Richest beggar; ಈ ವ್ಯಕ್ತಿ ಜಗತ್ತಿನ ಶ್ರೀಮಂತ ಭಿಕ್ಷುಕ…! ತಿಂಗಳ ಆದಾಯ ಎಷ್ಟು ಗೊತ್ತಾ?
ಆಜಾದ್ ಮೈದಾನ್ ಪ್ರದೇಶದಲ್ಲಿ ಭಿಕ್ಷಾಟನೆಯನ್ನೇ ಜೈನ್ ಕಾಯಕವನ್ನಾಗಿ ಮಾಡಿಕೊಂಡಿದ್ದರು.
Team Udayavani, Jul 6, 2023, 2:48 PM IST
ನವದೆಹಲಿ: ಭಿಕ್ಷುಕ ಎಂಬ ಪದ…ತೀವ್ರ ಬಡತನ, ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ವ್ಯಕ್ತಿಗಳ ಚಿತ್ರಣ ನಮ್ಮ ಕಣ್ಣ ಮುಂದೆ ಹಾದುಹೋಗುತ್ತದೆ. ಆದರೆ ಕುತೂಹಲದ ವಿಚಾರವೆಂಬಂತೆ ಕೆಲವರು ಭಿಕ್ಷಾಟನೆಯನ್ನೇ ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡ ವ್ಯಕ್ತಿಗಳಿದ್ದಾರೆ…
ಇದನ್ನೂ ಓದಿ:PM ಯಾರೇ ಆಗಲಿ, ಆದರೆ ಪತ್ನಿ ಇಲ್ಲದೇ ಪ್ರಧಾನಿ ನಿವಾಸದಲ್ಲಿ ಇರಬಾರದು: ಲಾಲು
ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಬಹುತೇಕ ದೇಶದ ಮಹಾನಗರ ಸೇರಿದಂತೆ ಜಿಲ್ಲೆ, ತಾಲೂಕು ಪ್ರದೇಶಗಳಲ್ಲಿಯೂ ಭಿಕ್ಷುಕರು ಇದ್ದೇ ಇರುತ್ತಾರೆ. ಆದರೆ ಮುಂಬೈನಲ್ಲಿ ವಾಸವಾಗಿರುವ ಭರತ್ ಜೈನ್ ಎಂಬಾತ ಜಗತ್ತಿನ ಶ್ರೀಮಂತ ಭಿಕ್ಷುಕ ಎಂಬುದಾಗಿ ತಿಳಿಸಿದೆ.
ಚಿಕ್ಕಂದಿನಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಭರತ್ ಜೈನ್ ಗೆ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲವಾಗಿತ್ತು. ಹೀಗೆ ವಾಣಿಜ್ಯ ನಗರಿ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ಅಥವಾ ಆಜಾದ್ ಮೈದಾನ್ ಪ್ರದೇಶದಲ್ಲಿ ಭಿಕ್ಷಾಟನೆಯನ್ನೇ ಜೈನ್ ಕಾಯಕವನ್ನಾಗಿ ಮಾಡಿಕೊಂಡಿದ್ದರು.
ವಾಣಿಜ್ಯ ನಗರಿಯಲ್ಲಿ ಭಿಕ್ಷಾಟನೆ ನಡೆಸಿ ಜೀವನ ಸಾಗಿಸಿರುವ ಭರತ್ ಜೈನ್ ಒಟ್ಟು 7.5 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯ. ಜೈನ್ ಭಿಕ್ಷಾಟನೆ ಮೂಲಕ ತಿಂಗಳಿಗೆ ಸಂಪಾದಿಸುವ ಹಣದ ಮೊತ್ತ 60,000 ರಿಂದ 75 ಸಾವಿರ ರೂಪಾಯಿ ಎಂದು ವರದಿ ವಿವರಿಸಿದೆ.
ವಿವಾಹಿತರಾಗಿರುವ ಜೈನ್ ಗೆ ಇಬ್ಬರು ಮಕ್ಕಳು. ತನಗೆ ಚಿಕ್ಕಂದಿನಲ್ಲಿ ವಿದ್ಯೆ ಕಲಿಯಲು ಸಾಧ್ಯವಾಗದಿರುವುದಕ್ಕೆ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ವರದಿಯ ಪ್ರಕಾರ, ಭರತ್ ಜೈನ್ ಮುಂಬೈನಲ್ಲಿ 1.4 ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟ್ ಹೊಂದಿದ್ದಾರೆ. ಜೊತೆಗೆ ಥಾಣೆಯಲ್ಲಿ ಎರಡು ಅಂಗಡಿ ಕೋಣೆ ಇದ್ದು, ತಿಂಗಳಿಗೆ 30,000 ಸಾವಿರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ. ಭರತ್ ಮುಂಬೈನ ಪರೇಲ್ ನಲ್ಲಿ ವಾಸವಾಗಿದ್ದು, ಕುಟುಂಬದ ಇತರ ಸದಸ್ಯರು ಸ್ಟೇಶನರಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.