ನವವೃಂದಾವನಗಡ್ಡಿ: ಶ್ರೀಜಯತೀರ್ಥರ ಉತ್ತರರಾಧನೆ; ಶ್ರದ್ಧಾ ಭಕ್ತಿಯಿಂದ ಆಚರಣೆ

ಪೊಲೀಸ್ ಸರ್ಪಗಾವಲು ಹಾಕುವುದು ಸರಿಯಲ್ಲ: ಮಂತ್ರಾಲಯ ಶ್ರೀ ಬೇಸರ

Team Udayavani, Jul 8, 2023, 7:59 PM IST

1-wwq-ewq

ಗಂಗಾವತಿ: ಇತಿಹಾಸ ಪ್ರಸಿದ್ಧ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿ ಶ್ರೀಜಯತೀರ್ಥರ ಆರಾಧನಾ ಮಹೋತ್ಸವದ ನಿಮಿತ್ತ ಶನಿವಾರ ಬೆಳ್ಳಿಗ್ಗೆ ಉತ್ತರರಾಧನೆ ಮಂತ್ರಾಲಯದ ಪೀಠಾಧಿಪತಿ ಪೂಜ್ಯ ಸುಭುದೇಂದ್ರತೀರ್ಥ ಶ್ರೀಪಾದಂಗಳ ನೇತೃತ್ವದಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಜರುಗಿತು.

ಶ್ರೀಜಯತೀರ್ಥರ ವೃಂದಾವನಕ್ಕೆ ಬೆಳ್ಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತಾಭಿಷೇಕ, ಸರ್ವಪುಷ್ಪಗಳ ಅಲಂಕಾರ, ಬೆಳ್ಳಿ ಕವಚ ಹಾಗೂ ನಾಣ್ಯಗಳು, ರೇಶ್ಮೆ ವಸ್ತçದಿಂದ ಸರ್ವಾಲಂಕಾರ ಮಾಡಲಾಗಿತ್ತು. ಪೂಜ್ಯ ಸುಭುದೇಂದ್ರತೀರ್ಥ ಶ್ರೀಪಾದಂಗಳು ಶ್ರೀಜಯತೀರ್ಥರ ವೃಂದಾವನ ಸೇರಿದಂತೆ ೯ ಯತಿಗಳ ವೃಂದಾನಕ್ಕೆ ಪೂಜೆ ಮಹಾಮಂಗಳಾರತಿ ಮಾಡಿದರು. ಇದಕ್ಕೂ ಮುಂಚೆ ಮಂತ್ರಾಲಯ ಮಠದ ಪಂಡಿತ ಬಂಡಿ ಶಾಮಾಚಾರ್ ಮತ್ತು ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳು ಶ್ರೀಮನ್ ನ್ಯಾಯಸುಧಾ ಕುರಿತು ಉಪನ್ಯಾಸ ನೀಡಿದರು.ನಂತರ ಪೂಜ್ಯ ಸುಭುದೇಂದ್ರತೀರ್ಥ ಶ್ರೀಪಾದಗಳು ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಡಾ.ಎನ್.ವಾದಿರಾಜಾಚಾರ್, ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ, ಸುಮಂತಕುಲಕರ್ಣಿ, ದ್ವಾರಪಾಲಕ ಅನಂತಪುರಾಣಿಕ,ರಾಜಾ ಪಿ.ಅಪ್ರಮಯಾಚಾರ್, ಸಂಜೀವ್ ಇಡಪನೂರು, ವೆಂಕಟೇಶಚಾರ್, ಸಾಮವೀರ ಗುರಾಚಾರ್, ರಾಮಕೃಷ್ಣ ಜಾಗೀರದಾರ್, ಢಣಾಪೂರ ಶ್ರೀನಿವಾಸ, ಢಣಾಪೂರ ವಿಜಯ್, ಗೋಪಾಲರಾವ್ ಹೇರೂರು, ನವಲಿ ಪ್ರಲ್ಹಾದರ್, ಹನುಮೇಶ ಅಯೋಧ್ಯೆ, ಜಗನ್ನಾಥ ದಾಸ ಮುಕ್ತೆದಾರ್, ಅಪ್ಪಣ್ಣ ದೇಶಪಾಂಡೆ, ಉದಯ ಜಾಗೀರದಾರ್, ವ್ಯಾಸರಾಜಮಠದ ರಘು ಸೋಸಲೆ, ಸಮೀರ್ ಆಚಾರ್, ಸಾಮವೀರ ಗುರಾಚಾರ್, ರಾಮಕೃಷ್ಣ ಜಾಗೀರದಾರ್ ಸೇರಿ ಅನೇಕರಿದ್ದರು.

