Duleep Trophy- ಸೆಮಿಫೈನಲ್‌ ಕಾವೇರಪ್ಪ ದಾಳಿಗೆ ಕುಸಿದ ಉತ್ತರ ವಲಯ


Team Udayavani, Jul 6, 2023, 6:48 AM IST

DULEEP KAVERAPPA

ಬೆಂಗಳೂರು: ದುಲೀಪ್‌ ಟ್ರೋಫಿಯ ಸೆಮಿಫೈನಲ್‌ ಹೋರಾಟ ದಲ್ಲಿ ವಿದ್ವತ್‌ ಕಾವೇರಪ್ಪ ಅವರ ದಾಳಿಗೆ ಕುಸಿದ ಉತ್ತರ ವಲಯ ತಂಡವು 198 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ದಕ್ಷಿಣ ವಲಯವೂ ಆರಂಭಿಕ ಆಘಾತ ಅನುಭವಿಸಿದ್ದು ಮೊದಲ ದಿನದಾಟದ ಅಂತ್ಯಕ್ಕೆ 63 ರನ್ನಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದೆ.
ಬಲ್‌ತೇಜ್‌ ಸಿಂಗ್‌ ಮತ್ತು ಹರ್ಷಿತ್‌ ರಾಣ ಅವರ ಬಿಗು ದಾಳಿಗೆ ರನ್‌ ಗಳಿಸಲು ಒದ್ದಾಡಿದ ದಕ್ಷಿಣ ವಲಯವು ನಾಲ್ಕು ವಿಕೆಟನ್ನು ಬೇಗನೇ ಕಳೆದುಕೊಂಡಿದೆ. ಆದರೆ ಮಾಯಾಂಕ್‌ ಅಗರ್ವಾಲ್‌ ಜವಾಬ್ದಾರಿಯಿಂದ ಆಡು ತ್ತಿದ್ದು ತಂಡದ ಆಸರೆಯಾಗಿದ್ದಾರೆ. 37 ರನ್‌ ಗಳಿಸಿ ಅಜೇಯರಾಗಿ ಉಳಿದಿರುವ ಅವರು ಮುರಿಯದ ಐದನೇ ವಿಕೆಟಿಗೆ ತಿಲಕ್‌ ವರ್ಮ ಜತೆ ಈಗಾಗಲೇ 28 ರನ್‌ ಗಳಿಸಿದ್ದಾರೆ.

ಕಾವೇರಪ್ಪ ಬಿಗು ದಾಳಿ
ಮೊದಲು ಬ್ಯಾಟಿಂಗ್‌ ನಡೆಸಿದ ಉತ್ತರ ವಲಯವು ಆರಂಭದಲ್ಲಿಯೇ ಕುಸಿಯಿತು. 18 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡ ತಂಡಕ್ಕೆ ಪ್ರಭ್‌ಸಿಮ್ರಾನ್‌ ಸಿಂಗ್‌ ಮತ್ತು ಅಂಕಿತ್‌ ಕುಮಾರ್‌ ಆಸರೆಯಾದರು. ಪ್ರಭ್‌ಸಿಮ್ರಾನ್‌ 49 ಮತ್ತು ಅಂಕಿತ್‌ 33 ರನ್‌ ಹೊಡೆದರು. ಆ ಬಳಿಕ ಮತ್ತೆ ತಂಡ ಕುಸಿತ ಕಂಡಿತು. ಅಂತಿಮವಾಗಿ 198 ರನ್ನಿಗೆ ಆಲೌಟಾಯಿತು.

ಬಿಗು ದಾಳಿ ಸಂಘಟಿಸಿದ ಕಾವೇರಪ್ಪ ತನ್ನ 17.3 ಓವರ್‌ಗಳ ದಾಳಿಯಲ್ಲಿ ಕೇವಲ 28 ರನ್‌ ನೀಡಿ ಐದು ವಿಕೆಟ್‌ ಉರುಳಿಸಿದರು. ಶಶಿಕಾಂತ್‌ 52 ರನ್ನಿಗೆ 2 ವಿಕೆಟ್‌ ಹಾರಿಸಿದರು.

