆಕೆಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲದ ಪ್ರಕೃತಿ ಮಾತೆಗೆ ಆಭಾರಿಯಾಗಿರೋಣ.

 ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Hubli; CM-DCM issue not to be debated on sidewalks: RB Thimmapura

Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

Sitharama tholpadi

Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ

Gayana

Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.