ಜೋಡು ರಥೋತ್ಸವ ಕಳೆ ಕಟ್ಟಿದ ಸಂಭ್ರಮ

ಶ್ರೀಜಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಈ ಭಾರಿ ಜೋಡು ರಥೋತ್ಸವ ಎಳೆಯುವ ಮೂಲಕ ಭಕ್ತರು ಸಂಭ್ರಮಪಟ್ಟರು. ಮಹಾರಥಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ನವವೃಂದಾವನಗಡ್ಡಿಯ 9 ಯತಿಗಳ ಸುತ್ತ ಜಯಘೋಷಗಳನ್ನು ಕೂಗಿ ಜೋಡುರಥಗಳನ್ನು ಎಳೆಯಲಾಯಿತು. ಒಂದು ರಥದಲ್ಲಿ ಶ್ರೀಜಯತೀರ್ಥ ಯತಿಗಳ ಗ್ರಂಥಗಳು ಮತ್ತೊಂದು ರಥದಲ್ಲಿ ಶ್ರೀಜಯತೀರ್ಥರ ವಿಗ್ರಹ ಇಟ್ಟು ರಥೋತ್ಸವ ನಡೆಸಲಾಯಿತು.

ಪೊಲೀಸ್ ಸರ್ಪಗಾವಲು ಹಾಕುವುದು ಸರಿಯಲ್ಲ
ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ಶ್ರೀಪಾದಂಗಳು ಮಾತನಾಡಿ, ಮಾಧ್ವ ಸಮಾಜ ಸೇರಿ ಇಡೀ ಸಮಾಜಕ್ಕೆ ಪೂಜ್ಯ ಶ್ರೀ ಜಯತೀರ್ಥರ ಕೊಡುಗೆ ಅಪಾರವಾಗಿದೆ. ನೂರಾರು ವರ್ಷಗಳಿಂದ ಆನೆಗೊಂದಿಯ ನವವೃಂದಾವನಡ್ಡಿಯಲ್ಲಿ ನೆಲೆಸಿರುವ ಶ್ರೀಜಯತೀರ್ಥರ ವೃಂದಾವನಕ್ಕೆ ಪೂಜೆ ಪುನಸ್ಕಾರಗಳನ್ನು ಮಂತ್ರಾಲಯ ಮಠ ಸೇರಿ ಇತರೆ ಮಠದವರು ಮಾಡುತ್ತಿದ್ದಾರೆ. ನಾವು ಚಿಕ್ಕಂದಿನಲ್ಲಿರುವಾಗ ಗಡ್ಡಿಯಲ್ಲಿ ಜಯತೀರ್ಥರ ಆರಾಧನೆ ಸಂದರ್ಭದಲ್ಲಿ ರಥೋತ್ಸವ ಜರುಗುತ್ತಿತ್ತು. ಕಳೆದ ವರ್ಷ ನೆರೆ ಹಾವಳಿ ಮತ್ತು ಇನ್ನೊಂದು ಮಠದವರ ಆಕ್ಷೇಪದಿಂದ ಕರ್ಪ್ಯೂ ವೀಧಿಸಿದ್ದರಿಂದ ಜಯತೀರ್ಥರ ಆರಾಧನೆಯನ್ನು ಆನೆಗೊಂದಿ ಮಠ ಸೇರಿ ನಾಡಿನಾದ್ಯಂತ ಶ್ರೀರಾಘವೇಂದ್ರ ಮಠದಲ್ಲಿ ಮತ್ತು ಭಕ್ತರ ಮನೆಗಳಲ್ಲಿ ಆಚರಣೆ ಮಾಡಲಾಗಿತ್ತು. ಜಯತೀರ್ಥರ ಆರಾಧನೆಯನ್ನು ಅವರ ಸರ್ವ ಅನುಯಾಯಿಗಳು ಆಚರಣೆ ಮಾಡಲು ಮಂತ್ರಾಲಯ ಮಠ ಆಕ್ಷೇಪವಿಲ್ಲ. ಗ್ರಂಥ ಮತ್ತು ಪ್ರಮಾಣಗಳಲ್ಲಿ ತಿಳಿಸಿರುವಂತೆ ಶ್ರೀಜಯತೀರ್ಥ ಮೂಲವೃಂದಾವನ ಆನೆಗೊಂದಿಯ ನವವೃಂದಾವನದಲ್ಲಿದೆ. ಈ ಕಾರಣಕ್ಕಾಗಿಯೇ ಗೌರವಾನ್ವಿತ ಉಚ್ಚನ್ಯಾಯಾಲಯ ಮಂತ್ರಾಲಯಮಠಕ್ಕೆ ಆರಾಧನೆ ಮಾಡುವ ಅವಕಾಶ ಕಲ್ಪಿಸಿದೆ. ಯಾವುದೇ ಆಶಾಂತಿಯ ವಾತಾವರಣವಿರದಿದ್ದರೂ ಪೊಲೀಸ್ ಇಲಾಖೆ ಭದ್ರತೆ ನೆಪದಲ್ಲಿ ಪೊಲೀಸ್ ಸರ್ಪಗಾವಲು ಹಾಕುವುದು ಸರಿಯಲ್ಲ. ಇತ್ತೀಚಿನ ವರ್ಷಗಳಲ್ಲಿ ಅನಪೇಕ್ಷೀತವಾಗಿ ಪೊಲೀಸ್ ಮಧ್ಯ ಪ್ರವೇಶವಾಗುತ್ತಿದೆ ಎಂದರು.

ಟಾಪ್ ನ್ಯೂಸ್

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ

Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.