ಸಂಕ್ಷಿಪ್ತ ಸ್ಕೋರು: ಉತ್ತರ ವಲಯ 198 (ಪ್ರಭ್‌ಸಿಮ್ರಾನ್‌ ಸಿಂಗ್‌ 49, ಅಂಕಿತ್‌ ಕುಮಾರ್‌ 33, ನಿಶಾಂತ್‌ ಸಿಂಧು 27, ಹರ್ಷಿತ್‌ ರಾಣ 31, ಕಾವೇರಪ್ಪ 28ಕ್ಕೆ 5, ಶಶಿಕಾಂತ್‌ 52ಕ್ಕೆ 2); ದಕ್ಷಿಣ ವಲಯ 4 ವಿಕೆಟಿಗೆ 63 (ಮಾಯಾಂಕ್‌ ಅಗರ್ವಾಲ್‌ 37 ಬ್ಯಾಟಿಂಗ್‌, ಬಲ್‌ತೇಜ್‌ ಸಿಂಗ್‌ 21ಕ್ಕೆ 2, ಹರ್ಷಿತ್‌ ರಾಣ 19ಕ್ಕೆ 2).

ಪಶ್ಚಿಮಕ್ಕೆ ಹೊಡೆತ
ಆಲೂರಿನಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಧ್ಯ ವಲಯದ ಬೌಲರ್‌ಗಳು ಬಿಗು ದಾಳಿ ಸಂಘಟಿಸಿ ಪಶ್ಚಿಮ ವಲಯಕ್ಕೆ ಹೊಡೆತ ನೀಡಿದ್ದಾರೆ. ನಾಯಕ ಶಿವಂ ಮವಿ ದಾಳಿಗೆ ಕುಸಿದ ಪಶ್ಚಿಮ ವಲಯವು ದಿನದಾಟದ ಅಂತ್ಯಕ್ಕೆ 216 ರನ್‌ ಗಳಿಸಿದ್ದು 8 ವಿಕೆಟ್‌ ಕಳೆದುಕೊಂಡಿದೆ. ಚೇತೇಶ್ವರ ಪೂಜಾರ, ಸೂರ್ಯಕುಮಾರ್‌ ಯಾದವ್‌, ಪೃಥ್ವಿ ಶಾ ಮತ್ತು ಸರ್ಫ್‌ರಾಜ್‌ ಖಾನ್‌ ತಂಡದಲ್ಲಿದ್ದರೂ ತಂಡ ಬೃಹತ್‌ ಮೊತ್ತ ಪೇರಿಸಲು ವಿಫ‌ಲವಾಯಿತು. ಇವೆರೆಲ್ಲರೂ ದೊಡ್ಡ ಮೊತ್ತ ಪೇರಿಸಲು ಅಸಮರ್ಥರಾದರು. ಆದರೆ ಅತಿತ್‌ ಶೇಥ್‌ ಅವರ 74 ರನ್‌ ನೆರವಿನಿಂದ ಪಶ್ಚಿಮ ಚೇತರಿಸುವಂತಾಯಿತು.

ಸಂಕ್ಷಿಪ್ತ ಸ್ಕೋರು: ಪಶ್ಚಿಮ ವಲಯ 8 ವಿಕೆಟಿಗೆ 216 (ಪೃಥ್ವಿ ಶಾ 28, ಪೂಜಾರ 26, ಸೂರ್ಯಕುಮಾರ್‌ ಯಾದವ್‌ 7, ಅತಿತ್‌ ಶೇಥ್‌ 74, ಶಿವಂ ಮವಿ 43ಕ್ಕೆ 4).

ಟಾಪ್ ನ್ಯೂಸ್

1-satya

Maharashtra; ಬಿಜೆಪಿಯನ್ನು ಅಳಿಸಿ ಹಾಕುತ್ತೇವೆ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

1-aap

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

1-asdsad

Tirupati laddu ಅಪವಿತ್ರ: ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಜಗನ್ ರೆಡ್ಡಿ

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India secures a win against Bangladesh in the chennai test

INDvsBAN; ಅʼಸ್ಪಿನ್‌ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

Duleep trophy

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

Hardik Pandya: ರಣಜಿ ಕ್ರಿಕೆಟ್‌ ಆಡಲು ಹಾರ್ದಿಕ್‌ ಪಾಂಡ್ಯ ಸಿದ್ಧತೆ

Hardik Pandya: ರಣಜಿ ಕ್ರಿಕೆಟ್‌ ಆಡಲು ಹಾರ್ದಿಕ್‌ ಪಾಂಡ್ಯ ಸಿದ್ಧತೆ

Harmanpreet Singh: ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್‌ಪ್ರೀತ್‌ ಹೆಸರು

Harmanpreet Singh: ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್‌ಪ್ರೀತ್‌ ಹೆಸರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-satya

Maharashtra; ಬಿಜೆಪಿಯನ್ನು ಅಳಿಸಿ ಹಾಕುತ್ತೇವೆ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..

DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

1-aap

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

12

Manipal: ಪಾರ್ಕಿಂಗ್‌ ತಾಣವಾಗುತ್ತಿರುವ ಬಸ್‌ ನಿಲ್ದಾಣಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.