Bawaal trailer out: ʼಬವಾಲ್ʼ ಇದು ವೈಮನಸ್ಸುಗಳ ಅಂತರ್ಯುದ್ಧ; ಟ್ರೇಲರ್ ರಿಲೀಸ್
Team Udayavani, Jul 9, 2023, 5:15 PM IST
ಮುಂಬಯಿ: ವರುಣ್ ಧವನ್ – ಜಾಹ್ನವಿ ಕಪೂರ್ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ʼಬವಾಲ್ʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ದುಬೈಯಲ್ಲಿ ಸಿನಿಮಾ ತಂಡ ಟ್ರೇಲರ್ ರಿಲೀಸ್ ಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಸಿನಿಮಾದಲ್ಲಿ ನಟಿಸಿರುವ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಹಾಗೂ ಇತರ ಕಲಾವಿದರ ಸಮ್ಮುಖದಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಈಗಾಗಲೇ ಬಾಲಿವುಡ್ ನಲ್ಲಿ ʼ ದಂಗಲ್ʼ, ʼಚಿಚೋರೆʼಯಂತಹ ಹಿಟ್ ಚಿತ್ರಗಳನ್ನು ನೀಡಿರುವ ನಿತೇಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಗೊಂದು ಕಾರಣವಾಗಿದೆ.
ಹಿಸ್ಟರಿ ಟೀಚರ್ ಆಗಿರುವ ವರುಣ್ ಧವನ್ ಶಾಲಾ ಮಕ್ಕಳಿಗೆ ಇತಿಹಾಸದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುವವರಾಗಿದ್ದಾರೆ. ಜಾಹ್ನವಿ ಕಪೂರ್ ಹಾಗೂ ನಾಯಕ ನಟ ವರುಣ್ ಧವನ್ ಇಟಲಿಗೆ ಶಿಫ್ಟ್ ಆಗುತ್ತಾರೆ. ಅಲ್ಲಿಂದಲೇ ಸಿನಿಮಾ ʼಬವಾಲ್ʼ ಆಗುತ್ತದೆ. ಹುಡುಗಿ ಹಿಂದೆ ಬೀಳುವ ಹುಡುಗ, ಸಂಬಂಧವನ್ನು ಉಳಿಸಲು ಯತ್ನಿಸಿ ಭಾವನೆಗಳೊಂದಿಗೆ ಹೋರಾಡುವ ನಾಯಕ- ನಾಯಕಿಯ ಪಾತ್ರದ ಝಲಕ್ ನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಟಲಿಯಲ್ಲಿ ನಡೆದ ಗ್ಯಾಸ್ ಚೇಂಬರ್ ನರಮೇಧದ ಸುತ್ತ ಈ ಸಿನಿಮಾದ ಕಥೆ ಇರಬಹುದು ಎನ್ನಲಾಗಿದೆ. ಇಲ್ಲೊಂದು ಪ್ರೇಮ ಕಥೆಯ ಮೂಲಕ ಇದನ್ನು ನಿರ್ದೇಶಕರು ಹೇಳಿರಬಹುದು ಎಂದು ಹೇಳಲಾಗುತ್ತಿದೆ.
ಇದು ಹೌದೋ ಅಲ್ವೋ ಎನ್ನುವುದನ್ನು ನೋಡಲು ಜು.21 ರವರೆಗೆ ಕಾದು ನೋಡಬೇಕಿದೆ. ಸಿನಿಮಾ ನೇರವಾಗಿ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಲಿದೆ.
ʼಬವಾಲ್’ ಪ್ಯಾರಿಸ್ನ ಐಕಾನಿಕ್ ಸಲ್ಲೆ ಗುಸ್ಟಾವ್-ಐಫೆಲ್ ಥಿಯೇಟರ್ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಸ್ಥಳದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
pyaar se bawaal tak ka ek safar! 💙
produced by #SajidNadiadwala and directed by @niteshtiwari22#BawaalOnPrime, July 21
trailer out now@Varun_dvn #JanhviKapoor @ashwinyiyer @WardaNadiadwala @NGEMovies @earthskynotes #PiyushGupta #ShreyasJain #NikhilMehrotra @TSeries pic.twitter.com/IIgNRAIKoh— prime video IN (@PrimeVideoIN) July 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: 8 ವರ್ಷದ ಬಳಿಕ ಬಾಲಿವುಡ್ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್
ಜಪಾನ್ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…
700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ
MUST WATCH
ಹೊಸ ಸೇರ್ಪಡೆ
State Government ವ್ಯಾಜ್ಯಮುಕ್ತ ಗ್ರಾಮ: ಸರಕಾರದ ವಿನೂತನ ಚಿಂತನೆ
Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!
Renukaswamy ಶವ ಸಾಗಣೆ: ಬ್ಲೂ ಪ್ರಿಂಟ್ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ
Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್ಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.